"ಕಾಂಗ್ರೆಸ್ ಜೀವಂತವಾಗಿದ್ದರೇ ಮೊದಲು ಶಾಮನೂರು ಶಿವಶಂಕರಪ್ಪ ಅವರನ್ನು ಉಚ್ಛಾಟಿಸಿ"

ಕಾಂಗ್ರೆಸ್ ಜೀವಂತವಾಗಿದ್ದರೇ ಮೊದಲು ಶಾಮನೂರು ಶಿವಶಂಕರಪ್ಪ ಅವರನ್ನು  ಉಚ್ಛಾಟಿಸಿ ಎಂದು ಎಂಎಲ್ಸಿ ಎಚ್.ವಿಶ್ವನಾಥ್ ಹೇಳಿದರು.

Written by - Manjunath N | Last Updated : Jan 27, 2024, 03:46 PM IST
  • ಶಿವಶಂಕರಪ್ಪ ರಾಜಕೀಯ ಮುತ್ಸದಿಯಲ್ಲ, ಜಾತಿವಾದಿ, ಪಕ್ಷದ ಹಾಳಾದರೂ ನೆಂಟಸ್ತಿಕೆ ಉಳಿಸಿಕೊಳ್ಳುವ ಮಾತನಾಡಿದ್ದಾರೆ.
  • ಕಾಂಗ್ರೆಸ್ ನಿಂದ ಗೆದ್ದು ಅವರ ಮಗನನ್ನು ಸಚಿವರನ್ನಾಗಿ ಮಾಡಿ ಬೇರೆ ಪಕ್ಷದ ಪರ ಕ್ಯಾನ್ವಾಸ್ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.
"ಕಾಂಗ್ರೆಸ್ ಜೀವಂತವಾಗಿದ್ದರೇ ಮೊದಲು ಶಾಮನೂರು ಶಿವಶಂಕರಪ್ಪ ಅವರನ್ನು ಉಚ್ಛಾಟಿಸಿ" title=

ಚಾಮರಾಜನಗರ: ಕಾಂಗ್ರೆಸ್ ಜೀವಂತವಾಗಿದ್ದರೇ ಮೊದಲು ಶಾಮನೂರು ಶಿವಶಂಕರಪ್ಪ ಅವರನ್ನು  ಉಚ್ಛಾಟಿಸಿ ಎಂದು ಎಂಎಲ್ಸಿ ಎಚ್.ವಿಶ್ವನಾಥ್ ಹೇಳಿದರು.

ಸಂಸದ ಬಿ.ವೈ‌.ರಾಘವೇಂದ್ರ ಪರ ಬ್ಯಾಟ್ ಬೀಸಿದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಗುಂಡ್ಲುಪೇಟೆಯಲ್ಲಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಜೀವಂತವಾಗಿದ್ದರೇ ಮೊದಲು ಶಿವಶಂಕರಪ್ಪ ಅವರನ್ನು ಉಚ್ಛಾಟಿಸಬೇಕು ಎಂದು ಆಗ್ರಹಿಸಿದರು. 

ಇದನ್ನೂ ಓದಿ: Chamarajanagar: ಪ್ರತ್ಯೇಕ ಅಪಘಾತ; ಮೂವರು ಸಾವು, 7 ಮಂದಿಗೆ ಗಂಭೀರ ಗಾಯ!

ಶಿವಶಂಕರಪ್ಪ ರಾಜಕೀಯ ಮುತ್ಸದಿಯಲ್ಲ, ಜಾತಿವಾದಿ, ಪಕ್ಷದ ಹಾಳಾದರೂ ನೆಂಟಸ್ತಿಕೆ ಉಳಿಸಿಕೊಳ್ಳುವ ಮಾತನಾಡಿದ್ದಾರೆ, ಕಾಂಗ್ರೆಸ್ ನಿಂದ ಗೆದ್ದು ಅವರ ಮಗನನ್ನು ಸಚಿವರನ್ನಾಗಿ ಮಾಡಿ ಬೇರೆ ಪಕ್ಷದ ಪರ ಕ್ಯಾನ್ವಾಸ್ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ: ಮುಸ್ಲಿಮರ ಓಲೈಕೆ, ಹಿಂದೂಗಳ ಕಡೆಗಣನೆ ನೋಡಿ ಶೆಟ್ಟರ್ ʼಕೈʼ ಬಿಟ್ಟರು

ಶಾಸಕರಿಗೆ ನಿಗಮ ಮಂಡಲಿ ಬೇಡ: 

ಶಾಸಕರಿಗೆ ನಿಗಮ ಮಂಡಲಿ ಸ್ಥಾನಗಳನ್ನು ಕೊಡಬಾರದು, ಎಂಎಲ್ಎ ಸ್ಥಾನವೂ ಅವರಿಗೆ, ನಿಗಮ ಅಧ್ಯಕ್ಷ ಗಿರಿಯೂ ಅವರಿಗೆ ಎಂದರೆ ಹೇಗೆ..? ಬಾವುಟ ಕಟ್ಟುವ ಕಾರ್ಯಕರ್ತರು ಏನು ಮಾಡಬೇಕು, ಶಾಸಕ ಸೂಚಿಸಿದ ಕಾರ್ಯಕರ್ತರಿಗೆ ಬೇಕಾದರೇ ನಿಗಮ ಮಂಡಲಿ ಕೊಡಲಿ, ಶಾಸಕರಿಗೆ ನಿಗಮ ಮಂಡಲಿ ಅಧ್ಯಕ್ಷ ಸ್ಥಾನ ಕೊಡಬಾರದು ಎಂದು ಅಭಿಪ್ರಾಯಪಟ್ಟರು.

ಮೋದಿ ಬಗ್ಗೆ ಜೋಕ್

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಈಗ ಯಾರೋ ನನ್ನ ಮೊಬೈಲ್ ಗೆ ಒಂದು ಸಂದೇಶ ಕಳುಹಿಸಿದ್ದಾರೆ" ಹೆಂಡತಿ ಬಿಟ್ಟ ರಾಮನನ್ನು- ಹೆಂಡತಿ ತೊರೆದ ಪ್ರಧಾನಿ ಪೂಜಿಸುವುದು ಎಷ್ಟು ಸರಿ" ಎಂಬುದು ಬಂದಿದೆ. ಇದನ್ನು ಹೇಳಿದರೆ ನಾನು ರಾಮನ ವಿರೋಧಿ ಅಂತಾರೆ, ಆ ರೀತಿಯಲ್ಲ, ಜನನಾಯಕರ ನಡೆ-ನುಡಿ ವೈರುಧ್ಯಗಳಿಂದ ಕೂಡಿರುವುದರಿಂದ ಜನರು ಯಾರೂ ಯಾರೂ ಜನನಾಯಕನಿಗೆ ಗೌರವ ಕೊಡುತ್ತಿಲ್ಲ ಎಂದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News