ನಾನು ಸನ್ಯಾಸಿ ನನಗೆ ಮತ ಚಲಾಯಿಸದಿದ್ದರೆ ನಿಮಗೆ ಶಾಪ ಹಾಕುತ್ತೇನೆ- ಸಾಕ್ಷಿ ಮಹಾರಾಜ್

ಬಿಜೆಪಿ ಸಂಸದ  ಸಾಕ್ಷಿ ಮಹಾರಾಜ್ ತಮಗೆ ಮತ ಚಲಾಯಿಸದಿದ್ದರೆ ಅವರಿಗೆ ಶಾಪ ಹಾಕುವುದಾಗಿ ವಿವಾದಾತ್ಮಕ  ಹೇಳಿಕೆ ನೀಡಿದ್ದಾರೆ.

Last Updated : Apr 12, 2019, 08:43 PM IST
ನಾನು ಸನ್ಯಾಸಿ ನನಗೆ ಮತ ಚಲಾಯಿಸದಿದ್ದರೆ ನಿಮಗೆ ಶಾಪ ಹಾಕುತ್ತೇನೆ- ಸಾಕ್ಷಿ ಮಹಾರಾಜ್ title=

ನವದೆಹಲಿ: ಬಿಜೆಪಿ ಸಂಸದ  ಸಾಕ್ಷಿ ಮಹಾರಾಜ್ ತಮಗೆ ಮತ ಚಲಾಯಿಸದಿದ್ದರೆ ಶಾಪ ಹಾಕುವುದಾಗಿ ವಿವಾದಾತ್ಮಕ  ಹೇಳಿಕೆ ನೀಡಿದ್ದಾರೆ.

ಆಗಾಗ ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಸುದ್ದಿಯಲ್ಲಿರುವ ಸಾಕ್ಷಿ ಮಹಾರಾಜ್ ಈಗ "ನಾನು ಸನ್ಯಾಸಿ ನೀವು ಗೆಲ್ಲುವಂತೆ ಮಾಡಿದರೆ ನಾನು ಗೆಲ್ಲುತ್ತೇನೆ; ಇಲ್ಲದಿದ್ದರೆ ದೇವಸ್ಥಾನದಲ್ಲಿ ಭಜನ್ ಮತ್ತು ಕೀರ್ತನ್ ಮಾಡುತ್ತೇನೆ; ಆದರೆ ಇಂದು ನಾನು ನಿಮ್ಮ ಮತಗಳನ್ನು ಪಡೆಯಲುಇಲ್ಲಿದ್ದೇನೆ. ನಿಮ್ಮ ಬಾಗಿಲಲ್ಲಿ ನಿಂತು ಪ್ರಾರ್ಥಿಸುತ್ತಿದ್ದೇನೆ, ನೀವು ಒಂದು ವೇಳೆ ಸನ್ಯಾಸಿಯನ್ನು ನಿರಾಕರಿಸಿದರೆ, ನಾನು ನಿನ್ನ ಕುಟುಂಬದ ಸಂತೋಷವನ್ನು ತೆಗೆದುಕೊಂಡು ನಿಮ್ಮ ಮೇಲೆ ಶಾಪ ಹಾಕುತ್ತೇನೆ" ಎಂದು ಹೇಳಿಕೆ ನೀಡಿದ್ದಾರೆ.

ಸಾಕ್ಷಿ ಮಹಾರಾಜ ರ ಹೇಳಿಕೆ ಕುರಿತಾಗಿ ಬಿಜೆಪಿ ಇನ್ನು ಯಾವುದೇ ಹೇಳಿಕೆ ನೀಡಿಲ್ಲ. ಉನ್ನಾವೋದ ಸಂಸದರಾಗಿರುವ ಅವರು ಹಿಂದೆ ಹಲವು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.ಈಗ ಮತ ಪಡೆಯಲು ಈ ರೀತಿ ಹೇಳಿಕೆ ನೀಡಿರುವುದು ಎಲ್ಲರಲ್ಲಿ ಅಚ್ಚರಿಮೂಡಿಸಿದೆ.

ಏಪ್ರಿಲ್ 29 ರಂದು ನಡೆಯಲಿರುವ ನಾಲ್ಕನೇ ಹಂತದ ಚುನಾವಣೆಯಲ್ಲಿ  ಸಾಕ್ಷಿ ಮಹಾರಾಜ್ ಮತ್ತೊಂದು ಅವಧಿಗೆ ಆಯ್ಕೆ ಆಗಲು ಇಚ್ಚಿಸಿದ್ದಾರೆ. 

Trending News