/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: ರಾಷ್ಟ್ರ ರಾಜಧಾನಿಯ ಈಶಾನ್ಯ ಪ್ರದೇಶದಲ್ಲಿ ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ (Citizenship Amendment Act) ಕುರಿತು ನಡೆದ ಘರ್ಷಣೆಯಲ್ಲಿ ದೆಹಲಿ ಪೊಲೀಸ್ ಮುಖ್ಯಸ್ಥ ಕಾನ್‌ಸ್ಟೆಬಲ್ ಮತ್ತು ಮೂವರು ನಾಗರಿಕರು ಸೋಮವಾರ ಸಾವನ್ನಪ್ಪಿದ್ದಾರೆ. ಮೂವರು ಪ್ರತಿಭಟನಾಕಾರರು ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ (ಸಿಎಮ್ಒ) ದೃಢಪಡಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಶಹದಾರಾ ಡಿಸಿಪಿ ಅಮಿತ್ ಶರ್ಮಾ ಮೆದುಳಿನಲ್ಲಿ ಹೆಪ್ಪುಗಟ್ಟುವಿಕೆಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದರು ಎನ್ನಲಾಗಿದೆ. ಇನ್ನೂ ಹತ್ತು ಮಂದಿ ಪೊಲೀಸರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಈಶಾನ್ಯ ಜಿಲ್ಲೆಯ ಪ್ರದೇಶಗಳಲ್ಲಿ, ವಿಶೇಷವಾಗಿ ಮೌಜ್‌ಪುರ, ಕಾರ್ಡಮ್ ಪುರಿ, ಚಂದ್ ಬಾಗ್, ಗೋಕುಲ್‌ಪುರಿ ಮತ್ತು ದಯಾಲ್‌ಪುರಗಳಲ್ಲಿ ಹಿಂಸಾಚಾರ ಮತ್ತು ಅಗ್ನಿಸ್ಪರ್ಶದ ಘಟನೆಗಳು ವರದಿಯಾಗಿವೆ. ಗೋಕುಲ್‌ಪುರಿಯ ಕಪೂರ್ ಪೆಟ್ರೋಲ್ ಪಂಪ್‌ನಲ್ಲಿ ಟೈರ್ ಮಾರುಕಟ್ಟೆಗೆ ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಹಚ್ಚಲಾಗಿದ್ದು, ಗಲಭೆಕೋರರು ಭಜನ್ ಪುರ ಪ್ರದೇಶದ ಪೆಟ್ರೋಲ್ ಪಂಪ್‌ಗೆ ಬೆಂಕಿ ಹಚ್ಚಿದ್ದಾರೆ.

ಈಶಾನ್ಯ ದೆಹಲಿಯ ಹಲವಾರು ಪ್ರದೇಶಗಳಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಈಶಾನ್ಯ ದೆಹಲಿಯ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚುವಂತೆ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಿರ್ದೇಶನ ನೀಡಿದ್ದಾರೆ. ಶಾಲೆಯ ಆಂತರಿಕ ಪರೀಕ್ಷೆಗಳನ್ನೂ ರದ್ದುಪಡಿಸಲಾಗಿದೆ ಎನ್ನಲಾಗಿದೆ.

CAA ವಿರೋಧಿಸುವ ಐದನೇ ರಾಜ್ಯ ತೆಲಂಗಾಣ

"ಮಂಗಳವಾರ ಶಾಲೆಗಳ ಆಂತರಿಕ ಪರೀಕ್ಷೆಗಳು ಇರುವುದಿಲ್ಲ ಮತ್ತು ಹಿಂಸಾಚಾರ ಪೀಡಿತ ದೆಹಲಿಯ ಈಶಾನ್ಯ ಜಿಲ್ಲೆಯಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚಲಾಗುವುದು. ಮಂಡಳಿಯ ಪರೀಕ್ಷೆಗಳಿಗೆ ಸಂಬಂಧಿಸಿದಂತೆ, ಮಾನವ ಸಂಪನ್ಮೂಲ ಸಚಿವ ಡಾ.ಆರ್.ಪಿ. ನಿಶಾಂಕ್ ಅವರೊಂದಿಗೆ ಮಾತನಾಡಿದ್ದೇನೆ ಈ ಜಿಲ್ಲೆಯ ಪರೀಕ್ಷೆಯನ್ನು ಸಹ ಮುಂದೂಡಬೇಕು”ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.

