13 ವಿದ್ಯಾರ್ಥಿಗಳ ಸಾವು: ಪ್ರತಿಭಟನಾಕಾರರಿಗೆ 'ನಾಟಕ ನಿಲ್ಲಿಸಿ' ಎಂದ ಯೋಗಿ ಆದಿತ್ಯನಾಥ

    

Last Updated : Apr 26, 2018, 11:51 PM IST
13 ವಿದ್ಯಾರ್ಥಿಗಳ ಸಾವು: ಪ್ರತಿಭಟನಾಕಾರರಿಗೆ 'ನಾಟಕ ನಿಲ್ಲಿಸಿ' ಎಂದ ಯೋಗಿ ಆದಿತ್ಯನಾಥ  title=

ಗೊರಖಪುರ್ : ಉತ್ತರಪ್ರದೇಶದ ಕುಶಿನಗರದ ರೇಲ್ವೆ ಕ್ರಾಸಿಂಗ್ ಬಳಿ  ಶಾಲಾವಾಹನಕ್ಕೆ ಟ್ರೈನ್  ಡಿಕ್ಕಿ ಹೊಡೆದು 13 ವಿಧ್ಯಾರ್ಥಿಗಳು ಮೃತಪಟ್ಟಿದ್ದಾರೆ. 

ಇದೆ ವೇಳೆ ಇದನ್ನು ಖಂಡಿಸಿ ಮುಖ್ಯಮಂತ್ರಿಗಳ ಎದುರು ಪ್ರತಿಭಟನೆ ಮಾಡುತ್ತಿದ್ದಕ್ಕೆ  ಪ್ರತಿಭಟನಾಕಾರರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಈ ನಾಟಕ ನಿಲ್ಲಿಸಿ, ಎಂದು ಹೇಳಿದ್ದಾರೆ. ಡಿವೈನ್ ಪಬ್ಲಿಕ್ ಸ್ಕೂಲ್ನ ಹಳದಿ ಶಾಲಾ ವಾಹನವು ಸುಮಾರು 25 ವಿದ್ಯಾರ್ಥಿಗಳಿದ್ದ ಗುರುವಾರ ಬೆಳಿಗ್ಗೆ ರೈಲ್ವೇ ಕ್ರಾಸಿಂಗ್ ಬಳಿ ಅಪಘಾತ ಸಂಭವಿಸಿ  13 ವಿದ್ಯಾರ್ಥಿಗಳು ಮೃತಪಟ್ಟಿದ್ದರು.

ಈ ಅಪಘಾತವಾದ ಸ್ಥಳವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರ ಲೋಕಸಭಾ ಕ್ಷೇತ್ರವಾಗಿದ್ದ ಗೊರಖಪುರ್ ಕುಶಿನಗರದಿಂದ 50 ಕಿ.ಮೀ. ದೂರದಲ್ಲಿದೆ. ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅವರು ಲೋಕಸಭಾ ಕ್ಷೇತ್ರವನ್ನು ತೊರೆದಿದ್ದರು. ಆದರೆ ಈ ಬಾರಿಯ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಇಲ್ಲಿ ಗೆಲುವು ಸಾಧಿಸಿತ್ತು .

Trending News