ಅಕ್ಟೋಬರ್ 21ರಂದು ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲಿರುವ ಮೋದಿ; ಕಾರಣ ಏನ್ ಗೊತ್ತಾ?

ಈ ಬಗ್ಗೆ ಮೋದಿ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದು, ಅವರು ಈ ಬಾರಿ ಅಕ್ಟೋಬರ್ 21 ರಂದು ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದಾಗಿ ತಿಳಿಸಿದ್ದಾರೆ.

Last Updated : Oct 18, 2018, 12:44 PM IST
ಅಕ್ಟೋಬರ್ 21ರಂದು ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲಿರುವ ಮೋದಿ; ಕಾರಣ ಏನ್ ಗೊತ್ತಾ? title=

ನವದೆಹಲಿ: ಈವರೆಗೆ, ಆಗಸ್ಟ್ 15 ರಂದು ಭಾರತದ ಪ್ರಧಾನಿ ತ್ರಿವರ್ಣ ಧ್ವಜವನ್ನು ಕೆಂಪು ಕೋಟೆಯಲ್ಲಿ ಹಾರಿಸುವುದನ್ನು ನೀವು ನೋಡಿದ್ದೀರಿ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಸಮಯದಲ್ಲಿ ಅಕ್ಟೋಬರ್ 21 ರಂದು ಕೂಡಾ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಬಗ್ಗೆ ಮೋದಿ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದು, ಅವರು ಈ ಬಾರಿ ಅಕ್ಟೋಬರ್ 21 ರಂದು ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದಾಗಿ ತಿಳಿಸಿದ್ದಾರೆ. ಮೋದಿ ಅಂದು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನಡೆಸುವ ಹಿಂದಿನ ಉದ್ದೇಶವೇನು ಎಂಬ ಪ್ರಶ್ನೆ  ಸಾಮಾನ್ಯವಾಗಿ, ನಿಮ್ಮ ಮನಸ್ಸಿನಲ್ಲಿ ಉದ್ಭವಿಸಬಹುದು? ವೀಡಿಯೊ ಸಂದೇಶದಲ್ಲಿ PM ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ದೇಶದ ಸ್ವಾತಂತ್ರ್ಯಕ್ಕಾಗಿ ಸುಭಾಷ್ ಚಂದ್ರ ಬೋಸ್ ಅವರು 'ಆಜಾದ್ ಹಿಂದ್ ಫೌಜ್' ಅನ್ನು ಅಕ್ಟೋಬರ್ 21 ರಂದು ಸ್ಥಾಪಿಸಿದರು. ಅಕ್ಟೋಬರ್ 21, 2018 ರಂದು ಈ ಐತಿಹಾಸಿಕ ಘಟನೆ ನಡೆದು 75 ವರ್ಷ ಪೂರ್ಣಗೊಳ್ಳಲಿದ್ದು, ಅದರ ಅಂಗವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಆ ದಿನ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

"ಒಂದು ಸಮಾಜವು ಅದರ ಇತಿಹಾಸದಿಂದ ಕಡಿದು ಹೋದರೆ, ಅದು ಸೂತ್ರ ಹರಿದ ಗಾಳಿಪಟದಂತೆ ಮೇಲೆ ಏರಲು ಸಾಧ್ಯವೇ ಇಲ್ಲ. ನಾವು ಎಲ್ಲರಿಗೂ ಗೌರವಿಸುತ್ತೇವೆ. ಈ ದೇಶಕ್ಕೆ ಸೇವೆ ಸಲ್ಲಿಸಿದ ಯಾರಾದರೂ ಆಗಿರಲಿ, ನಾವು ಅವರನ್ನು ಗೌರವಿಸುತ್ತೇವೆ. 200 ವರ್ಷಗಳ ಒರಿಸ್ಸಾದ ಪೈಕ್ ದಂಗೆಯಲ್ಲಿ ಭಾಗಿಯಾಗಿದ್ದವರ ಅಮರ ತ್ಯಾಗಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ನೆನಪಿಸಿಕೊಂಡಿದೆ. ಕೆಲವು ದಿನಗಳ ಹಿಂದೆ, ಸರ್ ಚೊಟ್ಟೊರಾಂ ಪ್ರತಿಮೆಯನ್ನು ಅನಾವರಣಗೊಳಿಸಲು ನಾನು ರೋಹ್ಟಕ್ ನಲ್ಲಿದ್ದೆ. ಕೃಷಿಯ, ನೀರಾವರಿ ಮತ್ತು ಭೂ ಸುಧಾರಣೆ ಕ್ಷೇತ್ರದಲ್ಲಿ ವ್ಯಾಪಕ ಮಟ್ಟದಲ್ಲಿ ಕೆಲಸ ಮಾಡಿದ ಜನರು ಅವರಂತೆ ಬಹುಮುಖಿ ವ್ಯಕ್ತಿಯ ಬಗ್ಗೆ ಹೆಚ್ಚು ಓದಬೇಕು" ಎಂದು ಮೋದಿ ತಮ್ಮ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

