‌Samantha: 2 ವರ್ಷದ ಬಳಿಕ ಡಿವೋರ್ಸ್ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಸ್ಯಾಮ್‌!

Samantha on Her Divorce: ನಟಿ ಸಮಂತಾ ಸದ್ಯ ಸಿನಿಮಾಗಳಿಂದ ಬ್ರೇಕ್‌ ತೆಗೆದುಕೊಂಡಿದ್ದಾರೆ.. ಇದೇ ವೇಳೆ ನಟಿ ನಾಗ ಚೈತನ್ಯ ಜೊತೆ ವಿಚ್ಛೇದನದ ಬಗ್ಗೆ ಇತ್ತೀಚೆಗೆ ಮಾಡಿರುವ ಕಾಮೆಂಟ್‌ಗಳು ವೈರಲ್‌ ಆಗುತ್ತಿವೆ.  

Written by - Savita M B | Last Updated : Nov 9, 2023, 11:56 AM IST
  • ಸಮಂತಾ ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ನಟಿ
  • ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿರುವ ಸಮಂತಾ ಮಯೋಸಿಟಿಸ್ ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
  • ಇದೀಗ ಸ್ಯಾಮ್‌ ವಿಚ್ಚೇಧನದ ಕುರಿತು ಮಾಡಿರುವ ಕಾಮೆಂಟ್‌ ವೈರಲ್‌ ಆಗುತ್ತಿದೆ
 ‌Samantha: 2 ವರ್ಷದ ಬಳಿಕ ಡಿವೋರ್ಸ್ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಸ್ಯಾಮ್‌!  title=

Samantha: ಸಮಂತಾ ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ನಟಿ. ತಮ್ಮ ಕೊನೆಯ ಚಿತ್ರ ಖುಷಿ ಹಿಟ್ ಆದ ನಂತರ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿರುವ ಸಮಂತಾ ಮಯೋಸಿಟಿಸ್ ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗಾಗಿ ಮೊದಲು ಅಮೆರಿಕಕ್ಕೆ ಹೋಗಿದ್ದ ಅವರು ಈಗ ಭೂತಾನ್‌ಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ನಟಿ ಸಮಂತಾ ನಾಗ ಚೈತನ್ಯ ಜೊತೆ ವಿಚ್ಛೇದನದ ಬಗ್ಗೆ ಅಪರೂಪದ ಕಾಮೆಂಟ್ ಮಾಡಿದ್ದಾರೆ..

ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಹೀರೋ ನಾಗ ಚೈತನ್ಯ ವಿಚ್ಛೇದನ ಪಡೆದಿದ್ದು ಗೊತ್ತೇ ಇದೆ. ಪ್ರೀತಿಸಿ ಮದುವೆಯಾದ ಈ ಜೋಡಿ ತಮ್ಮ ವಿವಾಹ ಜೀವನಕ್ಕೆ ಫುಲ್ ಸ್ಟಾಪ್ ಹಾಕಿ ಬಹಳ ದಿನಗಳೇ ಕಳೆದಿವೆ.. ಮತ್ತು ವಿಚ್ಛೇದನದ ನಂತರ ಸಮಂತಾ ನಾಗ ಚೈತನ್ಯ ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ..

ಇದನ್ನೂ ಓದಿ-ಅಭಿಶೇಕ್‌ ʼಬ್ಯಾಡ್‌ ಮ್ಯಾನರ್ಸ್‌ʼ ಚಾಲೆಂಜಿಂಗ್ ಸ್ಟಾರ್‌ನಿಂದ ಗುಡ್‌ ಕಿಕ್‌ ಸ್ಟಾರ್ಟ್:‌ ಟ್ರೇಲರ್‌ ಲಾಂಚ್ ಯಾವಾಗ?

ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಸಮಂತಾ ಮದುವೆಯಾದ ನಾಲ್ಕು ವರ್ಷಗಳ ಬಳಿಕ ವಿಚ್ಛೇದನ ಪಡೆದರು.. ಈ ವಿಚ್ಛೇದನಕ್ಕೆ ಕಾರಣಗಳು ಹೊರಬೀಳದಿದ್ದರೂ, ಇದೀಗ ಸಮಂತಾ ನಾಗ ಚೈತನ್ಯ ಕುರಿತು ಕಾಮೆಂಟ್‌ ಮಾಡಿದ್ದು ಸೆಕೆಂಡ್‌ಗಳಲ್ಲಿ ವೈರಲ್ ಆಗಿದೆ..

ಇದನ್ನೂ ಓದಿ-'ಪರ್ಸನಲ್ ವಿಷಯವನ್ನು, ಯಾರ್ ಹತ್ರನೂ ಹೇಳ್ಕೋಬಾರದು. ಎಲ್ಲ ಎರಡು ತಲೆ ಹಾವುಗಳು..': ಕಾರ್ತಿಕ್‌ ಸ್ನೇಹಿತ್‌ನಿಂದ ಕಲಿತ್ರಾ!

“ನನ್ನದು ವಿಫಲ ಮದುವೆ.. ಇದು ನನ್ನ ಆರೋಗ್ಯ ಹಾಗೂ ಕೆಲಸದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ.. ಕಳೆದ ಎರಡು ವರ್ಷಗಳಿಂದ ನಾನು ಎಲ್ಲಿಲ್ಲದ ನೋವನ್ನು ಅನುಭವಿಸಿದ್ದೇನೆ.. 'ಆ ಸಮಯದಲ್ಲಿ, ನಾನು ಹೆಚ್ಚು ಜೀವನದಲ್ಲಿ ನೋವಿಗೊಳಗಾದವರ ಬಗ್ಗೆ ಓದಿದ್ದೇನೆ. ಮತ್ತು ಅವರ ಕಥೆಗಳನ್ನು ಓದುವುದು ನನಗೆ ನನ್ನ ನೋವಿನಿಂದ ಹೊರಬರಲು ಸಹಾಯ ಮಾಡಿತು".

ನಾವು ಎಷ್ಟೇ ಬ್ಲಾಕ್‌ ಬಾಸ್ಟರ್‌ ಹಿಟ್‌ ಸಿನಿಮಾಗಳನ್ನು ನೀಡಿರಬಹುದು.. ಹೊರಗಡೆ ಒಬ್ಬ ಸೆಲೆಬ್ರಿಟಿ ಆಗಿರಬಹುದು ಆದರೆ ನಮಗೂ ನೋವುಗಳು ಸಾಕಷ್ಟಿರುತ್ತವೆ.. ಸಂಕಟಗಳು, ಕಷ್ಟಗಳು, ಕೊರತೆಗಳು.. ಇವೆಲ್ಲವನ್ನು ಪಬ್ಲಿಕ್‌ ಮಾಡಿಕೊಳ್ಳಲು ನನಗೆ ಇಷ್ಟವಿಲ್ಲ,,  ನನ್ನಂತಹ ಎಷ್ಟೋ ಜನರು ಅವರಿಗವರೇ ಸ್ಪೂರ್ತಿ ಶಕ್ತಿಯಾಗಿದ್ದಾರೆ.. ಹಾಗೆಯೇ ನಾನು ಎಲ್ಲವ್ನನು ಎದುರಿಸುತ್ತೇನೆ" ಎಂದು ತಮ್ಮ ಮನದಾಳದ ಮಾತುಗಳನ್ನು ಬಹಿರಂಗ ಪಡಿಸಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News