2011ರಲ್ಲಿ ಜೈಲಿನಿಂದ ಹೊರಬರುವಾಗ ದರ್ಶನ್‌ ಹೇಳಿದ್ದ ʼಆʼ ಮಾತು ಈಗ ನಿಜವಾಯ್ತು! ಅಷ್ಟಕ್ಕೂ ಏನದು?

  darshan thoogudeepa: ಕನ್ನಡದ ನಟ ದರ್ಶನ್ ಈ ಹಿಂದೆ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಪ್ರಕರಣದಲ್ಲಿ 28 ದಿನ ಜೈಲು ವಾಸ ಅನುಭವಿಸಿದ್ದರು. ಆದರೆ ಜೈಲಿನಿಂದ ಹೊರಬಂದ ನಂತರ ಜೈಲು ಅಧಿಕಾರಿಗಳಿಗೆ ಮಾತೊಂದನ್ನು ಹೇಳಿದ್ದರಂತೆ..

Written by - Savita M B | Last Updated : Jul 27, 2024, 08:27 AM IST
  • ನಟ ದರ್ಶನ್ ಈ ಹಿಂದೆ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಪ್ರಕರಣದಲ್ಲಿ 28 ದಿನ ಜೈಲು ವಾಸ ಅನುಭವಿಸಿದ್ದರು.
  • ಇದೀಗ ಅವರು ಕೊಲೆ ಪ್ರಕರಣವೊಂದರಲ್ಲಿ ಮತ್ತೊಮ್ಮೆ ಅದೇ ಸೆಂಟ್ರಲ್ ಜೈಲಿನಲ್ಲಿದ್ದಾರೆ..
2011ರಲ್ಲಿ ಜೈಲಿನಿಂದ ಹೊರಬರುವಾಗ ದರ್ಶನ್‌ ಹೇಳಿದ್ದ ʼಆʼ ಮಾತು ಈಗ ನಿಜವಾಯ್ತು! ಅಷ್ಟಕ್ಕೂ ಏನದು?  title=

Darshan in Jail: ನಟ ದರ್ಶನ್ ಈ ಹಿಂದೆ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಪ್ರಕರಣದಲ್ಲಿ 28 ದಿನ ಜೈಲು ವಾಸ ಅನುಭವಿಸಿದ್ದರು. ಆದರೆ ಜೈಲಿನಿಂದ ಹೊರಬಂದ ನಂತರ ಜೈಲು ಅಧಿಕಾರಿಗಳಿಗೆ ʼಹೋಗಿ ಬರುತ್ತೇನೆʼ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಆ ದಿನ ಹೇಳಿದ್ದರಂತೆ.. ಇದೀಗ ಅವರು ಕೊಲೆ ಪ್ರಕರಣವೊಂದರಲ್ಲಿ ಮತ್ತೊಮ್ಮೆ ಅದೇ ಸೆಂಟ್ರಲ್ ಜೈಲಿನಲ್ಲಿದ್ದಾರೆ.. 

ಹೀರೋ ದರ್ಶನ್ ಸರಿಯಾಗಿ 13 ವರ್ಷಗಳ ನಂತರ ಬೆಂಗಳೂರು ಹೊರವಲಯದಲ್ಲಿರುವ ಪರಪ್ಪನ ಅಗ್ರಹಾರ ಜೈಲಿಗೆ ಮರಳಿದ್ದಾರೆ ಎಂದು ಕಾರಾಗೃಹ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ನೆಲೆಸಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ನಿವೃತ್ತ ಅಧಿಕಾರಿ ಸತೀಶ್ ಅವರು ಹೀರೋ ದರ್ಶನ್ ಜೈಲಿಗೆ ಹೋಗಿ ಬಂದಿರುವ ಬಗ್ಗೆ ಕನ್ನಡದ ಪ್ರಮುಖ ಟಿವಿ ವಾಹಿನಿಯೊಂದರ ಜೊತೆ ಮಾತನಾಡಿದ್ದಾರೆ. ಹೀರೋ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿ 28 ದಿನ ಪರಪ್ಪ ಅಗ್ರಹಾರ ಜೈಲಿನಲ್ಲಿ ಇದ್ದುದನ್ನು ಸತೀಶ್ ನೆನಪಿಸಿದ್ದಾರೆ.. 

ಇದನ್ನೂ ಓದಿ-ಒಂಟಿ ಹೆಣ್ಣು ಕಂಡ್ರೆ ಹುಚ್ಚನಂತೆ ವರ್ತಿಸುತ್ತಾನೆ..! ಖ್ಯಾತ ನಟನ ಮೇಲೆ ಗಾಯಕಿಯ ಶಾಕಿಂಗ್‌ ಹೇಳಿಕೆ

