Opposition Unity: 'ಪ್ರತಿಪಕ್ಷಗಳ ಒಗ್ಗಟ್ಟಿನ ಸಭೆ ಒಂದು ಮದುವೆ ಸಮಾರಂಭವಾಗಿತ್ತು, ಸೌಜನ್ಯಕ್ಕಾಗಿ ಕಾಂಗ್ರೆಸ್ ಭಾಗವಹಿಸಿದೆ'

Congress Vs TMC: ತನ್ಮೂಲಕ ಅಧೀರ್ ರಂಜನ್ ಅವರು ಕಾಂಗ್ರೆಸ್ ಮತ್ತು ಟಿಎಂಸಿ ನಡುವಿನ ಯಾವುದೇ ರೀತಿಯ ಹೊಂದಾಣಿಕೆಯನ್ನು ಬಂಗಾಳದಲ್ಲಿ ಒಪ್ಪಿಕೊಳ್ಳುವುದಿಲ್ಲ ಎಂಬ ಸಂಕೇತವನ್ನು ಪಕ್ಷದ ಹೈಕಮಾಂಡ್‌ಗೆ ಕಳುಹಿಸಲು ಯತ್ನಿಸಿದ್ದಾರೆ ಎಂದು ರಾಜಕೀಯ ವಿಮರ್ಶಕರು ವಿಶ್ಲೇಶಿಸಿದ್ದಾರೆ.  

Written by - Nitin Tabib | Last Updated : Jun 26, 2023, 05:56 PM IST
  • ಈ ಕೆಲಸ ಮಾಡುವ ಮೂಲಕ ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋಗುವುದನ್ನು ತಪ್ಪಿಸಲು ಬಯಸಿದ್ದಾರೆ.
  • ಈಗಾಗಲೇ ಅವರ ಇಬ್ಬರು ಸಹಪಾಠಿಗಳು ಜೈಲಿನಲ್ಲಿದ್ದಾರೆ. ಪ್ರತಿಪಕ್ಷಗಳ ಒಗ್ಗಟ್ಟಿನ ಕುರಿತು ಕೇಜ್ರಿವಾಲ್ ನೀಡಿರುವ ಹೇಳಿಕೆ ಅದಕ್ಕೆ ಹಾನಿ ಮಾಡುವ ಪ್ರಯತ್ನವಾಗಿದೆ.
  • ಇದು ಬಿಜೆಪಿಯೊಂದಿಗೆ ರಾಜಕೀಯ ಚೌಕಾಸಿಗಾಗಿ ಉದ್ದೇಶಪೂರ್ವಕ ನಡೆಯಾಗಿದೆ ಎಂದು ವಿಮರ್ಶಕರು ಹೇಳಿದ್ದಾರೆ.
Opposition Unity: 'ಪ್ರತಿಪಕ್ಷಗಳ ಒಗ್ಗಟ್ಟಿನ ಸಭೆ ಒಂದು ಮದುವೆ ಸಮಾರಂಭವಾಗಿತ್ತು, ಸೌಜನ್ಯಕ್ಕಾಗಿ ಕಾಂಗ್ರೆಸ್ ಭಾಗವಹಿಸಿದೆ' title=

Opposition Meet In Patna: ಪ್ರತಿಪಕ್ಷಗಳ ಒಗ್ಗಟ್ಟಿನ ಮೇಲಿನ ಬಿಕ್ಕಟ್ಟಿನ ಕಾರ್ಮೋಡಗಳು ಕಡಿಮೆಯಾಗುವ ಮಾತೆ ಎತ್ತುತ್ತಿಲ್ಲ. ಇದೀಗ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರು ಪ್ರತಿಪಕ್ಷಗಳ ಏಕತೆಯ ಮಹಾ ಸಭೆಯನ್ನು ಮದುವೆ ಸಮಾರಂಭ ಎಂದು ಕರೆದಿದ್ದಾರೆ. ಪಶ್ಚಿಮ ಬಂಗಾಳದ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್, ಇದು ವಿವಾಹ ಸಮಾರಂಭವಾಗಿದ್ದು, ಕಾಂಗ್ರೆಸ್ ಸೌಜನ್ಯಕ್ಕಾಗಿ ಭಾಗವಹಿಸಬೇಕಾಗಿದೆ ಎಂದು ಹೇಳಿದ್ದಾರೆ.

