ಬಾಹ್ಯಾಕಾಶದಿಂದಲೂ ಕಾಣುತ್ತೆ ಸರ್ದಾರ್ ಏಕತಾ ಪ್ರತಿಮೆ!

ಇದೇ ಅಕ್ಟೋಬರ್ 31ರಂದು ಪ್ರಧಾನಿ ನರೇಂದ್ರ ಮೋದಿ ಅವರು  ಸರ್ದಾರ್ ಪಟೇಲ್ ರ ಜನ್ಮದಿನದ ನಿಮಿತ್ತ ವಿಶ್ವದಲ್ಲೇ ಅತಿ ಎತ್ತರದ 182 ಮೀಟರ್  'ಏಕತೆಯ ಪ್ರತಿಮೆ'ಯನ್ನು ಲೋಕಾರ್ಪಣೆಗೊಳಿಸಿದ್ದರು. 

Last Updated : Nov 17, 2018, 01:49 PM IST
ಬಾಹ್ಯಾಕಾಶದಿಂದಲೂ ಕಾಣುತ್ತೆ ಸರ್ದಾರ್ ಏಕತಾ ಪ್ರತಿಮೆ! title=
Photo:Twitter

ನವದೆಹಲಿ: ಇದೇ ಅಕ್ಟೋಬರ್ 31ರಂದು ಪ್ರಧಾನಿ ನರೇಂದ್ರ ಮೋದಿ ಅವರು  ಸರ್ದಾರ್ ಪಟೇಲ್ ರ ಜನ್ಮದಿನದ ನಿಮಿತ್ತ ವಿಶ್ವದಲ್ಲೇ ಅತಿ ಎತ್ತರದ 182 ಮೀಟರ್  'ಏಕತೆಯ ಪ್ರತಿಮೆ'ಯನ್ನು ಲೋಕಾರ್ಪಣೆಗೊಳಿಸಿದ್ದರು. 

ಈಗ ಅಚ್ಚರಿಯೆಂದರೆ ಈಗ ಈ ಪ್ರತಿಮೆ ಬಾಹ್ಯಾಕಾಶದಿಂದಲೂ ನಿಮಗೆ ದರ್ಶನವಾಗುತ್ತದೆ ಅಂತೆ! ಅದು ನಿಮಗೆ ಈ ಸಂಗತಿ ಆಶ್ಚರ್ಯತರಿಸಿದರು ಕೂಡ ಸತ್ಯ.  ಪ್ಲಾನೆಟ್ ಎನ್ನುವ ಜಗತ್ತಿನ ವಾಣಿಜ್ಯಾತ್ಮಕ ಉಪಗ್ರಹಗಳ ನೆಟ್ ವರ್ಕ್ ನ ಡಾಟ್ ಅಂಶಗಳನ್ನು ಹಂಚಿಕೊಳ್ಳುವ ಈ ಸಂಸ್ಥೆ ಈಗ ತನ್ನ ಟ್ವಿಟ್ಟರ್ ನಲ್ಲಿ ಬಾಹ್ಯಾಕಾಶದಿಂದ ಸೆರೆ ಹಿಡಿದಿರುವ ಮೂರ್ತಿಯನ್ನು   ಹಂಚಿಕೊಂಡಿದೆ. ಗುಜರಾತ್‌ನ ನರ್ಮದಾ ಜಿಲ್ಲೆಯ ಕೆವಾಡಿಯ ಬಳಿ ನಿರ್ಮಿಸಿರುವ ಈ ಸರ್ದಾರ್ ಪಟೇಲ್ ಅವರ ಪ್ರತಿಮೆ ಚಿತ್ರವನ್ನು ಸ್ಕೈ‌ಸ್ಯಾಟ್ ನವೆಂಬರ್ 15ರಂದು ಸೆರೆ ಹಿಡಿದಿದೆ. 

ಬುಡುಕಟ್ಟು ಜನರನ್ನು ಒಕ್ಕಲೆಬ್ಬಿಸಿ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ ಎಂದು ಮೋದಿ ಸರ್ಕಾರದ ವಿರುದ್ದ ಸಾಕಷ್ಟು ಪ್ರತಿಭಟನೆ ವ್ಯಕ್ತವಾಗಿತ್ತು. ಪ್ರತಿಪಕ್ಷಗಳು ಕೂಡ ಸಾರ್ವಜನಿಕರ ತೆರಿಗೆಯನ್ನು ಮೂರ್ತಿ ನಿರ್ಮಿಸುವುದರ ಮೂಲಕ  ಪೋಲು ಮಾಡಲಾಗಿದೆ ಎಂದು ಟೀಕಿಸಿದ್ದವು.

 

Trending News