Weekend With Ramesh: ಡಾಕ್ಟರ್‌ ಆಗಿದ್ದ ನಾ. ಸೋಮೇಶ್ವರ ‘ಥಟ್ ಅಂತ ಹೇಳಿ’ ಕಾರ್ಯಕ್ರಮದ ನಿರೂಪಕರಾಗಿದ್ದು ಹೇಗೆ?

Weekend With Ramesh Season 5: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಈಗಾಗಲೇ ಬಾರಿ ಯಶಸ್ಸು ಕಂಡಿದೆ. ಈ ಕಾರ್ಯಕ್ರಮವು ವಾರದಿಂದ ವಾರಕ್ಕೆ ಯಶಸ್ವಿ ಗಳಿಸುತ್ತಿದೆ. ಈ ವಾರ ಸಾಧಕರ ಸೀಟಿನಲ್ಲಿ ನಾ. ಸೋಮೇಶ್ವರ ಕುಳಿತು ಇನ್ನಷ್ಟು ಮೆರುಗು ತಂದಿದ್ದಾರೆ.

Last Updated : May 15, 2023, 01:02 PM IST
  • ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಈ ವಾರದ ಅತಿಥಿಯಾಗಿ ನಾ. ನಾ. ಸೋಮೇಶ್ವರ
  • ಸಾಧಕರ ಸೀಟಿನಲ್ಲಿ ನಾ. ಸೋಮೇಶ್ವರ ಕುಳಿತು ಇನ್ನಷ್ಟು ಮೆರುಗು ತಂದಿದ್ದಾರೆ
  • ಡಾಕ್ಟರ್‌ ಆಗಿದ್ದ ನಾ. ಸೋಮೇಶ್ವರ ‘ಥಟ್ ಅಂತ ಹೇಳಿ’ ಕಾರ್ಯಕ್ರಮದ ನಿರೂಪಕರಾಗಿದ್ದೆ ಕೂತುಹಲ
Weekend With Ramesh: ಡಾಕ್ಟರ್‌ ಆಗಿದ್ದ ನಾ. ಸೋಮೇಶ್ವರ ‘ಥಟ್ ಅಂತ ಹೇಳಿ’ ಕಾರ್ಯಕ್ರಮದ ನಿರೂಪಕರಾಗಿದ್ದು ಹೇಗೆ? title=

ಬೆಂಗಳೂರು:ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಈಗಾಗಲೇ ಬಾರಿ ಯಶಸ್ಸು ಕಂಡಿದೆ. ಈ ಕಾರ್ಯಕ್ರಮವು ವಾರದಿಂದ ವಾರಕ್ಕೆ ಯಶಸ್ವಿ ಗಳಿಸುತ್ತಿದೆ. ಈ ವಾರ ಸಾಧಕರ ಸೀಟಿನಲ್ಲಿ ನಾ. ಸೋಮೇಶ್ವರ ಕುಳಿತು ಇನ್ನಷ್ಟು ಮೆರುಗು ತಂದಿದ್ದಾರೆ.

ನಾ. ಸೋಮೇಶ್ವರ ಎಂದರೆ ಕರುನಾಡ ಜನತೆಗೆ ಯಾರಿಗೆ ತಾನೇ ಗೊತ್ತಿಲ್ಲ. ಚಂದನ ವಾಹಿನಲ್ಲಿ ಪ್ರಸಾರ ವಾಗುತ್ತಿದ್ದ ‘ಥಟ್ ಅಂತ ಹೇಳಿ’ ಹೇಳಿ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಹೆಸರುವಾಸಿಯಾಗಿದ್ದಾರೆ. ಅನೇಕ ಜನರು ಅವರ ನಿರೂಪಣೆ ಶೈಲಿಗೆ ಮಾತ್ರವಲ್ಲದೇ  ಅವರ ಕನ್ನಡ ಮಾತಿಗೆ ಎಷ್ಟೋ ಅಭಿಮಾನಿಗಳು ಫಿಧ ಆಗಿದ್ದರು.

ಇದನ್ನೂ ಓದಿ: Actors React To Election Results: ವಿಧಾನಸಭೆ ಚುನಾವಣೆ ಫಲಿತಾಂಶ ಕಂಡು ಸ್ಯಾಂಡಲ್ವುಡ್‌ ಸ್ಟಾರ್ಸ್‌ ಪ್ರತಿಕ್ರಿಯೆ ಹೇಗಿತ್ತು ? ಇಲ್ಲಿದೆ ನೋಡಿ..

ಇದೀಗ ವೀಕೆಂಡ್‌ ವಿಥ್‌ನಲ್ಲಿ ಹಂಚಿಕೊಂಡ ಜೀವನ ಕಥೆ ಗೆ ಅಭಿಮಾನಿಗಳು ಇನ್ನಷ್ಟು ಇವರ ಮೇಲೆ ಅಭಿಮಾನ ತೋರಿದ್ದಾರೆ. ಇವರು ಸಿನಿಮಾ ನಟರಲ್ಲ ರಾಜಕೀಯ ನಾಯಕರಂತೂ ಮೊದಲೇ ಅಲ್ಲ. ಆದರೆ ಇವರಿಗೆ ಫ್ಯಾನ್ಸ್‌ ಬಳಗ ಮಾತ್ರ ಕಡಿಮೆ ಇಲ್ಲ. 

