ಆಂಧ್ರಕ್ಕೆ ವಿಶೇಷ ಸ್ಥಾನಮಾನ: ಪರಶುರಾಮನ ಅವತಾರ ತಾಳಿದ ಟಿಡಿಪಿ ಸಂಸದ ಶಿವಪ್ರಸಾದ್

ಟಿಡಿಪಿ ಚಿತ್ತೂರ್ ಸಂಸದ ನರಮಲ್ಲಿ ಶಿವಪ್ರಸಾದ್ ಸೃಜನಾತ್ಮಕ ವೇಷಭೂಷಣಗಳೊಂದಿಗೆ ಪ್ರತಿಭಟನೆಗೆ ವಿಭಿನ್ನ ರೂಪ ನೀಡಿದ್ದಾರೆ.

Last Updated : Apr 2, 2018, 02:35 PM IST
ಆಂಧ್ರಕ್ಕೆ ವಿಶೇಷ ಸ್ಥಾನಮಾನ: ಪರಶುರಾಮನ ಅವತಾರ ತಾಳಿದ ಟಿಡಿಪಿ ಸಂಸದ ಶಿವಪ್ರಸಾದ್ title=
Pic : ANI

ನವದೆಹಲಿ : ಆಂಧ್ರಪ್ರದೇಶಕ್ಕೆ 'ವಿಶೇಷ ಸ್ಥಾನಮಾನ'ಕ್ಕೆ ಒತ್ತಾಯಿಸಿ ತೆಲುಗು ದೇಶಂ ಪಕ್ಷ (ಟಿಡಿಪಿ) ಪ್ರತಿಭಟನೆ ನಡೆಸುತ್ತಿದ್ದು, ಪಕ್ಷದ ಚಿತ್ತೂರ್ ಸಂಸದ ನರಮಲ್ಲಿ ಶಿವಪ್ರಸಾದ್ ಸೃಜನಾತ್ಮಕ ವೇಷಭೂಷಣಗಳೊಂದಿಗೆ ಪ್ರತಿಭಟನೆಗೆ ವಿಭಿನ್ನ ರೂಪ ನೀಡಿದ್ದಾರೆ.

ಇದುವರೆಗೂ ದನಕಾಯುವ ಹುಡುಗನಿಂದ ನಾರದ ಮುನಿಯವರೆಗೆ ವಿಭಿನ್ನ ವೇಷಭೂಷಣಗಳನ್ನು ತೊಟ್ಟು ಪ್ರತಿಭಟನೆ ನಡೆಸಿದ್ದ ಸಂಸದ ಶಿವಪ್ರಸಾದ್ ಇಂದು 'ಪರಶುರಾಮ'ನ ಅವತಾರದಲ್ಲಿ ಪ್ರತಿಭಟನೆ ನಡೆಸಿದರು.  

ಹಿಂದೂ ಧರ್ಮದಲ್ಲಿ ಪರಶುರಾಮನು ವಿಷ್ಣುವಿನ ಬ್ರಾಹ್ಮಣ ವರ್ಣದ ಆರನೇ ಅವತಾರ. ವಿಷ್ಣುವಿನ ಇತರ ಅವತಾರಗಳಂತೆಯೇ ಭೂಮಿಯಲ್ಲಿ ಅಗಾಧವಾದ ಕಷ್ಟ ಎದುರಾದ ಸಂದರ್ಭದಲ್ಲಿ ವಿಷ್ಣು ಪರಶುರಾಮನ ಅವತಾರ ತಾಳುತ್ತಾನೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೆ, ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಈ ಹಿಂದೆ ಟಿಡಿಪಿ ನಡೆಸಿದ್ದ ಪ್ರತಿಭಟನೆಯಲ್ಲಿ ಶಿವಕುಮಾರ್ ಶಾಲಾ ಬಾಲಕನ ಉಡುಗೆ ತೊಟ್ಟು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. 

ವೃತ್ತಿಯಲ್ಲಿ ವೈದ್ಯರಾಗಿರುವ ನರಮಲ್ಲಿ ಶಿವಪ್ರಸಾದ್ ಈಗಾಗಲೇ ಹಲವು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 1999 ರಲ್ಲಿ ಶಾಸಕರಾಗಿ ಆಯ್ಕೆಯಾಗಿ ಚಂದ್ರಬಾಬು ನಾಯ್ಡು ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು.

Trending News