'ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಒಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ'

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಕೇಂದ್ರ ಸರ್ಕಾರದ ವಿರುದ್ಧದ ಅಭಿಪ್ರಾಯಗಳಿಗಾಗಿ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರ ಮೇಲೆ ಬಿಜೆಪಿ ಕಿಡಿ ಕಾರುತ್ತಿದೆ ಎಂದು ಹೇಳಿದ್ದಾರೆ.

Last Updated : Dec 28, 2020, 11:09 PM IST
'ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಒಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ' title=
file photo

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಕೇಂದ್ರ ಸರ್ಕಾರದ ವಿರುದ್ಧದ ಅಭಿಪ್ರಾಯಗಳಿಗಾಗಿ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರ ಮೇಲೆ ಬಿಜೆಪಿ ಕಿಡಿ ಕಾರುತ್ತಿದೆ ಎಂದು ಹೇಳಿದ್ದಾರೆ.

'ಅಮರ್ತ್ಯ ಸೇನ್ ನಮ್ಮ ಹೆಮ್ಮೆ, ಅವರು ನೊಬೆಲ್ ಪ್ರಶಸ್ತಿ ಗೆದ್ದಿದ್ದಾರೆ. ಅದು ಅಭಿಜಿತ್ ಬಿನಾಯಕ್ ಬ್ಯಾನರ್ಜಿ ಅಥವಾ ಅಮರ್ತ್ಯ ಸೇನ್ ಆಗಿರಲಿ, ಅವರಿಗೆ ಸಮಾಜದಲ್ಲಿ ವಿಭಿನ್ನ ಸ್ಥಾನವಿದೆ. ನಮ್ಮ ಶಿಕ್ಷಣ ತಜ್ಞರನ್ನು ಗುರಿಯಾಗಿಸಲಾಗುತ್ತಿದೆ. ಈಗ ಅವರು ಪ್ರತ್ಯೇಕ ಎನ್ನುವಂತಾಗಿ ಬಿಟ್ಟಿದೆ.ಈ ಎಲ್ಲಾ ವರ್ಷಗಳಲ್ಲಿ ಅವರು ನೇತಾಜಿಯ ಬಗ್ಗೆ ಏನನ್ನೂ ಪ್ರಸ್ತಾಪಿಸಲಿಲ್ಲ. ಈಗ ಅವರು ಅದರ ಬಗ್ಗೆ ಮಾತನಾಡುತ್ತಿದ್ದಾರೆ" ಎಂದು ಹೇಳಿದರು.

5 ವರ್ಷದಲ್ಲಿ ಪಶ್ಚಿಮ ಬಂಗಾಳವನ್ನು ಸೋನಾರ್ ಬಂಗಾಳ ಮಾಡುತ್ತೇವೆ- ಅಮಿತ್ ಶಾ

ಕಳೆದ ವಾರ, ಕೇಂದ್ರ ವಿಶ್ವವಿದ್ಯಾನಿಲಯವಾದ ವಿಶ್ವ ಭಾರತಿ ಅವರು ಕ್ಯಾಂಪಸ್‌ನಲ್ಲಿರುವ ಭೂಮಿಯನ್ನು ಅಕ್ರಮ ವಶದಲ್ಲಿಟ್ಟುಕೊಂಡಿದ್ದಾರೆ ಎಂದು ಕೇಂದ್ರ ಭಾರತದ ವಿಶ್ವ ಭಾರತಿ ಹೇಳಿದ್ದರಿಂದ ಬ್ಯಾನರ್ಜಿ ಸೇನ್‌ಗೆ ತನ್ನ ದುಃಖವನ್ನು ವ್ಯಕ್ತಪಡಿಸಿ ಪತ್ರ ಬರೆದಿದ್ದರು.ಕೇಂದ್ರ ಸರ್ಕಾರದ ವಿರುದ್ಧದ ಅಭಿಪ್ರಾಯಗಳಿಗಾಗಿ ಅಮರ್ತ್ಯ ಸೇನ್ ಅವರ ಮೇಲೆ ಟೀಕಾರೋಪಗಳು ನಡೆಯುತ್ತಿವೆ. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ನನ್ನ ರಾಜಕೀಯ ದೃಷ್ಟಿಕೋನಗಳಿಗಾಗಿ ನನ್ನ ಮೇಲೆ ಹಲ್ಲೆ ನಡೆಯುತ್ತಿದೆ" ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