ಹೌದು,

ನಾ. ಸೋಮೇಶ್ವರ ಅವರು 1955ರಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಜನಿಸಿದರು. ತಮ್ಮ ಬಾಲ್ಯ ದಿನಗಳ ಸೇರಿದಂತೆ ಕಾಲೇಜು ದಿನಗಳನ್ನು ಸಿಲಿಕಾನ್‌ ಸಿಟಿಯಲ್ಲಿ ಕಳೆದರು. 
ಬಳಿಕ ಎಂಬಿಬಿಎಸ್‌ ಕಡೆ ಒಲಿವು ತೋರಿದರು, ವೈದ್ಯ ಕೋರ್ಸ್‌ ಮುಗಿಸಿ ಅನೇಕ ಕಂಪನಿಗಳ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು.

ಬಳಿಕ 2002 ರಲ್ಲಿ ಆರಂಭವಾದ ಥಟ್ ಅಂತ ಹೇಳಿ ಕಾರ್ಯಕ್ರಮದ ಥಟ್ ಅಂತ ಹೇಳಿ ಎನ್ನುವ ಕನ್ನಡ ಕ್ವಿಜ್ ಕಾರ್ಯಕ್ರಮದ ರೂವಾರಿಯಾಗಿ ಪಾದರ್ಪಾಣೆ ಮಾಡಿ ಖ್ಯಾತಿ ಪಡೆದರು. ಸದ್ಯ ಈ ಕಾರ್ಯಕ್ರಮ  21 ವರ್ಷಗಳಿಂದ ಯಶಸ್ವಿಯಾಗಿ ಸಾಗುತ್ತಿದೆ.

ಇದನ್ನೂ ಓದಿ:Prakash Raj: ದ್ವೇಷ, ಧರ್ಮಾಂಧತೆಯನ್ನು ಒದ್ದೋಡಿಸಿದ ಕರುನಾಡಿಗೆ ಧನ್ಯವಾದ -  ಪ್ರಕಾಶ್​ ರೈ !

ಜಂಜಾಟ ಈಗೀನ ಬೆಂಗಳೂರು , ಮೊದಲು ಹೇಗಿತ್ತು ಎಂಬುವುದನ್ನು  ತಮ್ಮ ವಾಖ್ಯಾನದಲ್ಲಿ ವಿವರಿಸದ ಅವರು, ಬೆಂಗಳೂರು ಇಂದು ಮಹಾನಗರ ಆಗಿ ಬೆಳೆದಿದೆ. ಎಲ್ಲಿ ನೋಡಿದರೂ ಟ್ರಾಫಿಕ್​. ಕೆಂಪು ದೀಪ ಹಸಿರಾಗಲಿ ಎಂದು ಕಾಯುವ ವಾಹನ ಸವಾರರು.

ಧೂಳು,ಕಲುಷಿತ ವಾಯು ಸರ್ವೇ ಸಾಮಾನ್ಯ ಎಂಬಂತಾಗಿದೆ. ಅಲ್ಲಲ್ಲಿ ಮರಗಳು ಇವೆಯಾದರೂ ಬೆಂಗಳೂರಿನ ಕಲುಷಿತ ಗಾಳಿಯನ್ನು ಸಂಪೂರ್ಣವಾಗಿ ಶುದ್ಧವಾಗಿಸಲು ಅವುಗಳಿಂದ ಸಾಧ್ಯವಿಲ್ಲ. ಆದರೆ, ಕೆಲವು ದಶಕಗಳ ಹಿಂದೆ ಬೆಂಗಳೂರು ಈ ರೀತಿ ಇರಲಿಲ್ಲ. ಅದೊಂದು ಹಳ್ಳಿಯಾಗಿತ್ತು ಉದ್ಯಮಿನಗರಿಯನ್ನು ಕುರಿತು  ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Bollywood News : ಮಮತಾ ಬ್ಯಾನರ್ಜಿಯನ್ನು ಭೇಟಿಯಾದ ಸಲ್ಮಾನ್ ಖಾನ್ ! ದೀದಿ ಜೊತೆ ಬಾಲಿವುಡ್ ಸ್ಟಾರ್ ಏನಿದು ಗಿಮಿಕ್?‌

ಸರಳ ವ್ಯಕ್ತಿತ್ವ ಪಾಲಿಸುವ ಇವರು ತಮ್ಮ ವಿವಾಹವನ್ನು ಸರಳ ರೀತಿಯಾಗಿ ಆಗಿದ್ದೇವು ಎಂದು ಅವರ ವೈವಾಹಿಕ ಜೀವನದ ಅಂಶವನ್ನು ವೀಕ್ಷಕರ ಮುಂದೆ ಹೇಳಿಕೊಂಡಿದ್ದಾರೆ. ವೀಕೆಂಡ್‌ ವಿಥ್‌ ರಮೇಶ್‌ ಕಾರ್ಯಕ್ರಮದಲ್ಲಿ ಆಗಮಿಸಿವ ಇವರು ಒಂದಷ್ಟು ವಿಷಯಗಳನ್ನು ವೀಕ್ಷಕರ ಮುಂದೆ ಹಂಚಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News