ಮುಸ್ಲಿಂರಿಗೆ ಮೀಸಲಾತಿ ಕುರಿತು ಉಲ್ಟಾ ಹೊಡೆದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ

ಮುಸ್ಲಿಂ ಮೀಸಲಾತಿ ಕುರಿತು ರಾಜ್ಯ ಸರ್ಕಾರದ ಮುಂದೆ ಯಾವುದೇ ಪ್ರಸ್ತಾಪವಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ ಹೇಳಿದ್ದಾರೆ.

Last Updated : Mar 3, 2020, 05:18 PM IST
ಮುಸ್ಲಿಂರಿಗೆ ಮೀಸಲಾತಿ ಕುರಿತು ಉಲ್ಟಾ ಹೊಡೆದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ title=

ನವದೆಹಲಿ: ಮುಸ್ಲಿಂ ಮೀಸಲಾತಿ ಕುರಿತು ರಾಜ್ಯ ಸರ್ಕಾರದ ಮುಂದೆ ಯಾವುದೇ ಪ್ರಸ್ತಾಪವಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ ಹೇಳಿದ್ದಾರೆ.

ಶಿಕ್ಷಣದಲ್ಲಿ ಮುಸ್ಲಿಮರಿಗೆ ಶೇಕಡಾ ಐದು ರಷ್ಟು ಕೋಟಾವನ್ನು ಸರ್ಕಾರ ನೀಡಲಿದೆ ಎಂದು ಎನ್‌ಸಿಪಿ ಮುಖಂಡ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಹೇಳಿದ ಕೆಲವೇ ದಿನಗಳಲ್ಲಿ ಶಿವಸೇನೆ ಮುಖ್ಯಸ್ಥರೂ ಆಗಿರುವ ಠಾಕ್ರೆ ಈ ಹೇಳಿಕೆ ನೀಡಿದ್ದಾರೆ.'ಮುಸ್ಲಿಂ ಮೀಸಲಾತಿ ಬಗ್ಗೆ ಯಾವುದೇ ಪ್ರಸ್ತಾಪಗಳು ನನ್ನ ಬಳಿಗೆ ಬಂದಿಲ್ಲ. ಅದು ನಮ್ಮ ಬಳಿಗೆ ಬಂದ ನಂತರ ನಾವು ಅದರ ಸಿಂಧುತ್ವವನ್ನು ಪರಿಶೀಲಿಸುತ್ತೇವೆ. ಅದರ ಬಗ್ಗೆ ನಾವು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ" ಎಂದು ಠಾಕ್ರೆ ವಿಧಾನ ಭವನದಲ್ಲಿ ಮಾಧ್ಯಮಗಳಿಗೆ ತಿಳಿಸಿದರು.

ಈ ವಿಷಯದ ಬಗ್ಗೆ ರಾಜ್ಯದ ಜನರನ್ನು ದಾರಿ ತಪ್ಪಿಸುವುದನ್ನು ನಿಲ್ಲಿಸುವಂತೆ ಮಹಾರಾಷ್ಟ್ರ ಸಿಎಂ ಬಿಜೆಪಿಗೆ ಸಲಹೆ ನೀಡಿದರು. "ಈ ವಿಷಯವು ಚರ್ಚೆಗೆ ಬಂದಾಗ ಅದನ್ನು ಬಳಸಲು ನಿಮ್ಮ ಶಕ್ತಿಯನ್ನು ಉಳಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಈ ವಿಷಯವು ಇನ್ನೂ ಬಂದಿಲ್ಲ. ಶಿವಸೇನೆ ತನ್ನ ನಿಲುವನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಪ್ರಸ್ತಾಪ ಯಾವಾಗ ಬರುತ್ತೋ ಆಗ ನೋಡೋಣ ಎಂದು' ಠಾಕ್ರೆ ಹೇಳಿದರು."

ಈ ವಿಷಯವು ಸರ್ಕಾರದ ಮುಂದೆ ಬಂದಾಗ, ನಾವು ಕಾನೂನು ಮಾನ್ಯತೆಯನ್ನು ಪರಿಶೀಲಿಸುತ್ತೇವೆ ಮತ್ತು ನಿರ್ಧಾರ ತೆಗೆದುಕೊಳ್ಳುತ್ತೇವೆ. ಈ ವಿಷಯವು ನಮ್ಮ ಮುಂದೆ ಬಂದಾಗ ನನ್ನ ನಿಲುವು ಮತ್ತು ಶಿವಸೇನೆಯ ನಿಲುವನ್ನು ನಿರ್ಧರಿಸಲಾಗುತ್ತದೆ" ಎಂದು ಠಾಕ್ರೆ ಸ್ಪಷ್ಟಪಡಿಸಿದರು.

Trending News