140 ಕಿಮೀ ವೇಗದಲ್ಲಿ ಬೀಸಿದ ಗಾಳಿ-23 ಪ್ರಾಣಿಗಳ ಸಾವು: ಗುಜರಾತ್ ಬಳಿಕ ಈ ಪ್ರದೇಶಕ್ಕೆ “ಬಿಪರ್ಜಾಯ್” ಎಂಟ್ರಿ!

Biporjoy Cyclone: ಗುರುವಾರ ಸಂಜೆ ಗುಜರಾತ್‌ ನ ಕರಾವಳಿ ಪ್ರದೇಶಗಳಿಗೆ 'ಅತ್ಯಂತ ತೀವ್ರ' ಚಂಡಮಾರುತ ಅಪ್ಪಳಿಸಿದ್ದರಿಂದ ಕನಿಷ್ಠ 22 ಜನರು ಗಾಯಗೊಂಡಿದ್ದಾರೆ. ಮಧ್ಯಾಹ್ನ 2.30 ರವರೆಗೆ ನಲಿಯಾದಿಂದ ಉತ್ತರಕ್ಕೆ 30 ಕಿಮೀ ದೂರದಲ್ಲಿರುವ ಸೌರಾಷ್ಟ್ರ-ಕಚ್ ಪ್ರದೇಶದ ಮೇಲೆ ಬಿಪರ್ಜೋಯ್ ಕೇಂದ್ರೀಕೃತವಾಗಿತ್ತು.

Written by - Bhavishya Shetty | Last Updated : Jun 16, 2023, 08:46 AM IST
    • ಮಹಾ ಚಂಡಮಾರುತದಿಂದಾಗಿ ಅಪಾರ ಪ್ರಮಾಣದ ಮರಗಳು ನೆಲಕ್ಕುರುಳಿವೆ,
    • ಜಖೌ ಬಳಿ ಭೂಕುಸಿತ-ಈ ವೇಳೆ ಗಂಟೆಗೆ 140 ಕಿ.ಮೀ ವೇಗದಲ್ಲಿ ಗಾಳಿ ಬೀಸಿದೆ
    • ಗುಜರಾತ್‌ ನ ಕರಾವಳಿ ಪ್ರದೇಶಗಳಿಗೆ 'ಅತ್ಯಂತ ತೀವ್ರ' ಚಂಡಮಾರುತ ಅಪ್ಪಳಿಸಿದ್ದರಿಂದ 22 ಜನರು ಗಾಯಗೊಂಡಿದ್ದಾರೆ
140 ಕಿಮೀ ವೇಗದಲ್ಲಿ ಬೀಸಿದ ಗಾಳಿ-23 ಪ್ರಾಣಿಗಳ ಸಾವು: ಗುಜರಾತ್ ಬಳಿಕ ಈ ಪ್ರದೇಶಕ್ಕೆ “ಬಿಪರ್ಜಾಯ್” ಎಂಟ್ರಿ!  title=
biparjoy

Biporjoy Cyclone: ಬಿಪರ್ಜಾಯ್ ಚಂಡಮಾರುತದಿಂದಾಗಿ ಗುಜರಾತ್‌ ನ ಕಚ್ ಜಿಲ್ಲೆಯಲ್ಲಿ ಗುರುವಾರ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಈ ಮಹಾ ಚಂಡಮಾರುತದಿಂದಾಗಿ ಅಪಾರ ಪ್ರಮಾಣದ ಮರಗಳು ನೆಲಕ್ಕುರುಳಿವೆ, ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಶುಕ್ರವಾರ ಮುಂಜಾನೆ ಮತ್ತಷ್ಟು ಪರಿಸ್ಥಿತಿ ದುರ್ಬಲಗೊಂಡಿತ್ತು. ಬಳಿಕ ಚಂಡಮಾರುತವು ಉತ್ತರದ ಕಡೆಗೆ ಚಲಿಸಿದೆ.

ಇದನ್ನೂ ಓದಿ: Biparjoy Latest News: ಭೂಸ್ಪರ್ಷಕ್ಕೆ ಹತ್ತಿರವಾಗುತ್ತಿದೆ ಮಹಾಚಂಡಮಾರುತ ಬಿಪರ್ಜಾಯ್, ದೃಶ್ಯ ಭಯಹುಟ್ಟಿಸುವಂತಿದೆ!

ಗುರುವಾರ ಸಂಜೆ ಗುಜರಾತ್‌ ನ ಕರಾವಳಿ ಪ್ರದೇಶಗಳಿಗೆ 'ಅತ್ಯಂತ ತೀವ್ರ' ಚಂಡಮಾರುತ ಅಪ್ಪಳಿಸಿದ್ದರಿಂದ ಕನಿಷ್ಠ 22 ಜನರು ಗಾಯಗೊಂಡಿದ್ದಾರೆ. ಮಧ್ಯಾಹ್ನ 2.30 ರವರೆಗೆ ನಲಿಯಾದಿಂದ ಉತ್ತರಕ್ಕೆ 30 ಕಿಮೀ ದೂರದಲ್ಲಿರುವ ಸೌರಾಷ್ಟ್ರ-ಕಚ್ ಪ್ರದೇಶದ ಮೇಲೆ ಬಿಪರ್ಜೋಯ್ ಕೇಂದ್ರೀಕೃತವಾಗಿತ್ತು. ಶುಕ್ರವಾರ ಬೆಳಿಗ್ಗೆ ಈಶಾನ್ಯಕ್ಕೆ ಚಲಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬಿಪೊರ್‌ಜೋಯ್‌ ಚಂಡಮಾರುತಕ್ಕೆ ಸಂಬಂಧಿಸಿದ ಪ್ರಮುಖ ಅಪ್ಡೇಟ್ಸ್:

ಗುರುವಾರ ಸಂಜೆ 6.30ರ ಸುಮಾರಿಗೆ ಜಖೌ ಬಳಿ ಭೂಕುಸಿತ-ಈ ವೇಳೆ ಗಂಟೆಗೆ 140 ಕಿ.ಮೀ ವೇಗದಲ್ಲಿ ಗಾಳಿ ಬೀಸಿದೆ.

