ಆಘಾತಕಾರಿ ಸತ್ಯ: ಲಾಕ್‌ಡೌನ್ ನಡುವೆ ಪ್ರತಿ 10 ಮಂದಿಯಲ್ಲಿ ಒಬ್ಬರ ಉದ್ಯೋಗಕ್ಕೆ ಕತ್ತರಿ

ಕೆಲಸ ಕಳೆದುಕೊಂಡವರಲ್ಲಿ 10 - 15 ಪ್ರತಿಶತದಷ್ಟು ಮಂದಿ ವಿಮಾನಯಾನ ಮತ್ತು ಇ-ಕಾಮರ್ಸ್ ಉದ್ಯಮ ಮತ್ತು 14 ಪ್ರತಿಶತ ಆತಿಥ್ಯ ಉದ್ಯಮದವರಾಗಿದ್ದಾರೆ.  

Last Updated : May 28, 2020, 10:15 AM IST
ಆಘಾತಕಾರಿ ಸತ್ಯ: ಲಾಕ್‌ಡೌನ್ ನಡುವೆ ಪ್ರತಿ 10 ಮಂದಿಯಲ್ಲಿ ಒಬ್ಬರ ಉದ್ಯೋಗಕ್ಕೆ ಕತ್ತರಿ title=

ನವದೆಹಲಿ: ಲಾಕ್‌ಡೌನ್‌ನಲ್ಲಿ ಆರ್ಥಿಕ ಸುಧಾರಣೆಗಳಿಗೆ ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವಂತೆ ತೋರುತ್ತಿದೆ. ಇದರ ಹೊರತಾಗಿಯೂ ಕಳೆದ ಎರಡು ತಿಂಗಳಲ್ಲಿ ಕೆಲಸದಿಂದ ತೆಗೆದು ಹಾಕುವ ಪ್ರಕ್ರಿಯೆ ಮುಂದುವರೆದಿದೆ. ದೇಶದ ವಿವಿಧ ಕ್ಷೇತ್ರಗಳಲ್ಲಿ ಜನರನ್ನು ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆ ಮುಂದುವರೆದಿದೆ ಎಂದು ಇತ್ತೀಚಿನ ಸಮೀಕ್ಷೆ ಬಹಿರಂಗಪಡಿಸಿದೆ.

Naukri.com ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಕನಿಷ್ಠ 10 ಜನರಲ್ಲಿ ಒಬ್ಬರು ಉದ್ಯೋಗ ಕಳೆದುಕೊಂಡಿದ್ದಾರೆ. ಅದೇ ಸಮಯದಲ್ಲಿ 10 ಜನರಲ್ಲಿ 3 ಜನರು ತಮ್ಮ ಉದ್ಯೋಗಕ್ಕೆ ಹೋಗಲು ಹೆದರುತ್ತಾರೆ. ಕೆಲಸ ಕಳೆದುಕೊಂಡವರಲ್ಲಿ 10 - 15 ಪ್ರತಿಶತದಷ್ಟು ಮಂದಿ ವಿಮಾನಯಾನ ಮತ್ತು ಇ-ಕಾಮರ್ಸ್ ಉದ್ಯಮ ಮತ್ತು 14 ಪ್ರತಿಶತ ಆತಿಥ್ಯ ಉದ್ಯಮದವರಾಗಿದ್ದಾರೆ.

ವಜಾಗೊಳಿಸಿದ ನೌಕರರಲ್ಲಿ ಸುಮಾರು 13 ಪ್ರತಿಶತದಷ್ಟು ಮಂದಿ 11 ವರ್ಷಗಳ ಅನುಭವದೊಂದಿಗೆ ಹಿರಿಯ ಹುದ್ದೆಗಳಲ್ಲಿದ್ದು ಅವರಲ್ಲಿ ಸೇಲ್ಸ್ (12 %), ಎಚ್‌ಆರ್ ಮತ್ತು ನಿರ್ವಹಣೆ (12%), ಮಾರ್ಕೆಟಿಂಗ್ (11%) ಅಥವಾ ಕಾರ್ಯಾಚರಣೆ / ಪೂರೈಕೆ ಸರಪಳಿ (11%) ನೌಕರರು.

