ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯಪಾಲರ ಅಧಿಕೃತ ನಿವಾಸವಾದ ರಾಜ್ ಭವನದಲ್ಲಿ ಇಂದು ಗವರ್ನರ್ ಜಗದೀಪ್ ಧಂಕರ್ ಅವರನ್ನು ಒಂದು ಗಂಟೆ ಭೇಟಿಯಾದರು.
ಸಭೆಯ ನಂತರ, ರಾಜ್ಯಪಾಲರು "ನಾನು ಮತ್ತು ಶ್ರೀಮತಿ ಸುದೇಶ್ ಧಂಕರ್ ಅವರು ಇಂದು ಗೌರವಾನ್ವಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ರಾಜ್ ಭವನಕ್ಕೆ ಭೇಟಿ ನೀಡಿದಾಗ ಸ್ವಾಗತಿಸಿದೆವು" ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಸರ್ಕಾರ ಕಾನೂನಿನಿಂದ ಅಂತರ ಕಾಯ್ದುಕೊಳ್ಳುತ್ತಿದೆ- ರಾಜ್ಯಪಾಲ್ ಜಗದೀಪ್ ಧಂಕರ್
ರಾಜ್ಯಪಾಲರು ಹಾಗೂ ಮಮತಾ ಬ್ಯಾನರ್ಜೀ (Mamata Banerjee) ನಡುವೆ ಆಗಾಗ ಮಾತಿನ ವಾಗ್ದಾಳಿ ನಡೆಯುತ್ತಲೇ ಇರುತ್ತವೆ. ರಾಜ್ಯಪಾಲರು ತಮ್ಮ ಸಾಂವಿಧಾನಿಕ ಮಿತಿಗಳನ್ನು ಮೀರಿ ವರ್ತಿಸುತ್ತಾರೆ ಎಂದು ಟಿಎಂಸಿ ಪಕ್ಷವು ಆರೋಪಿಸುತ್ತಲೇ ಇದೆ.
Myself and Mrs Sudesh Dhankhar greeted Hon’ble Chief Minister @MamataOfficial when she visited Raj Bhawan today. pic.twitter.com/IsbEqedBHV
— Governor West Bengal Jagdeep Dhankhar (@jdhankhar1) January 6, 2021
ಮಮತಾ ಬ್ಯಾನರ್ಜಿ ಅವರ ಭೇಟಿ ಕೆಲವೇ ಗಂಟೆಗಳ ನಂತರ ತೃಣಮೂಲ ಸಂಸದ ಕಾಕೋಲಿ ಘೋಷ್ ದಸ್ತಿದಾರ್ ಅವರು ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸಿದರು ."ರಾಜ್ಯಪಾಲರಿಗೆ ಸ್ಥಾನವಿದೆ ಮತ್ತು ಅವರು ತಟಸ್ಥರಾಗಿರಬೇಕು.ಅವರು ಸರ್ಕಾರದ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕಾಗಿದೆ.ಅವರು ಭಾಗಶಃ ಮತ್ತು ಏಕಪಕ್ಷೀಯರಾಗಿದ್ದಾರೆ ಮತ್ತು ರಾಜ್ ಭವನವನ್ನು ಬಿಜೆಪಿಯ ಪಕ್ಷದ ಕಚೇರಿಯಾಗಿ ಪರಿವರ್ತಿಸಿದ್ದಾರೆ" ಎಂದು ದಸ್ತಿದಾರ್ ಹೇಳಿದರು.
ಇದನ್ನೂ ಓದಿ: 'ಟ್ಯಾಗೋರ್ ಅವರ ನಾಡಿನಲ್ಲಿ ಎಂದಿಗೂ ದ್ವೇಷದ ರಾಜಕಾರಣ ಗೆಲ್ಲಲು ಸಾಧ್ಯವಿಲ್ಲ'
'ನಾವು ಅವರನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದ್ದೇವೆ ಮತ್ತು ರಾಷ್ಟ್ರಪತಿಯನ್ನು ಮಧ್ಯಪ್ರವೇಶಿಸುವಂತೆ ಕೇಳಿಕೊಂಡಿದ್ದೇವೆ. ನಾವು ಈಗಾಗಲೇ ಪತ್ರವೊಂದನ್ನು ಕಳುಹಿಸಿದ್ದೇವೆ.ಈ ರಾಜ್ಯಪಾಲರು ದೇಶದ ಉಳಿದ ಭಾಗಗಳಲ್ಲಿ ಬಿಜೆಪಿ ನಾಶಮಾಡುತ್ತಿದೆ ಹಾಗೆ ಬಂಗಾಳವನ್ನು ನಾಶಮಾಡಲು ಬಯಸುತ್ತಾರೆ, ಆದರೆ ಬಂಗಾಳದ ಪರಂಪರೆ ಅದನ್ನು ಮಾಡಲು ಅವರಿಗೆ ಅವಕಾಶ ನೀಡುವುದಿಲ್ಲ ಎಂದು ತೃಣಮೂಲ ಸಂಸದ ಹೇಳಿದರು.
ಇನ್ನೊಂದೆಡೆಗೆ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ನಡುವಿನ ಸಭೆ ಹೊಸ ವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಸೌಜನ್ಯದ ಕರೆ ಎಂದು ರಾಜ್ಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
Android Link - https://bit.ly/3hDyh4G
Apple Link - https://apple.co/3hEw2hy