 ಆರಂಭದಲ್ಲಿ ಜೈಲಿನಲ್ಲಿರುವ ಕ್ರಿಮಿನಲ್ ಗಳ ಜೊತೆ ಬೆರೆಯಲು ಕಷ್ಟ ಪಡುತ್ತಿದ್ದ ನಟ ದರ್ಶನ್ ಗೆ ಆಗ ಜೈಲು ಅಧಿಕಾರಿಯಾಗಿದ್ದ ಸತೀಶ್ ಕೂಡ ಕೆಲ ಸಲಹೆಗಳನ್ನು ನೀಡಿದ್ದಾರೆ. ಆ ನಂತರ 28 ದಿನಗಳಲ್ಲಿ ದರ್ಶನ್ ಕೂಡ ಜೈಲು ಅಧಿಕಾರಿ ಜೊತೆ ಉತ್ತಮ ಸ್ನೇಹ ಬೆಳೆಸಿದರು. ಆದರೆ ಜೈಲಿನಿಂದ ಬಿಡುಗಡೆಯಾದ ನಂತರ ನಟ ದರ್ಶನ್ ಜೈಲು ಅಧಿಕಾರಿಗೆ ಹೇಳಿದ ಮಾತು ಇದೀಗ ಹಾಟ್ ಟಾಪಿಕ್ ಆಗಿದೆ.. ಹೌದು ಜೈಲಿನಿಂದ ಬರುವಾಗ ಸತೀಶ್‌ ಅವರು ದರ್ಶನ್‌ ಗೆ "ಬಹಳ ದಿನಗಳ ನಂತರ ಬಿಡುಗಡೆ ಮಾಡುತ್ತಿದ್ದೇವೆ, ಇನ್ನು ಮುಂದೆ ಈ ರೀತಿ ಆಗಬಾರದು, ಇನ್ನು ಮುಂದೆ ನೀನು ಈ ಕಡೆ ನೋಡಬೇಡ ಎಂದಿದ್ದೆ" ಎಂದು ಸತೀಶ್ ನೆನಪಿಸಿಕೊಂಡರು. ಆಗ ಅದಕ್ಕೆ ದರ್ಶನ್ ʼಹೋಗಿ ಬರುತ್ತೇನೆʼ ಎಂದು ಹೇಳಿದ್ದರು ಎಂದು ನಿವೃತ್ತ ಕಾರಾಗೃಹ ಅಧಿಕಾರಿ ಸತೀಶ್ ಹೇಳಿದ್ದಾರೆ. ದರ್ಶನ್ ಜೈಲಿನಲ್ಲಿ ಯಾಕೆ ಹೀಗೆ ಹೇಳಿದರು ಎಂದು ಅಂದು ನಮಗೆ ತುಂಬಾ ಆಶ್ಚರ್ಯವಾಯಿತು ಎನ್ನುತ್ತಾರೆ ಸತೀಶ್.

ನಟ ದರ್ಶನ್ ಗೆ ಹೇಗೆ ಹೇಳಬೇಕು ಅಂತ ಗೊತ್ತಾಗದೆ ಅಂದು ಸುಮ್ಮನಿದ್ದೆ, ಆದರೆ ಅವರ ಮಾತು ಮತ್ತೊಮ್ಮೆ ನಿಜವಾಗಿದೆ ಎಂದಿದ್ದಾರೆ ಸತೀಶ್..  ಜೈಲಿನಿಂದ ಹೊರ ಬರುವ ಮುನ್ನ ನಟ ದರ್ಶನ್ ಮತ್ತೆಂದು ಇಲ್ಲಿಗೆ ಬರುವುದು ಬೇಡ ಎಂದುಕೊಂಡಿದ್ದೆ ಆದರೆ ಮತ್ತೆ ಅದೇ ಜೈಲಿಗೆ ಹೋಗಿರುವುದು ತಿಳಿದು ಬೆಚ್ಚಿಬಿದ್ದಿದ್ದೇನೆ ಎಂದು ಕಾರಾಗೃಹ ಇಲಾಖೆ ನಿವೃತ್ತ ಅಧಿಕಾರಿ ಸತೀಶ್ ಬೇಸರ ವ್ಯಕ್ತಪಡಿಸಿದ್ದಾರೆ..  ಮಕ್ಕಳು, ಕುಟುಂಬದವರು ಮನೆಯಿಂದ ಹೊರಗೆ ಹೋದರೆ ಹೋಗಿ ಬರುತ್ತೇನೆ ಎಂದು ಹೇಳುವುದು ಎಲ್ಲ ಮನೆಗಳಲ್ಲೂ ಮಾಮೂಲು. ಆದರೆ ನಟ ದರ್ಶನ್ ಅವರು ಜೈಲಿನಿಂದ ಹೊರ ಬಂದ ತಕ್ಷಣ ಹೋಗಿ ಬರುತ್ತೇನೆ ಎಂದು ಅಂದು ಹೇಳಿದ್ದು, ಇದೀಗ ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮತ್ತೊಮ್ಮೆ ಜೈಲಿಗೆ ಹೋಗಿದ್ದನ್ನು ನೋಡಿ ಅವರ ಮಾತು ನಿಜವಾಗಿದೆ ಎನಿಸಿದೆ ಎಂದು ಹೇಳಿದ್ದಾರೆ.. 

ಇದನ್ನೂ ಓದಿ-100ಕ್ಕೂ ಹೆಚ್ಚು ಸಿನಿಮಾದಲ್ಲಿ ನಟನೆ.. ಅಪರೂಪದ ಸೌಂದರ್ಯ, ಕೊನೆಗೆ ಅನಾಥೆಯಾಗಿ ಸಾವನ್ನಪ್ಪಿದ ಸ್ಟಾರ್ ನಟಿ..!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News