ಅನಂತ್‌ಕುಮಾರ್ ಹೆಗ್ಡೆ ಒಬ್ಬ ನೀಚ- ಆನಂದ್ ಅಸ್ನೋಟಿಕರ್

ಹುಬ್ಬಳ್ಳಿಯಲ್ಲಿ ಯಾರೋ ಹಾರಿಸಿದ್ದ ಧ್ವಜವನ್ನ ತಾನೇ ಹಾರಿಸಿದ್ದು ಎಂದು ಹೇಳಿದ್ದಲ್ಲದೆ RSS​​ನಲ್ಲಿ ಅದು ಮಾಡಿದ್ದೀನಿ, ಇದು ಮಾಡಿದ್ದೀನಿ ಅಂತ ಕೊಚ್ಕೊಳ್ತಾನೆ- ಮಾಜಿ ಸಚಿವ ಆನಂದ್ ಅಸ್ನೋಟಿಕರ್

Last Updated : Jun 30, 2018, 03:38 PM IST
ಅನಂತ್‌ಕುಮಾರ್ ಹೆಗ್ಡೆ ಒಬ್ಬ ನೀಚ- ಆನಂದ್ ಅಸ್ನೋಟಿಕರ್ title=

ಕಾರವಾರ: ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗ್ಡೆ ಅವರನ್ನು ಒಬ್ಬ ನೀಚ... ಲೋ...ಎಂದು ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್, ಹೆಗ್ಡೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆನಂದ್ ಅಸ್ನೋಟಿಕರ್ ನೀಚ ಎಂದು ಜರಿದರಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಹುಬ್ಬಳ್ಳಿಯಲ್ಲಿ ಯಾರೋ ಹಾರಿಸಿದ್ದ ಧ್ವಜವನ್ನ ತಾನೇ ಹಾರಿಸಿದ್ದು ಎಂದು ಹೇಳಿದ್ದಲ್ಲದೆ RSS ​​ನಲ್ಲಿ ಅದು ಮಾಡಿದ್ದೀನಿ, ಇದು ಮಾಡಿದ್ದೀನಿ ಅಂತ ಕೊಚ್ಕೊಳ್ತಾನೆ. ಅನಂತಕುಮಾರ್ ಎಲ್ಲರಿಗೂ ಹೊಡೆದಿದ್ದಾನೆ. ಸ್ವತಃ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾನೆ. ಡಾಕ್ಟರಿಗೆ ಹೊಡೆದಿದ್ದಾನೆ. ಆ ಲೋ... ಬಗ್ಗೆ ನಾನು ಮಾತನಾಡಬಾರದು ಎಂದರು.

Trending News