ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ: ವಕೀಲ ಕಪಿಲ್ ಸಿಬಲ್ ವಾದ ವಿರೋಧಿಸಿದ ಸುನ್ನಿ ವಕ್ಫ್ ಮಂಡಳಿ

ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ ಪ್ರಕರಣವನ್ನು ವಿಚಾರಣೆ ಮಾಡಬೇಕೆಂದು ತನ್ನ ವಕೀಲ ಕಪಿಲ್ ಸಿಬಲ್ ಮಂಡಿಸಿದ ವಾದವನ್ನು ಸುನ್ನಿ ವಕ್ಫ್ ಮಂಡಳಿ ವಿರೋಧಿಸಿದೆ.

Last Updated : Dec 6, 2017, 04:41 PM IST
ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ: ವಕೀಲ ಕಪಿಲ್ ಸಿಬಲ್ ವಾದ   ವಿರೋಧಿಸಿದ ಸುನ್ನಿ ವಕ್ಫ್ ಮಂಡಳಿ title=

ನವದೆಹಲಿ (ಪಿಟಿಐ): 2019ರ ಸಾರ್ವತ್ರಿಕ ಚುನಾವಣೆಯ ಬಳಿಕ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ ಪ್ರಕರಣವನ್ನು ವಿಚಾರಣೆ ಮಾಡಬೇಕೆಂದು ತನ್ನ ವಕೀಲ ಕಪಿಲ್ ಸಿಬಲ್ ಮಂಡಿಸಿದ ವಾದವನ್ನು ಸುನ್ನಿ ವಕ್ಫ್ ಮಂಡಳಿ ವಿರೋಧಿಸಿದೆ.

ಸಿಬಲ್ ಅವರ ನಿಲುವನ್ನು ತಿರಸ್ಕರಿಸಿದ ಸುನ್ನಿ ವಕ್ಫ್ ಮಂಡಳಿಯ ಸದಸ್ಯ ಹಾಜಿ ಮೆಹಬೂಬ್, ಅಯೋಧ್ಯಾ ವಿವಾದವು ಆದಷ್ಟು ಬೇಗ ಬಗೆಹರಿಯಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ. 

"ಹೌದು, ಕಪಿಲ್ ಸಿಬಲ್ ನಮ್ಮ ವಕೀಲರಾಗಿದ್ದಾರೆ. ಆದರೆ ಅವರು ರಾಜಕೀಯ ಪಕ್ಷಕ್ಕೆ ಸೇರಿದವರು, ಅವರು ನಿನ್ನೆ ಸುಪ್ರಿಂಕೋರ್ಟ್ ನಲ್ಲಿ ನೀಡಿದ ಹೇಳಿಕೆ ತಪ್ಪಾಗಿದೆ, ನಾವು ಆದಷ್ಟು ಬೀಗ ಈ ವಿವಾದ ಇತ್ಯರ್ಥಗೊಳ್ಳಬೇಕೆಂದು ಬಯಸುತ್ತೇವೆ" ಎಂದು ಮೆಹಬೂಬ್ ಹೇಳಿದ್ದಾರೆ.

ಸುನ್ನಿ ವಕ್ಫ್ ಬೋರ್ಡ್ ಮತ್ತು ಬಾಬರಿ ಮಸೀದಿ ಆಕ್ಷನ್ ಕಮಿಟಿಯನ್ನು ಪ್ರತಿನಿಧಿಸುವ ವಕೀಲರೊಂದಿಗೆ ಮಂಗಳವಾರ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್, ವಾದ ವಿವಾದಗಳು ಹಲವು ತಿರುವುಗಳನ್ನು ಪಡೆದ ಪರಿಣಾಮ ದೇವತೆ ರಾಮ್ ಲಲ್ಲಾ ವಿರಾಜಮಾನ್ ಅನ್ನು ಪ್ರತಿನಿಧಿಸುವ ವಕೀಲ ಸಿ.ಎಸ್.ವೈದ್ಯನಾಥನ್ ಅವರಿಗೆ ತಮ್ಮ ಸಲ್ಲಿಕೆಗಳನ್ನು ಪ್ರಾರಂಭಿಸುವಂತೆ ಪೀಠವು ಹೇಳಿತು.

ಸಿಜೆಐ ನೇತೃತ್ವದ ಪೀಠವು ಅವರ ವಿವಾದವನ್ನು ತಿರಸ್ಕರಿಸಿದಾಗ, "ಇಲ್ಲ, ಇಲ್ಲ ..." ಎಂದು ಹೇಳುವ ಮೂಲಕ ಸುನ್ನಿ ವಕ್ಫ್ ಬೋರ್ಡ್ಗೆ ವಕೀಲ ಸಿಬಲ್, "ಈ ಪ್ರಕರಣದಲ್ಲಿ ತೆಗೆದುಕೊಳ್ಳುವ ಯಾವುದೇ ನಿರ್ಧಾರ ಅತ್ಯಂತ ಗಂಭೀರ ಶಾಖೆಗಳನ್ನು ಹೊಂದಿದ್ದು, ಮೇಲ್ಮನವಿಗಳನ್ನು ಐದನೇ ಅಥವಾ ಏಳು ನ್ಯಾಯಾಧೀಶರ ಸಾಂವಿಧಾನಿಕ ಪೀಠಕ್ಕೆ ಉಲ್ಲೇಖಿಸಬೇಕು'' ಎಂದು ಹೇಳಿದರು. 

