/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: ಪುಲ್ವಾಮಾ ದಾಳಿಯ ನಂತರ ಭಾರತದ ಬಾಲಕೋಟ್ ವಾಯುದಾಳಿಯ ಕುರಿತು ಮೊದಲ ಬಾರಿಗೆ ಮಾತನಾಡಿದ ಐಎಎಫ್‌ನ ಏರ್ ಚೀಫ್ ಮಾರ್ಷಲ್ ಬೀರೇಂದ್ರ ಸಿಂಗ್ ಧನೋವಾ, ಬಾಲಕೋಟ್ ವಾಯುದಾಳಿಯ ನಂತರ ಪಾಕಿಸ್ತಾನವು ನಮ್ಮ ವಾಯುಪ್ರದೇಶವನ್ನು ಭೇದಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಏರ್ ಚೀಫ್ ಮಾರ್ಷಲ್, ಪಾಕಿಸ್ತಾನದೊಂದಿಗಿನ ಉದ್ವಿಗ್ನತೆಯ ಹೊರತಾಗಿಯೂ, ದೇಶದಲ್ಲಿನ ನಾಗರಿಕ ವಿಮಾನಯಾನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ತಿಳಿಸಿದರು.

ಬಾಲಕೋಟ್ ವೈಮಾನಿಕ ದಾಳಿ ಮತ್ತು ಪಾಕಿಸ್ತಾನದ ಪ್ರತೀಕಾರದ ಬಗ್ಗೆಯೂ ಮಾತನಾಡಿದ ಏರ್ ಚೀಫ್ ಮಾರ್ಷಲ್ ಧನೋವಾ, ಭಾರತೀಯ ವಾಯುಪಡೆಯು ತನ್ನ ಮಿಲಿಟರಿ ಉದ್ದೇಶವನ್ನು ಸಾಧಿಸಲು ಸಮರ್ಥವಾಗಿದ್ದು, ಯಾವುದೇ ಪಾಕಿಸ್ತಾನಿ ಜೆಟ್ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿಲ್ಲದೆ ಇರುವುದು  ಪಾಕಿಸ್ತಾನದ ವೈಫಲ್ಯವನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.

"ಮಿಲಿಟರಿ ಕಾರ್ಯಾಚರಣೆಯ ಉದ್ದೇಶ ಏನು ಎಂಬುದು ನೀವು ಗಮನಿಸಬೇಕಾದ ಮುಖ್ಯ ವಿಷಯ. ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡುವುದು ನಮ್ಮ ಉದ್ದೇಶವಾಗಿತ್ತು. ನಾವು ಅದನ್ನು ಸಾಧಿಸಿದ್ದೇವೆ. ನಮ್ಮ ಸೈನ್ಯದ ನೆಲೆಗಳನ್ನು ನಾಶಪಡಿಸುವುದು ಅವರ ಉದ್ದೇಶವಾಗಿತ್ತು, ಆದರೆ ಅವರು ಅದನ್ನು ಮಾಡಲು ಸಾಧ್ಯವಾಗಲಿಲ್ಲ" ಎಂದು ಏರ್ ಚೀಫ್ ಮಾರ್ಷಲ್ ಹೇಳಿದರು.

ಫೆಬ್ರವರಿ 26 ರಂದು ಬಾಲಕೋಟ್ ದಾಳಿ ನಂತರ ಪರಿಸ್ಥಿತಿ ಕುರಿತು ಮಾತನಾಡಿದ ಅವರು, ನಾವು ಶ್ರೀನಗರ ವಾಯುಪ್ರದೇಶದಲ್ಲಿ ಮರುದಿನ 2-3 ಗಂಟೆಗಳ ಕಾಲ ಅಂದರೆ ಫೆಬ್ರವರಿ 27 ರಿಂದ 2-3 ಗಂಟೆಗಳ ಕಾಲ ವಿಮಾನಯಾನವನ್ನು ನಿಲ್ಲಿಸಿದ್ದೇವೆ. ಹೇಗಾದರೂ, ಈ ಉದ್ವಿಗ್ನತೆಯ ಪರಿಣಾಮವನ್ನು ಉಳಿದ ನಾಗರಿಕ ವಿಮಾನಯಾನಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಏಕೆಂದರೆ ನಮ್ಮ ಆರ್ಥಿಕತೆಯು ತುಂಬಾ ಪ್ರಬಲವಾಗಿದೆ ಮತ್ತು ದೃಢವಾಗಿದೆ. ಆದರೆ, ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಸ್ಥಗಿತಗೊಳಿಸಿತ್ತು, ಆದ್ದರಿಂದ ಇದು ಅವರ ಸಮಸ್ಯೆ. ನಮ್ಮ ಆರ್ಥಿಕತೆಯು ವಾಯುದಾಳಿಯಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದೆ. ಅದಕ್ಕಾಗಿಯೇ ವಾಯುಪಡೆಯು ಸಿವಿಲ್ ಏರ್ ಟ್ರಾಫಿಕ್ ಅನ್ನು ಎಂದಿಗೂ ನಿಲ್ಲಿಸಲಿಲ್ಲ ಎಂಬುದನ್ನು ನೀವು ಗಮನಿಸಿರಬಹುದು ಎಂದರು.

2 ದಶಕದ ಹಿಂದಿನ ಕಾರ್ಗಿಲ್ ಯುದ್ಧದ ಬಗ್ಗೆ ಉಲ್ಲೇಖಿಸಿದ ಐಎಎಫ್ ಮುಖ್ಯಸ್ಥರು, ಭಾರತದ ಎಲ್ಲಾ ದಾಳಿಯ ಉದ್ದೇಶವು ಯಾವಾಗಲೂ “ನಮ್ಮ ಸಂಕಲ್ಪ ಮತ್ತು ಸಾಮರ್ಥ್ಯವನ್ನು” ತೋರಿಸುವುದು ಎಂದು ಹೇಳಿದರು.
 

Section: 
English Title: 
Pakistan never crossed LoC after Balakot airstrike
News Source: 
Home Title: 

ಬಾಲಕೋಟ್ ದಾಳಿ ಬಳಿಕ ಪಾಕಿಸ್ತಾನ ನಮ್ಮ ವಾಯುಪ್ರದೇಶ ಪ್ರವೇಶಿಸಿಲ್ಲ: IAF ಮುಖ್ಯಸ್ಥ

ಬಾಲಕೋಟ್ ದಾಳಿ ಬಳಿಕ ಪಾಕಿಸ್ತಾನ ನಮ್ಮ ವಾಯುಪ್ರದೇಶ ಪ್ರವೇಶಿಸಿಲ್ಲ: IAF ಮುಖ್ಯಸ್ಥ
Caption: 
Pic Courtesy: ANI
Yes
Is Blog?: 
No
Tags: 
Facebook Instant Article: 
Yes
Mobile Title: 
ಬಾಲಕೋಟ್ ದಾಳಿ ಬಳಿಕ ಪಾಕಿಸ್ತಾನ ನಮ್ಮ ವಾಯುಪ್ರದೇಶ ಪ್ರವೇಶಿಸಿಲ್ಲ: IAF
Publish Later: 
No
Publish At: 
Monday, June 24, 2019 - 13:29