ಆದರೆ, ಸಿಬಿಎಸ್‌ಇ ಹೇಳಿಕೆ ನೀಡಿ, "ಮಂಗಳವಾರ ವೇಳಾಪಟ್ಟಿಯ ಪ್ರಕಾರ ದೆಹಲಿಯ ಪಶ್ಚಿಮ ಭಾಗದ 18 ಕೇಂದ್ರಗಳಲ್ಲಿ ನಾಲ್ಕು ವೃತ್ತಿಪರ ವಿಷಯಗಳಲ್ಲಿ ಹನ್ನೆರಡನೇ ತರಗತಿಗೆ ಮಾತ್ರ ಪರೀಕ್ಷೆಗಳಿವೆ ಎಂದು ತಿಳಿಸಲಾಗಿದೆ. ಮಂಗಳವಾರ ನಿಗದಿಯಾದ ಪರೀಕ್ಷೆಗಳಿಗೆ ದೆಹಲಿ ಈಶಾನ್ಯ ಭಾಗದಲ್ಲಿ ಯಾವುದೇ ಕೇಂದ್ರಗಳಿಲ್ಲ ಎನ್ನಲಾಗಿದೆ.

"ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು ದೆಹಲಿ ಪೊಲೀಸರು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈಶಾನ್ಯ ಜಿಲ್ಲೆಯ ಪೀಡಿತ ಪ್ರದೇಶಗಳಲ್ಲಿ ಸೆ. 144 ಅನ್ನು ವಿಧಿಸಲಾಗಿದೆ ಮತ್ತು ದುಷ್ಕರ್ಮಿಗಳು ಮತ್ತು ಸಮಾಜ ವಿರೋಧಿ ಅಂಶಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜನರು ಸುಳ್ಳು ವದಂತಿಗಳನ್ನು ನಂಬಬಾರದು. ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸುವಂತಹ ಯಾವುದೇ ಗೊಂದಲದ ಚಿತ್ರಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಮನವಿ ಮಾಡಿದೆ ” ಎಂದು ದೆಹಲಿ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಪೌರತ್ವ ಕಾಯ್ದೆ ಹೋರಾಟಗಾರರನ್ನು ದೇಶದ್ರೋಹಿಗಳು ಎಂದು ಕರೆಯಲು ಅಸಾಧ್ಯ- ಬಾಂಬೆ ಹೈಕೋರ್ಟ್

ದೆಹಲಿಯ ಎಲ್ಲಾ ಜಿಲ್ಲೆಗಳ ಡಿಸಿಪಿಗಳಿಗೆ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಮತ್ತು ಕಲ್ಲು ತೂರಾಟ ಮತ್ತು ಬೆಂಕಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ದೆಹಲಿ ಪೊಲೀಸ್ ಆಯುಕ್ತರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೆಹಲಿಯ ಎಲ್ಲಾ ಪಡೆಗಳನ್ನು ಎಚ್ಚರವಾಗಿರಿಸಲಾಗಿದ್ದು, ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗಿದೆ.

ಫೆಬ್ರವರಿ 24 ರಂದು (ಸೋಮವಾರ) ನವದೆಹಲಿಯ ಮೌಜ್‌ಪುರದಲ್ಲಿ ಪೌರತ್ವ ವಿರೋಧಿ ತಿದ್ದುಪಡಿ ಕಾಯ್ದೆ (CAA)  ಪರ ಮತ್ತು ವಿರೋಧದ ಪ್ರತಿಭಟನಾಕಾರರ ನಡುವೆ ಕಲ್ಲು ತೂರಾಟ ಆರಂಭವಾಯಿತು. ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಗಳು ಅಶ್ರುವಾಯು ಚಿಪ್ಪುಗಳನ್ನು ಹಾರಿಸಿದರು. ವಿಶೇಷವೆಂದರೆ, ಫೆಬ್ರವರಿ 23 ರಂದು ಮೌಜ್ಪುರವು ಭಾರಿ ಪ್ರಮಾಣದ ಕಲ್ಲು ತೂರಾಟಕ್ಕೆ ಸಾಕ್ಷಿಯಾಗಿದೆ. ಫೆಬ್ರವರಿ 23 ರಂದು ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಮೌಜ್ಪುರ್ ಚೌಕ್‌ಗೆ ಆಗಮಿಸಿದ ನಂತರ ಪರಿಸ್ಥಿತಿ ಹಿಂಸಾತ್ಮಕ ರೂಪ ಪಡೆದಿದೆ.
 