ಬಲವಾದ ಗಾಳಿಗೆ ವಿದ್ಯುತ್ ತಂತಿಗಳು ಮತ್ತು ಕಂಬಗಳು ಮುರಿದು ಬಿದ್ದಿದ್ದು, ಮಲಿಯಾ ತಹಸಿಲ್‌ ನ 45 ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. 11 ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕರಾವಳಿಯ ಗ್ರಾಮೀಣ ಮತ್ತು ಮರುಭೂಮಿ ಪ್ರದೇಶಗಳಲ್ಲಿ 300ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಪಶ್ಚಿಮ ಗುಜರಾತ್ ವಿಜ್ ಕಂಪನಿ ಲಿಮಿಟೆಡ್ (PGVCL) ಉಳಿದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಅನ್ನು ಶೀಘ್ರವಾಗಿ ಮರುಸ್ಥಾಪಿಸಲು ಕೆಲಸ ಮಾಡುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಗಿರ್ ಅರಣ್ಯದಲ್ಲಿ ಸಿಂಹಗಳು ಸೇರಿದಂತೆ ವನ್ಯಪ್ರಾಣಿಗಳಿಗೆ ಭದ್ರತಾ ವ್ಯವಸ್ಥೆಗಳ ಬಗ್ಗೆಯೂ ಪ್ರಧಾನಿ ಮೋದಿ ಮಾಹಿತಿ ಪಡೆದುಕೊಂಡಿದ್ದಾರೆ

ಚಂಡಮಾರುತವು ಗುರುವಾರ ಸಂಜೆ ಜಖೌ ಬಂದರಿನ ಬಳಿ ಕರಾವಳಿಯನ್ನು ದಾಟಿತು, ಆದರೆ ಹಲವಾರು ಗಂಟೆಗಳ ನಂತರ ದುರ್ಬಲಗೊಂಡಿತು ಎಂದು IMD ಹೇಳಿದೆ. ಶುಕ್ರವಾರ ಮುಂಜಾನೆ 2:30ಕ್ಕೆ ಗಂಟೆಗೆ 100ರಿಂದ 110 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿತ್ತು.

23 ಪ್ರಾಣಿಗಳು ಸಾವನ್ನಪ್ಪಿವೆ, 524 ಮರಗಳು ಬಿದ್ದಿವೆ ಮತ್ತು ಕೆಲವು ಸ್ಥಳಗಳಲ್ಲಿ ವಿದ್ಯುತ್ ಕಂಬಗಳು ಸಹ ಬಿದ್ದಿವೆ, ಇದರಿಂದಾಗಿ 940 ಹಳ್ಳಿಗಳಲ್ಲಿ ವಿದ್ಯುತ್ ಇಲ್ಲ ಎಂದು ಗುಜರಾತ್ ಆಯುಕ್ತ ಅಲೋಕ್ ಸಿಂಗ್ ಹೇಳಿದ್ದಾರೆ.

ಮಾಂಡವಿ ನಗರದಲ್ಲಿ ಸಂಪೂರ್ಣ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಬಲವಾದ ಗಾಳಿಯಿಂದಾಗಿ, ಜಖೌ-ಮಾಂಡವಿ ರಸ್ತೆಯ ಉದ್ದಕ್ಕೂ ಮತ್ತು ಮಾಂಡವಿ ಪಟ್ಟಣದಲ್ಲಿ ಅನೇಕ ಮರಗಳು ನೆಲಸಮವಾಗಿವೆ. ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಜಿಲ್ಲಾಧಿಕಾರಿ ಅಮಿತ್ ಅರೋರಾ ತಿಳಿಸಿದ್ದಾರೆ.

ಗುಜರಾತ್‌ನ ಪೀಡಿತ ಪ್ರದೇಶಗಳ ಸುಮಾರು 99 ರೈಲುಗಳನ್ನು ರದ್ದುಗೊಳಿಸಲಾಗುವುದು ಅಥವಾ ಅಲ್ಪಾವಧಿಗೆ ನಿಲ್ಲಿಸಲಾಗುವುದು ಎಂದು ಪಶ್ಚಿಮ ರೈಲ್ವೆ ಹೇಳಿದೆ.

ಇದನ್ನೂ ಓದಿ: Biparjoy Update: ಗುಜರಾತ್ ನಲ್ಲಿ 94,427 ಜನರು ಶಿಫ್ಟ್, 1521 ಹೋಮ್ ಶೇಲ್ಟರ್ ಗಳ ನಿರ್ಮಾಣ

ಸುಮಾರು 1 ಲಕ್ಷ ಜನರನ್ನು ಕರಾವಳಿ ಮತ್ತು ತಗ್ಗು ಪ್ರದೇಶಗಳಿಂದ ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಗುಜರಾತ್ ಸರ್ಕಾರ ಹೇಳಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News