ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಮತ್ತೊಂದು ಸುರಂಗ ಮಾರ್ಗ ಪತ್ತೆ!

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮತ್ತೊಂದು ಸುರಂಗ ಮಾರ್ಗ ಪತ್ತೆಯಾಗಿದೆ. ಪಟ್ಟಣದ ಜಾಮೀಯಾ ಮಸೀದಿ ಹಿಂಭಾಗದ ಖಾಲಿ ಜಾಗದಲ್ಲಿ ಈ ಸುರಂಗ ಮಾರ್ಗ ಪತ್ತೆಯಾಗಿದೆ.

Written by - Zee Kannada News Desk | Last Updated : Sep 10, 2022, 10:43 AM IST
  • ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮತ್ತೊಂದು ಸುರಂಗ ಮಾರ್ಗ ಪತ್ತೆ
  • ಜಾಮೀಯಾ ಮಸೀದಿ ಹಿಂಭಾಗದ ಖಾಲಿ ಜಾಗದಲ್ಲಿ ಸುರಂಗ ಮಾರ್ಗ ಪತ್ತೆ
  • ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿದ‌ ಪುರಾತತ್ವ ಇಲಾಖೆ ಅಧಿಕಾರಿಗಳು
ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಮತ್ತೊಂದು ಸುರಂಗ ಮಾರ್ಗ ಪತ್ತೆ! title=
ಶ್ರೀರಂಗಪಟ್ಟಣದಲ್ಲಿ ಸುರಂಗ ಮಾರ್ಗ ಪತ್ತೆ

ಮಂಡ್ಯ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮತ್ತೊಂದು ಸುರಂಗ ಮಾರ್ಗ ಪತ್ತೆಯಾಗಿದೆ. ಪಟ್ಟಣದ ಜಾಮೀಯಾ ಮಸೀದಿ ಹಿಂಭಾಗದ ಖಾಲಿ ಜಾಗದಲ್ಲಿ ಈ ಸುರಂಗ ಮಾರ್ಗ ಪತ್ತೆಯಾಗಿದೆ.

ಈ ಹಿಂದೆಯೂ ಕೂಡ ಶ್ರೀರಂಗಪಟ್ಟಣದ ಹಲವು ಕಡೆ ಹಲವು ಸುರಂಗ‌ ಮಾರ್ಗಗಳು ಪತ್ತೆಯಾಗಿದ್ದವು. ಕಟ್ಟಡ ಕಾಮಗಾರಿ ನಡೆಸುವ ವೇಳೆ ಸ್ಥಳದಲ್ಲಿ ಇದೀಗ ಮತ್ತೊಂದು ಸುರಂಗ ಮಾರ್ಗ ಪತ್ತೆಯಾಗಿದೆ.

ಇದನ್ನೂ ಓದಿ: Karnataka ACB : ರಾಜ್ಯ ಸರ್ಕಾರದಿಂದ 'ಎಸಿಬಿ' ರದ್ದುಗೊಳಿಸಿ ಅಧಿಕೃತ ಅಧಿಸೂಚನೆ!

ಸದ್ಯ ಜಾಗದ ಮಾಲೀಕರು ಕಲ್ಲುಗಳನ್ನು ಹಾಕಿ ಸುರಂಗ ಮಾರ್ಗವನ್ನು ಬಂದ್ ಮಾಡಿದ್ದಾರೆ. ಹೊಸ ಸುರಂಗ ಮಾರ್ಗ ಪತ್ತೆಯಾಗಿರುವ ಸುದ್ದಿ‌ ತಿಳಿದು ಜನರಲ್ಲಿ ಕುತೂಹಲ ಮೂಡಿದೆ. ಹೀಗಾಗಿ ನೂರಾರು ಜನರು ಸ್ಥಳಕ್ಕೆ ಭೇಟಿ ನೀಡಿ ಸುರಂಗವನ್ನು ವೀಕ್ಷಿಸುತ್ತಿದ್ದಾರೆ.

ಹಿಂದಿನ ಕಾಲದಲ್ಲಿ ರಾಜರು ಸಂಕಷ್ಟದ ಸಮಯದಲ್ಲಿ ಈ ಸುರಂಗ ಮಾರ್ಗಗಳನ್ನು ಬಳಸಲಾಗುತ್ತಿತ್ತು ಎನ್ನಲಾಗಿದೆ. ಸುರಂಗ ಮಾರ್ಗ ಪತ್ತೆಯಾದ ಸ್ಥಳಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳ ಭೇಟಿ ನೀಡಿದ್ದು, ಪರೀಶೀಲನೆ‌ ನಡೆಸಿದ್ದಾರೆ.

ಇದನ್ನೂ ಓದಿ: 14 ವರ್ಷದ ಬಾಲಕಿಯನ್ನು ಮದುವೆಯಾಗಿದ್ದ ಅಂಕಲ್ ಅರೆಸ್ಟ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News