ಹಸಿದ ನರಿ ಮತ್ತು ಅಸಮಾಧಾನಗೊಂಡ ಸಿದ್ದರಾಮಯ್ಯ ತೀರಾ ಅಪಾಯಕಾರಿ: ಡಿಕೆಶಿಗೆ ಬಿಜೆಪಿ ಎಚ್ಚರಿಕೆ

ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಪರಮಾಪ್ತರ ಜೊತೆಗೆ ಬೋಟಿಂಗ್ ನಡೆಸಿರುವ ವಿಡಿಯೋವೊಂದ ಸೋಷಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗಿದೆ.

Written by - Zee Kannada News Desk | Last Updated : Feb 1, 2022, 03:11 PM IST
  • ಡಿ.ಕೆ.ಶಿವಕುಮಾರ್ ಅವರೇ ಹಸಿದ ನರಿ ಮತ್ತು ಅಸಮಾಧಾನಗೊಂಡ ಸಿದ್ದರಾಮಯ್ಯ ತೀರಾ ಅಪಾಯಕಾರಿ
  • ಸ್ನೇಹಿತರ ಜೊತೆ ರೆಸಾರ್ಟ್ ಸೇರಿರುವ ಸಿದ್ದರಾಮಯ್ಯ ನಿಮ್ಮ ಬುಡಕ್ಕೆ ಬೆಂಕಿ‌ ಇಡುವುದರಲ್ಲಿ ಅನುಮಾನವೇ ಇಲ್ಲ
  • ಸಿದ್ದರಾಮಯ್ಯ ಜಲಕ್ರೀಡೆ, ವನವಿಹಾರದಲ್ಲಿ ಮಗ್ನರಾದರೂ ಅವರ ಪ್ರಜ್ಞೆ ಮಾತ್ರ ಕೆಪಿಸಿಸಿ ಕಚೇರಿ ಸುತ್ತಲೇ ಓಡಾಡುತ್ತಿದೆ
ಹಸಿದ ನರಿ ಮತ್ತು ಅಸಮಾಧಾನಗೊಂಡ ಸಿದ್ದರಾಮಯ್ಯ ತೀರಾ ಅಪಾಯಕಾರಿ: ಡಿಕೆಶಿಗೆ ಬಿಜೆಪಿ ಎಚ್ಚರಿಕೆ title=
ಡಿ.ಕೆ.ಶಿವಕುಮಾರ್ ಗೆ ಬಿಜೆಪಿ ಎಚ್ಚರಿಕೆ ಸಂದೇಶ

ಬೆಂಗಳೂರು: ಹಸಿದ ನರಿ ಮತ್ತು ಅಸಮಾಧಾನಗೊಂಡ ಸಿದ್ದರಾಮಯ್ಯ(Siddaramaiah) ತೀರಾ ಅಪಾಯಕಾರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಬಿಜೆಪಿ ಎಚ್ಚರಿಕೆ ನೀಡಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಪರಮಾಪ್ತರ ಟೀಂ ಜೊತೆಗೆ ಬೋಟಿಂಗ್ ಹೋಗಿರುವ ವರದಿಯನ್ನು ಉಲ್ಲೇಖಿಸಿ ಬಿಜೆಪಿ ಟ್ವೀಟ್ ಮಾಡಿದೆ.

#ಕಾಂಗ್ರೆಸ್‌ಕಲಹ ಹ್ಯಾಶ್ ಟ್ಯಾಗ್ ಬಳಸಿರುವ ಬಿಜೆಪಿ, ‘ಡಿ.ಕೆ.ಶಿವಕುಮಾರ್(DK Shivakumar) ಅವರೇ ಹಸಿದ ನರಿ ಮತ್ತು ಅಸಮಾಧಾನಗೊಂಡ ಸಿದ್ದರಾಮಯ್ಯ ತೀರಾ ಅಪಾಯಕಾರಿ. ಅಸಮಾಧಾನಗೊಂಡು ಸ್ನೇಹಿತರ ಜೊತೆ ರೆಸಾರ್ಟ್ ಸೇರಿರುವ ಸಿದ್ದರಾಮಯ್ಯನವರು ನಿಮ್ಮ ಬುಡಕ್ಕೆ ಬೆಂಕಿ‌ ಇಡುವುದರಲ್ಲಿ ಅನುಮಾನವೇ ಇಲ್ಲ’ ಅಂತಾ ಎಚ್ಚರಿಕೆ ಸಂದೇಶವನ್ನು ನೀಡಿದೆ.

ಇದನ್ನೂ ಓದಿ: Anand Singh : ಡಿಕೆಶಿ ಅವರ ಮನೆಗೆ ನಾನು ಹೋಗಬಾರದಾ? : ಸಚಿವ ಆನಂದ್ ಸಿಂಗ್

‘ಸಿದ್ದರಾಮಯ್ಯ ಅವರು ಜಲಕ್ರೀಡೆ, ವನವಿಹಾರದಲ್ಲಿ ಮಗ್ನರಾಗಿದ್ದರೂ ಅವರ ಪ್ರಜ್ಞೆ ಮಾತ್ರ ಕೆಪಿಸಿಸಿ ಕಚೇರಿಯ ಸುತ್ತಲೇ ಓಡಾಡುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಅವರ ವೇಗಕ್ಕೆ ತಡಡಹಾಕುವ ತಂತ್ರಗಾರಿಕೆ ಇಲ್ಲಿ ನಡೆಯುತ್ತಿರಬಹುದು’ ಅಂತಾ ಬಿಜೆಪಿ ಕುಟುಕಿದೆ.

ಸಿದ್ದರಾಮಯ್ಯ ಬೋಟಿಂಗ್ ವಿಡಿಯೋ ವೈರಲ್

ಈ ಮಧ್ಯೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಪರಮಾಪ್ತರ ಜೊತೆಗೆ ಬೋಟಿಂಗ್ ನಡೆಸಿರುವ ವಿಡಿಯೋವೊಂದ ಸೋಷಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನಿಟ್ಟುಕೊಂಡೇ ಬಿಜೆಪಿ ಡಿಕೆಶಿ ಕಾಲೆಳೆದಿದೆ. ಕಳೆದೆರಡು ದಿನಗಳಿಂದ ಮೈಸೂರು ಜಿಲ್ಲೆ ಎಚ್.ಡಿ.ಕೋಟೆಯ ಕಬಿನಿ ಹಿನ್ನಿರಿನಲ್ಲಿರುವ ರೆಸಾರ್ಟ್(Resort Politics)ವೊಂದರಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಿದ್ದರಾಮಯ್ಯ ತಮ್ಮ ಆಪ್ತರ ಜೊತೆಗೆ ಬೋಟಿಂಗ್ ಹೋಗಿದ್ದಾರಂತೆ.  

ಇದನ್ನೂ ಓದಿ: DK Suresh : ಪಠ್ಯಪುಸ್ತಕದಲ್ಲಿ ಮಲಯಾಳಂ ಚಿತ್ರನಟ : ರಾಜ್ಯ ಸರ್ಕಾರ ತರಾಟೆಗೆ ತೆಗೆದುಕೊಂಡ ಎಂಪಿ ಡಿಕೆ ಸುರೇಶ್ 

ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ(HC Mahadevappa), ಪಿರಿಯಾಪಟ್ಟಣ ವೆಂಕಟೇಶ್, ಶಾಸಕರಾದ ಎಚ್.ಪಿ.ಮಂಜುನಾಥ್, ಅನಿಲ್ ಚಿಕ್ಕಮಾದು ಸೇರಿದಂತೆ ಕೆಲ ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯರ ಜೊತೆ ಬೋಟಿಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News