"ಬಾಬಾ ಸಾಹೇಬ್ ಅಂಬೇಡ್ಕರ್ ಅವರೊಂದಿಗೆ ಸಂಬಂಧ ಹೊಂದಿದ್ದ ಪಂಚತೀರ್ಥ್ ಬಗ್ಗೆ ನಮ್ಮ ಸರ್ಕಾರವೂ ಕೆಲಸ ಮಾಡಿದೆ. ಏಕೆಂದರೆ ಬಾಬಾ ಸಾಹೇಬ್ ಜೀವನಕ್ಕೆ ಸಂಬಂಧಿಸಿದ ಐದು ಪ್ರಮುಖ ಸ್ಥಳಗಳು ವಿವಿಧ ಸಮಯಗಳನ್ನು ಪ್ರಸ್ತುತಪಡಿಸುತ್ತವೆ. 1857 ರಲ್ಲಿ ಆರಂಭವಾದ ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಬುಡಕಟ್ಟು ಸಹೋದರರು ದೊಡ್ಡ ಕೊಡುಗೆ ನೀಡಿದರು. ಬಿರ್ಸಾ ಮುಂಡಾವನ್ನು ಯಾರು ತಿಳಿದಿದ್ದರು?  ಅಂತಹ ಬುಡಕಟ್ಟು ಸಮಾಜದ ಜನರಿಗೆ ಸಂಬಂಧಿಸಿದ ಕಥೆಗಳು ಮತ್ತು ವಸ್ತುಸಂಗ್ರಹಾಲಯಗಳನ್ನು ದೇಶದ ಭಾಗಗಳಲ್ಲಿ ನಿರ್ಮಿಸಲು ನಾವು ನಿರ್ಧರಿಸಿದ್ದೇವೆ" ಎಂದು ಅವರು ಹೇಳಿದ್ದಾರೆ.

ಆಜಾದ್ ಹಿಂದ್ ಫೌಜ್ ಸ್ಥಾಪನೆ : ಮುಂದೆ ಅಪ್ರತಿಮ ಬಲಿಷ್ಠ ಸೈನ್ಯವಾಗಿ ಬೆಳೆದ ಆಜಾದ್ ಹಿಂದ್ ಫೌಜ್ ಗೆ ಭಾರತ ಮತ್ತು ಇತರೇ ಬ್ರಿಟೀಷ್ ವಸಾಹತು ದೇಶಗಳಲ್ಲಿನ ಸೈನ್ಯದಲ್ಲಿದ್ದ ನಿವೃತ್ತ ಯುದ್ದ ಖೈದಿಗಳು ಸಾಕಷ್ಟು ಸಂಖ್ಯೆಯಲ್ಲಿ ಸೇರಿಕೊಂಡರು. ಮುಂದೆ ಅತ್ಯಂದ ದಕ್ಷ ಸೈನ್ಯವಾಗಿ ರೂಪುಗೊಂಡ ಆಜಾದ್ ಹಿಂದ್ ಸೇನೆ (ಇಂಡಿಯನ್ ನ್ಯಾಷನಲ್ ಆರ್ಮಿ) (I.N.A.)ಯಾಗಿ ರೂಪುಗೊಂಡಿತು. 

Trending News