ಅಧೀರ್ ರಂಜನ್ ಚೌಧರಿ ಯಾವಾಗಲೂ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ನಡುವಿನ ಯಾವುದೇ ಒಪ್ಪಂದಕ್ಕೆ ವಿರುದ್ಧವಾಗಿರುತ್ತಾರೆ. ತನ್ಮೂಲಕ ಕಾಂಗ್ರೆಸ್ ಮತ್ತು ಟಿಎಂಸಿ ನಡುವಿನ ಯಾವುದೇ ರೀತಿಯ ಹೊಂದಾಣಿಕೆಯನ್ನು ಬಂಗಾಳದಲ್ಲಿ ಒಪ್ಪಿಕೊಳ್ಳುವುದಿಲ್ಲ ಎಂಬ ಸಂಕೇತವನ್ನು ಪಕ್ಷದ ಹೈಕಮಾಂಡ್‌ಗೆ ಕಳುಹಿಸಲು ಅವರು ಯತ್ನಿಸುತ್ತಿರುತ್ತಾರೆ ಎಂದು ರಾಜಕೀಯ ವಿಮರ್ಶಕರು ವಿಶ್ಲೇಶಿಸುತ್ತಾರೆ.

ರಾಜಕೀಯ ವಿಮರ್ಶಕರು  ಹೇಳುವುದೇನು?
ಶುಕ್ರವಾರ ಪಾಟ್ನಾದಲ್ಲಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ವೇದಿಕೆ ಹಂಚಿಕೊಂಡಿರುವುದು ಬಿಜೆಪಿಗೆ ಸಿಪಿಐ(ಎಂ) ಮತ್ತು ಕಾಂಗ್ರೆಸ್ ನಾಯಕತ್ವವನ್ನು ಹಂಚಿಕೊಳ್ಳುವುದೇ? ಎಂದು ಪ್ರಶ್ನಿಸುವ ಅವಕಾಶವನ್ನು ನೀಡಿದೆ ಎಂದು ರಾಜಕೀಯ ವಿಮರ್ಶಕರು ವಿಶ್ಲೇಶಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ದಾಳಿಯನ್ನು ಎದುರಿಸುತ್ತಿರುವ ತಮ್ಮ ತಳಮಟ್ಟದ ಕಾರ್ಯಕರ್ತರನ್ನು ಅವರು ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಅದು ಹೇಳಿದೆ.

ಈ ಕೆಲಸ ಮಾಡುವ ಮೂಲಕ ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋಗುವುದನ್ನು ತಪ್ಪಿಸಲು ಬಯಸಿದ್ದಾರೆ. ಈಗಾಗಲೇ ಅವರ ಇಬ್ಬರು ಸಹಪಾಠಿಗಳು ಜೈಲಿನಲ್ಲಿದ್ದಾರೆ. ಪ್ರತಿಪಕ್ಷಗಳ ಒಗ್ಗಟ್ಟಿನ ಕುರಿತು ಕೇಜ್ರಿವಾಲ್ ನೀಡಿರುವ ಹೇಳಿಕೆ ಅದಕ್ಕೆ ಹಾನಿ ಮಾಡುವ ಪ್ರಯತ್ನವಾಗಿದೆ. ಇದು ಬಿಜೆಪಿಯೊಂದಿಗೆ ರಾಜಕೀಯ ಚೌಕಾಸಿಗಾಗಿ ಉದ್ದೇಶಪೂರ್ವಕ ನಡೆಯಾಗಿದೆ ಎಂದು ವಿಮರ್ಶಕರು ಹೇಳಿದ್ದಾರೆ. 

ಇದನ್ನೂ ಓದಿ-Underwater Rail Road Tunnel: ಇಲ್ಲಿ ನಿರ್ಮಾಣವಾಗುತ್ತಿದೆ ಭಾರತದ ಮೊಟ್ಟಮೊದಲ ಅಂಡರ್ ವಾಟರ್ ರೇಲ್ ರೋಡ್, ವಿಶೇಷತೆ ಏನು?

ಕಾಂಗ್ರೆಸ್ ಮತ್ತು ಎಎಪಿ ಹಿಂದಕ್ಕೆ ಸರಿಯುತ್ತಿಲ್ಲ
ಈ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿತ್ತು. ವಾತವಾದಲ್ಲಿ, ಕೇಂದ್ರದ ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ, ಅರವಿಂದ್ ಕೇಜ್ರಿವಾಲ್ ಅವರು ಈ ಬಗ್ಗೆ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸುವವರೆಗೂ ಮೈತ್ರಿಗೆ ಸೇರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ-Mumbai Rain: ಮುಂಬೈನಲ್ಲಿ ಭಾರಿ ಅವಾಂತರಕ್ಕೆ ಕಾರಣವಾದ ಮಳೆ, ವಿಲೆ ಪಾರ್ಲೆಯಲ್ಲಿ ಮೂರಂತಸ್ತಿನ ಕಟ್ಟಡ ಕುಸಿದು ಇಬ್ಬರ ದುರ್ಮರಣ

ನಂತರ ಈ ಬಗ್ಗೆ ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ಕೇಜ್ರಿವಾಲ್ ಅವರ ರಾಜಕೀಯ ತಂತ್ರವು ಜನರನ್ನು ಆಶ್ಚರ್ಯಗೊಳಿಸಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 

Trending News