ಅಲ್ಲದೆ, ''ಈ ವಿಚಾರಣೆಯನ್ನು ದಯವಿಟ್ಟು ಜುಲೈ 2019 ರಲ್ಲಿ ನಡೆಸಬೇಕು ಮತ್ತು ಇದರ ನಂತರ ನಾವು ಯಾವುದೇ ಮುಂದೂಡಿಕೆಗಳನ್ನು ಪಡೆಯುವುದಿಲ್ಲವೆಂದು ಭರವಸೆ ನೀಡುತ್ತೇವೆ'' ಎಂದು ನ್ಯಾಯಾಲಯವನ್ನು ಕೇಳಿಕೊಂಡರು. ಇವರ ವಾದವನ್ನು ಆಲಿಸಿದ ಪೀಠವು "ಇದು ಯಾವ ರೀತಿಯ ಸಲ್ಲಿಕೆಯಾಗಿದೆ? ನೀವು ಜುಲೈ 2019 ಎಂದು ಹೇಳುತ್ತೀರಿ. ಅದಕ್ಕೂ ಮೊದಲು ವಿಚಾರಣೆ ನಡೆಸಬಾರದೇಕೆ? ಎಂದು ಅಚ್ಚರಿ ವ್ಯಕ್ತಪಡಿಸಿತ್ತು. 

ಅಯೋಧ್ಯಾ ವಿವಾದದ ಕುರಿತು ಅಂತಿಮ ಹಂತದ ವಿಚಾರಣೆಯನ್ನು ಡಿ.5ರಂದು ಆರಂಭಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ. ಅಶೋಕ್‌ ಭೂಷಣ್‌, ನ್ಯಾ. ಅಬ್ದುಲ್‌ ನಜೀರ್‌ ಅವರನ್ನು ಒಳಗೊಂಡ ವಿಶೇಷ ಪೀಠವು ವಿಚಾರಣೆಯನ್ನು ಫೆಬ್ರವರಿ 8, 2018ಕ್ಕೆ ಮುಂದೂಡಿದೆ.

ಅಯೋಧ್ಯೆಯಲ್ಲಿರುವ 2.77 ಎಕರೆ ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೊಹಿ ಅಕರ ಮತ್ತು ರಾಮ್ ಲಲ್ಲಾ ನಡುವೆ ಭಾಗ ಮಾಡುವಂತೆ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ತೀರ್ಪು ನೀಡಿತ್ತು.

ಈ ಮಧ್ಯೆ, ಉತ್ತರ ಪ್ರದೇಶದ ಶಿಯಾ ಕೇಂದ್ರ ವಕ್ಫ್ ಮಂಡಳಿಯ ಅಡಿಯಲ್ಲಿ ಮುಸಲ್ಮಾನರ ಗುಂಪೊಂದು, ವಿವಾದಿತ ಅಯೋಧ್ಯೆಯ ಭೂಮಿಯಿಂದ ಸ್ವಲ್ಪ ದೂರದಲ್ಲಿ ಮುಸಲ್ಮಾನರು ಹೆಚ್ಚಾಗಿರುವ ಪ್ರದೇಶದಲ್ಲಿ ಮಸೀದಿ ನಿರ್ಮಿಸಲು ಅವಕಾಶ ನೀಡಬೇಕೆಂದು ಅಲಹಾಬಾದ್ ಕೋರ್ಟ್ ಮೊರೆ ಹೋಗಿತ್ತು. ಆದರೆ ಇದರ ಮಧ್ಯಪ್ರವೇಶವನ್ನು ಅಖಿಲ ಭಾರತ ಸುನ್ನಿ ವಕ್ಫ್ ಮಂಡಳಿ ವಿರೋಧಿಸಿತ್ತು.

1946ರಲ್ಲಿ ಶಿಯಾ ಮತ್ತು ಸುನ್ನಿಯ ಎರಡು ಗುಂಪುಗಳ ನಡುವೆ ನ್ಯಾಯಾಂಗ ತೀರ್ಮಾನವನ್ನು ಮಾಡಲಾಗಿದ್ದು ಅದರಂತೆ ಅದು ಮಸೀದಿ ನಿರ್ಮಾಣಕ್ಕೆ ಇರುವ ಜಾಗವೆಂದು ಹೇಳಲಾಯಿತು. ಸುನ್ನಿಗೆ ಸೇರಿದ ಸ್ಥಳದಲ್ಲಿದ್ದ ಮಸೀದಿಯನ್ನು 1992, ಡಿಸೆಂಬರ್ 6ರಂದು ಕೆಡವಿ ಹಾಕಲಾಯಿತು ಎಂದು ಸುನ್ನಿ ವಕ್ಫ್ ಮಂಡಳಿ ಹೇಳುತ್ತಿದೆ.

ಇತ್ತೀಚೆಗಷ್ಟೇ ಈ ಬಗ್ಗೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ಕೆಲ ನಾಗರಿಕ ಹಕ್ಕುಗಳ ಹೋರಾಟಗಾರರು, ಅಯೋಧ್ಯೆ ವಿವಾದವನ್ನು ಕೇವಲ ಆಸ್ತಿ ವಿವಾದ ಎಂದು ಪರಿಗಣಿಸದೆ, ದೇಶದ ಜಾತ್ಯತೀತ ರಚನೆಯ ಮೇಲೆ ಸುದೀರ್ಘ ಪ್ರಭಾವ ಬೀರುವ ಗಂಭೀರ ವಿಚಾರವಾಗಿ ಪರಿಗಣಿಸಿ, ನ್ಯಾಯಾಲಯ ಮಧ್ಯ ಪ್ರವೇಶ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಈ ಮುನ್ನ ಸುಪ್ರೀಂ ಕೋರ್ಟ್‌ ನೀಡಿದ್ದ ನಿರ್ದೇಶನದಂತೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರಕಾರ ಸಂಬಂಧಪಟ್ಟ ದಾಖಲೆಗಳ ಇಂಗ್ಲಿಷ್‌ ಅನುವಾದ ಪ್ರತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದೆ.

Trending News