ಸಿಎಎ(CAA) ಪರ ಮತ್ತು ಸಿಎಎ ವಿರೋಧಿ ಪ್ರತಿಭಟನಾಕಾರರ ನಡುವೆ ಕಲ್ಲು ತೂರಾಟ ಕೂಡ ಜಾಫರಾಬಾದ್‌ನಲ್ಲಿ ನಡೆದಿದೆ ಎಂದು ಮೂಲಗಳು ಝೀ ಮೀಡಿಯಾಕ್ಕೆ ತಿಳಿಸಿವೆ. ಕೆಲವು ದುಷ್ಕರ್ಮಿಗಳು ಆಟೋ ಮತ್ತು ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಮೌಜ್‌ಪುರದಲ್ಲಿಯೂ ಕೆಲವು ಅಂಗಡಿಗಳನ್ನು ಧ್ವಂಸ ಮಾಡಲಾಯಿತು.

ಪೌರತ್ವ ತಿದ್ದುಪಡಿ ಕಾಯ್ದೆ ವಿವಾದ: ಕಾಯ್ದೆ ತಡೆಯಾಜ್ಞೆಗೆ ಸುಪ್ರೀಂ ನಕಾರ

ಮೌಜ್‌ಪುರದಲ್ಲಿ ಪೊಲೀಸರ ಎದುರು ಜನರ ಮೇಲೆ ಗುಂಡು ಹಾರಿಸುತ್ತಿದ್ದ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿದ್ದಾನೆ. ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಆ ವ್ಯಕ್ತಿಯನ್ನು ತಡೆಯಲು ಪ್ರಯತ್ನಿಸಿದರು ಆದರೆ ಅವರು ಅವರ ಮಾತನ್ನು ಕೇಳಲು ನಿರಾಕರಿಸಿದರು ಮತ್ತು ಗುಂಡು ಹಾರಿಸುತ್ತಲೇ ಇದ್ದರು. ಈ ವ್ಯಕ್ತಿಯು ಪೊಲೀಸರೊಂದಿಗೆ ಮಾತನಾಡುತ್ತಾ  ನಂತರ ಇತರ ಗುಂಪಿನ ಜನರಿಗೆ ಗುಂಡು ಹಾರಿಸಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಫೆಬ್ರವರಿ 23 ರಂದು ಜಾಫ್ರಾಬಾದ್ ಬಳಿ ಕಲ್ಲು ತೂರಾಟದಿಂದ ಈ ಹಿಂಸಾಚಾರ ಸಂಭವಿಸಿದೆ, ಅಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರು, ಹೆಚ್ಚಾಗಿ ಮಹಿಳೆಯರು ಶನಿವಾರ ರಾತ್ರಿಯಿಂದ ರಸ್ತೆಯಲ್ಲಿ ಕುಳಿತಿದ್ದಾರೆ. ಸೋಮವಾರ ಹಿಂಸಾಚಾರ ನಡೆದ ಸ್ಥಳದಿಂದ ಜಫ್ರಾಬಾದ್‌ನಲ್ಲಿ ಶಾಂತಿಯುತ ಪ್ರತಿಭಟನೆಯ ಸ್ಥಳವು ಒಂದು ಕಿಲೋಮೀಟರ್ ದೂರದಲ್ಲಿದೆ.

Section: 
English Title: 
Four dead during clashes over CAA in national capital; schools to remain closed in North-East area on Tuesday
News Source: 
Home Title: 

CAA ಘರ್ಷಣೆಯಲ್ಲಿ 4 ಸಾವು; ಈಶಾನ್ಯ ಪ್ರದೇಶದಲ್ಲಿಂದು ಶಾಲೆಗಳು ಬಂದ್

CAA ಘರ್ಷಣೆಯಲ್ಲಿ 4 ಸಾವು; ಈಶಾನ್ಯ ಪ್ರದೇಶದಲ್ಲಿಂದು ಶಾಲೆಗಳು ಬಂದ್
Author No use : 
Yashaswini V
Yes
Is Blog?: 
No
Tags: 
Facebook Instant Article: 
Yes
Mobile Title: 
CAA ಘರ್ಷಣೆಯಲ್ಲಿ 4 ಸಾವು; ಈಶಾನ್ಯ ಪ್ರದೇಶದಲ್ಲಿಂದು ಶಾಲೆಗಳು ಬಂದ್
Yashaswini V
Publish Later: 
No
Publish At: 
Tuesday, February 25, 2020 - 05:53
Created By: 
Yashaswini V
Updated By: 
Yashaswini V
Published By: 
Yashaswini V