ನೌಕ್ರಿ ಡಾಟ್ ಕಾಮ್ 50,000 ಸಕ್ರಿಯ ಉದ್ಯೋಗಿಗಳ ನಡುವೆ ಒಂದು ಸಮೀಕ್ಷೆಯನ್ನು ನಡೆಸಿತು. ಇದರಲ್ಲಿ 70 ಪ್ರತಿಶತದಷ್ಟು ಉದ್ಯೋಗಿಗಳು ಉತ್ತಮ ಉದ್ಯೋಗಾವಕಾಶಗಳಿಗಾಗಿ ಹೊಸ ಉದ್ಯೋಗವನ್ನು ಹುಡುಕುತ್ತಿದ್ದಾರೆ ಎಂದು ಅವರು ಕಂಡುಕೊಂಡರು. ನಂತರ ವೇತನ ಕಡಿತದಿಂದಾಗಿ 16 % ಮತ್ತು ಕೆಲಸದಿಂದ ತೆಗೆದುಹಾಕುವ ಭಯದಿಂದ 14 % ಉದ್ಯೋಗಿಗಳು ಹೊಸ ಉದ್ಯೋಗವನ್ನು ಹುಡುಕುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

ಐಟಿ, ಫಾರ್ಮಾ, ಮೆಡಿಕಲ್ / ಹೆಲ್ತ್‌ಕೇರ್ ಮತ್ತು ಬಿಎಫ್‌ಎಸ್‌ಐ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರ ಮೇಲೆ ಇತರ ಕೈಗಾರಿಕೆಗಳ ಸಹವರ್ತಿಗಳಿಗಿಂತ ವಜಾಗೊಳಿಸುವಿಕೆ/ ವೇತನ ಕಡಿತದಿಂದ ಕಡಿಮೆ ಪರಿಣಾಮ ಬೀರಿವೆ.

ನೌಕ್ರಿ ಡಾಟ್ ಕಾಮ್ ನ ಮುಖ್ಯ ವ್ಯವಹಾರ ಅಧಿಕಾರಿ ಪವನ್ ಗೋಯೆಲ್ ಈ ಸಮೀಕ್ಷೆಯು ಉದ್ಯೋಗ ಮಾರುಕಟ್ಟೆಯ ಭವಿಷ್ಯದ ದೃಷ್ಟಿಕೋನದ ಬಗ್ಗೆ ಜಾಗರೂಕರಾಗಿರಲು ವಿಶಾಲವಾದ ನಿರ್ದೇಶನವನ್ನು ನೀಡುತ್ತದೆ. ಸಮೀಕ್ಷೆಯಲ್ಲಿ ನಾವು 10 ಪ್ರತಿಶತದಷ್ಟು ಜನರನ್ನು ಕೆಲಸದಿಂದ ತೆಗೆಯಲಾಗಿದ್ದರೆ, ಸುಮಾರು 34 ಪ್ರತಿಶತದಷ್ಟು ಜನರು   ತಮ್ಮ ಉದ್ಯೋಗವನ್ನು ತೊರೆಯುವ ಭಯದಲ್ಲಿದ್ದಾರೆ. ಏತನ್ಮಧ್ಯೆ ಒಳ್ಳೆಯ ವಿಷಯವೆಂದರೆ 50 ಪ್ರತಿಶತದಷ್ಟು ಜನರು ಉತ್ತಮ ವೃತ್ತಿಜೀವನಕ್ಕಾಗಿ ಉದ್ಯೋಗಗಳನ್ನು ಬದಲಾಯಿಸಲು ಬಯಸುತ್ತಾರೆ, ಇದು ಕಡಿಮೆ ಸಮಯದಲ್ಲಿ ಹೆಚ್ಚು ಬೆಳೆಯಲು ಸಹಾಯ ಮಾಡುತ್ತದೆ ಎಂದವರು ತಿಳಿಸಿದರು.

Trending News