ಗುಂಟೂರು ಬಳಿ ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ನಾಲ್ವರು ಸಾವು

ಚಿತ್ತೂರು ಜಿಲ್ಲೆಯ ಮದನಪಲ್ಲಿ ಮಂಡಲಕ್ಕೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಚೆನ್ನೈ-ಕೊಲ್ಕತ್ತಾ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಕಂಟೇನರ್'ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

Last Updated : Jan 3, 2019, 01:19 PM IST
ಗುಂಟೂರು ಬಳಿ ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ನಾಲ್ವರು ಸಾವು title=
ಸಾಂದರ್ಭಿಕ ಚಿತ್ರ

ಗುಂಟೂರು: ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದ ದಾರುಣ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ. 

ಮೃತಪಟ್ಟವರನ್ನು ಸುಂದರರಾಮರಾಜು(32), ಭಾರತಿ(29), ಕಷ್ವಾನಿ(2) ಮತ್ತು ಲಕ್ಷ್ಮಿ ಸೂರ್ಯನಾರಾಯಣಮ್ಮ(52) ಎಂದು ಗುರುತಿಸಲಾಗಿದೆ. ಉಳಿದಂತೆ ಸುನಿಲ್ ವರ್ಮಾ, ಜಾನ್ಹವಿ ಮತ್ತು ಸಂಧ್ಯಾ ಎಂಬುವರು ಗಾಯಗೊಂಡಿದ್ದು, ಪೊಲೀಸರು ಮತ್ತು ಸ್ಥಳಿಯರ ಸಹಾಯದೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಪಶ್ಚಿಮ ಗೋದಾವರಿಯ ಯರಾವರಂ ಗ್ರಾಮದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಡಿಸೆಂಬರ್ 28 ರಂದು ಸುನೀಲ್​ ವರ್ಮಾ, ಆತನ ತಾಯಿ ಭಾರತಿ (53), ಪತ್ನಿ ಸುಷ್ಮಾ (25), ಹೆಣ್ಮಕ್ಕಳಾದ ಜಾಹ್ನವಿ (5), ಸಾಯ (2), ಸುಂದರರಾಮರಾಜು, ಆತನ ಪತ್ನಿ ಸೌಂದರ್ಯ (26) ಸೇರಿ ಏಳು ಜನ ಕಾರಿನಲ್ಲಿ ತೆರಳಿದ್ದರು. ಬುಧವಾರ ಅಲ್ಲಿಂದ ಚಿತ್ತೂರು ಜಿಲ್ಲೆಯ ಮದನಪಲ್ಲಿ ಮಂಡಲಕ್ಕೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಚೆನ್ನೈ-ಕೊಲ್ಕತ್ತಾ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಕಂಟೇನರ್'ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 
 

Trending News