ಬೇಗುಸರಾಯೈಗೆ ಕೆಟ್ಟ ಹೆಸರು ತರಲು ಯತ್ನಿಸುತ್ತಿರುವ ಶಕ್ತಿಗಳು ಸೋಲಲಿವೆ- ಕನ್ನಯ್ಯಕುಮಾರ್

ಇದೇ ಮೊದಲ ಬಾರಿಗೆ ವಿದ್ಯಾರ್ಥಿ ಚಳುವಳಿಯಿಂದ ಚುನಾವಣಾ ರಾಜಕಾರಣಕ್ಕೆ ಪ್ರವೇಶಿಸಿರುವ ಕನ್ನಯ್ಯ ಕುಮಾರ್ ಬೇಗುಸರಾಯೈಗೆ ಕೆಟ್ಟ ಹೆಸರು ತರಲು ಯತ್ನಿಸುತ್ತಿರುವ ಶಕ್ತಿಗಳು ಸೋಲಲಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Last Updated : Apr 29, 2019, 01:36 PM IST
ಬೇಗುಸರಾಯೈಗೆ ಕೆಟ್ಟ ಹೆಸರು ತರಲು ಯತ್ನಿಸುತ್ತಿರುವ ಶಕ್ತಿಗಳು ಸೋಲಲಿವೆ- ಕನ್ನಯ್ಯಕುಮಾರ್  title=
Photo: ANI

ನವದೆಹಲಿ: ಇದೇ ಮೊದಲ ಬಾರಿಗೆ ವಿದ್ಯಾರ್ಥಿ ಚಳುವಳಿಯಿಂದ ಚುನಾವಣಾ ರಾಜಕಾರಣಕ್ಕೆ ಪ್ರವೇಶಿಸಿರುವ ಕನ್ನಯ್ಯ ಕುಮಾರ್ ಬೇಗುಸರಾಯೈಗೆ ಕೆಟ್ಟ ಹೆಸರು ತರಲು ಯತ್ನಿಸುತ್ತಿರುವ ಶಕ್ತಿಗಳು ಸೋಲಲಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಬೇಗುಸರಾಯೈನಲ್ಲಿ ಮತ ಚಲಾಯಿಸುವುದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಯ್ಯಕುಮಾರ್ " ಬೇಗುಸರಾಯೈ ಹೆಸರನ್ನು ಕೆಡಿಸಲು ಯತ್ನಿಸುತ್ತಿರುವ ಶಕ್ತಿಗಳು ಸೋಲಲಿವೆ"ಎಂದು ಕನ್ನಯ್ಯ ಕುಮಾರ್ ಹೇಳಿದರು. ಎಡಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಕನ್ನಯ್ಯ ಕುಮಾರ್, ಈಗ ಪ್ರತಿಸ್ಪರ್ಧಿ ಬಿಜೆಪಿಯ ಕೇಂದ್ರ ಸಚಿವರಾಗಿರುವ ಗಿರಿರಾಜ್ ಸಿಂಗ್ ಗೆ ಭಾರಿ ಸ್ಪರ್ಧಿಯನ್ನೊಡ್ಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕನ್ನಯ್ಯ ಕುಮಾರ್ ಬೇಗುಸರಾಯೈನಲ್ಲಿ ಎಡಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದರಿಂದ ಈಗ ಈ ಕ್ಷೇತ್ರ ದೇಶದ ಗಮನ ಸೆಳೆದಿದೆ. ಇತ್ತೀಚಿಗೆ ಕನ್ನಯ್ಯ ಪರವಾಗಿ ಪ್ರಚಾರ ಮಾಡಲು ಜಾವೇದ್ ಅಕ್ತರ್ ,ಶಬನಾ ಅಜ್ಮಿ,ಪ್ರಕಾಶ್ ರಾಜ್ ,ಸ್ವರಾಜ್ ಭಾಸ್ಕರ್ ಹಾಗೂ ಜಿಗ್ನೇಶ್ ಮೆವಾನಿ ಯಂತಹ ಸಿನಿಮಾ ವ್ಯಕ್ತಿಗಳು ಆಗಮಿಸಿದ್ದರು.

Trending News