TMC ಶಾಸಕರ ರಾಜೀನಾಮೆ ಪರ್ವದ ಬೆನ್ನಲ್ಲೇ ಪಶ್ಚಿಮ ಬಂಗಾಳಕ್ಕೆ ಅಮಿತ್ ಶಾ ಭೇಟಿ

ಬೆಂಬಲಕ್ಕಾಗಿ ಧನ್ಯವಾದಗಳನ್ನು ತಿಳಿಸಿದ ಅಮರ್ತ್ಯ ಸೇನ್ ಮಮತಾ ಬ್ಯಾನರ್ಜಿಗೆ ಪತ್ರ ಬರೆದಿದ್ದಾರೆ ಮತ್ತು ಅವರ ಬಲವಾದ ಧ್ವನಿಯು ಪ್ರಚಂಡ ಶಕ್ತಿಯ ಮೂಲವಾಗಿದೆ ಎಂದು ಹೇಳಿದರು. ವಿಶ್ವ ಭಾರತದ ಉಪಕುಲಪತಿಗಳು ಕೇಂದ್ರದ ಆಜ್ಞೆಯ ಮೇರೆಗೆ ಬಂಗಾಳದ ಮೇಲೆ ಹೆಚ್ಚುತ್ತಿರುವ ನಿಯಂತ್ರಣದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಆರೋಪಿಸಿದ್ದಾರೆ.

ಬಿಜೆಪಿಗೆ ಸೆಡ್ಡು ಹೊಡೆಯಲು ದೀದಿಯಿಂದ 'ಹೊಸ ಆಸ್ತ್ರ'..!

'ಅವರು ಗಲಭೆಗಳ ಮೂಲಕ ಬಂಗಾಳವನ್ನು ಸುಡಲು ಬಯಸುತ್ತಾರೆ. ಜೆಎನ್‌ಯು, ಜೋರಸಂಕೊ ಠಾಕುರ್ಬರಿಯಂತಹ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಒಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಬಂಗಾಳವನ್ನು ಅಪಚಾರ ಮಾಡಲಾಗುತ್ತಿದೆ. ಶಾಂತಿ ತರಲು ಗಾಂಧೀಜಿಯವರು ಬೇಲೆಘಾಟಾಗೆ ಗಲಭೆಯ ಸಮಯದಲ್ಲಿ ಇಲ್ಲಿಗೆ ಬಂದರು.ನನಗೆ ಟೆಲಿಪ್ರೊಂಪ್ಟರ್ ನೀಡಿ, ನಾನು ಸಹ ಅದನ್ನು ಓದಬಹುದು. ಆದರೆ ನನಗೆ ಅದರ ಅಗತ್ಯವಿಲ್ಲ. ನಾನು ನೇರವಾಗಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ' ಎಂದು ಮಮತಾ ಬ್ಯಾನರ್ಜೀ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನಾಯಕತ್ವವನ್ನು ಹಿಟ್ಲರ್ ಮತ್ತು ಮುಸೊಲಿನಿಗೆ ಹೋಲಿಸಿದ ಮಮತಾ ಬ್ಯಾನರ್ಜೀ

"ಮುಂಬೈ ಭಾರತದ ಆರ್ಥಿಕ ರಾಜಧಾನಿಯಾಗಿರುವಂತೆಯೇ ಬಂಗಾಳವು ಭಾರತದ ಸಾಂಸ್ಕೃತಿಕ ರಾಜಧಾನಿಯಾಗಿದೆ" ಎಂದು ಮಮತಾ ಹೇಳಿದರು. ರವೀಂದ್ರನಾಥ ಟ್ಯಾಗೋರ್ ಕುರಿತು ಅವರು, "ಬಂಗಾಳದ ಬಗ್ಗೆ ಏನೂ ತಿಳಿದಿಲ್ಲದಿದ್ದಾಗ ಅವರು ರವೀಂದ್ರನಾಥ ಟ್ಯಾಗೋರ್ ಅವರನ್ನು ರಾಜಕೀಯ ಸಾಧನವಾಗಿ ಅದೇಗೆ ಬಳಸಬಹುದು?" ಎಂದು ಪ್ರಶ್ನಿಸಿದರು.

ರೈತರ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದ ಅವರು, "ನಾವು ರೈತರೊಂದಿಗೆ ಇದ್ದೇವೆ. ಮೂರು ಕಠಿಣ ಮಸೂದೆಗಳನ್ನು ಹಿಂಪಡೆಯಬೇಕೆಂದು ನಾವು ಒತ್ತಾಯಿಸುತ್ತೇವೆ" ಎಂದು ಹೇಳಿದರು.

 

Trending News