ಅನಂತಕುಮಾರ್ ಹೆಗಡೆ ಕ್ಷಮೆಗೆ ಅನರ್ಹ ವ್ಯಕ್ತಿ : ಸಚಿವ ತನ್ವೀರ್ ಸೇಠ್

ಗಾಜಿನ ಮನೆಗೆ ಕಲ್ಲು ಎಸೆದು ಈಗ ಕ್ಷೇಮಯಾಚನೆ ಮಾಡುತ್ತಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಕ್ಷಮೆಗೆ ಅನರ್ಹರಾದ ವ್ಯಕ್ತಿ ಎಂದು ಸಚಿವ ತನ್ವೀರ್ ಸೇಠ್ ಕಿಡಿಕಾರಿದರು.

Last Updated : Dec 28, 2017, 06:53 PM IST
ಅನಂತಕುಮಾರ್ ಹೆಗಡೆ ಕ್ಷಮೆಗೆ ಅನರ್ಹ ವ್ಯಕ್ತಿ : ಸಚಿವ ತನ್ವೀರ್ ಸೇಠ್ title=

ರಾಯಚೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜವಾಬ್ದಾರಿ ಸ್ಥಾನದಲ್ಲಿ ಇರುವವರು ನಾಲಿಗೆಯನ್ನ ಬಿಗಿ ಹಿಡಿದು ಮಾತನಾಡಬೇಕು. ಅದನ್ನು ಮರೆತು ಮಾತನಾಡಿರುವ ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಕ್ಷಮೆಗೆ ಅನರ್ಹ ವ್ಯಕ್ತಿ ಎಂದು ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಜಿನ ಮನೆಗೆ ಕಲ್ಲು ಎಸೆದು ಈಗ ಕ್ಷೇಮಯಾಚನೆ ಮಾಡುತ್ತಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಕ್ಷಮೆಗೆ ಅನರ್ಹರಾದ ವ್ಯಕ್ತಿ ಎಂದು ಕಿಡಿಕಾರಿದರು.
 
ಇನ್ನು ಮುಂಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೇತ್ರ ಬದಲಾವಣೆ ವಿಚಾರವಾಗಿ ಮಾತನಾಡಿದ ತನ್ವೀರ್‌ ಸೇಠ್‌, ಸಿದ್ದರಾಮಯ್ಯ ಅತ್ಯಂತ ಜನಪ್ರಿಯ ವ್ಯಕ್ತಿ. ಅವರು ರಾಜ್ಯದ ಯಾವುದೇ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಬಹುದು. ಅದಕ್ಕೆ ವಿರೋಧ ವ್ಯಕ್ತಪಡಿಸುವ ಹಕ್ಕು ಯಾರಿಗೂ ಇಲ್ಲ ಎಂದರು. 

ಮಹದಾಯಿ ವಿಚಾರದಲ್ಲಿ ಬಿಜೆಪಿಯವರು ನೀರಿಗೆ ವಿಷ ಬೆರೆಸುವ ಕೆಲಸ ಮಾಡುತ್ತಿದ್ದಾರೆ. ನೀರಿನ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

Trending News