ನವಜೋತ್ ಸಿಂಗ್ ಸಿಧುಗೆ ನನ್ನನ್ನು ಬದಿಗಿರಿಸಿ ಪಂಜಾಬ್ ಸಿಎಂ ಆಗಬೇಕಾಗಿದೆ - ಅಮರಿಂದರ್ ಸಿಂಗ್

ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಭಾನುವಾರ ಮಾತನಾಡುತ್ತಾ, ನವಜೋತ್ ಸಿಂಗ್ ಸಿಧು ಅವರಿಗೆ ನನ್ನನ್ನು ಬದಿಗಿರಿಸಿ ಮುಖ್ಯಮಂತ್ರಿಯಾಗುವ ಹಂಬಲವಿದೆ ಎಂದು ಪಂಜಾಬ್ ನ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ.

Last Updated : May 19, 2019, 03:57 PM IST
ನವಜೋತ್ ಸಿಂಗ್ ಸಿಧುಗೆ ನನ್ನನ್ನು ಬದಿಗಿರಿಸಿ ಪಂಜಾಬ್ ಸಿಎಂ ಆಗಬೇಕಾಗಿದೆ - ಅಮರಿಂದರ್ ಸಿಂಗ್  title=

ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಭಾನುವಾರ ಮಾತನಾಡುತ್ತಾ, ನವಜೋತ್ ಸಿಂಗ್ ಸಿಧು ಅವರಿಗೆ ನನ್ನನ್ನು ಬದಿಗಿರಿಸಿ ಮುಖ್ಯಮಂತ್ರಿಯಾಗುವ ಹಂಬಲವಿದೆ ಎಂದು ಪಂಜಾಬ್ ನ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಚಂಡಿಗಡ್ ದಿಂದ ಪತ್ನಿ ನವಜೋತ್ ಕೌರ್ ಗೆ ಟಿಕೆಟ್ ನಿರಾಕರಣೆಗೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕಾರಣ ಎಂದು ಸಿಧು ಆರೋಪಿಸಿದ್ದರು.ಆದರೆ ಈ ಆರೋಪವನ್ನು ಅಲ್ಲಗಳೆದ ಸಿಎಂ ಸಿಂಗ್ ಅವರಿಗೆ ಅಮೃತ್ ಸರ್ ಅಥವಾ ಬತಿಂದಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿತ್ತು ಆದರೆ ಅದನ್ನು ಅವರು ನಿರಾಕರಿಸಿದರು ಎಂದು ಹೇಳಿದರು. 

"ಸಿಧು ಅವರೊಂದಿಗೆ ಯಾವುದೇ ಮಾತುಕತೆ ಚಕಮಕಿ ಇಲ್ಲ. ಒಂದು ವೇಳೆ ಅವರು ಮಹತ್ವಾಕಾಂಕ್ಷೆಯುಳ್ಳವರಾಗಿದ್ದರೆ, ಅದು ಒಳ್ಳೆಯದು. ಜನರಿಗೆ ಮಹತ್ವಾಕಾಂಕ್ಷೆ ಹಂಬಲವಿರುತ್ತದೆ.ಅವರನ್ನು ನಾನು ಬಾಲ್ಯದಿಂದಲೂ ಬಲ್ಲೆ, ಅವರ ಜೊತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಬಹುಶ ಅವರಿಗೆ ನನ್ನನ್ನು ಸರಿಸಿ ಸಿಎಂ ಆಗಬೇಕಾಗಿದೆ ಇದೇ ಈಗ ಪ್ರಮುಖ ಸಂಗತಿ" ಎಂದು ಸಿಎಂ ಅಮರಿಂದರ್ ಸಿಂಗ್ ಹೇಳಿದರು.

ಚುನಾವಣೆಯ ಸಂದರ್ಭದಲ್ಲಿ ಇಂತಹ ಅಜವಾಬ್ದಾರಿಯುತ ಹೇಳಿಕೆಯಿಂದಾಗಿ ಪಕ್ಷಕ್ಕೆ ಅವರು ಧಕ್ಕೆಯನ್ನುಂಟು ಮಾಡುತ್ತಿದ್ದಾರೆ ಎಂದು ಸಿಎಂ ಆರೋಪಿಸಿದರು.

Trending News