Naga Chaitanya ಹಾಗೂ ಶೋಭಿತ ಧೂಳಿಪಾಲ ಅಫೈರ್ ಕುರಿತು ಮೌನ ಮುರಿದ ಸಮಂತಾ ಹೇಳಿದ್ದೇನು?

Samantha Prabhu on Naga Chaitanya Aaffair: ದಕ್ಷಿಣ ಚಿತ್ರರಂಗದ ಖ್ಯಾತ ಸೂಪರ್ ಸ್ಟಾರ್ ನಾಗ ಚೈತನ್ಯ ಅವರ ಅಫೈರ್ ಸುದ್ದಿಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿವೆ. ಆದರೆ, ಈ ಸುದ್ದಿಗಳ ಬಗ್ಗೆ ನಾಗ ಚೈತನ್ಯ ಮಾಜಿ ಪತ್ನಿ ಸಮಂತಾ ಮೌನ ಮುರಿದಿದ್ದಾರೆ. ಸಮಂತಾ ನೀಡಿರುವ ಹೇಳಿಕೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

Written by - Nitin Tabib | Last Updated : Jun 26, 2022, 06:37 PM IST
  • ನಾಗ ಚೈತನ್ಯ-ಶೋಭಿತಾ ಧೂಳಿಪಾಲ ಅಫೈರ್ ವರದಿಗಳು
  • ಮೊಟ್ಟಮೊದಲ ಬಾರಿಗೆ ಮೌನ ಮುರಿದ ಮಾಜಿ ಪತ್ನಿ
  • ವದಂತಿಗಳ ಬಗ್ಗೆ ಸಮಂತಾ ರುತ್ ಪ್ರಭು ಹೇಳಿದ್ದೇನು ತಿಳಿಯಲು ಸುದ್ದಿ ಓದಿ
Naga Chaitanya ಹಾಗೂ ಶೋಭಿತ ಧೂಳಿಪಾಲ ಅಫೈರ್ ಕುರಿತು ಮೌನ ಮುರಿದ ಸಮಂತಾ ಹೇಳಿದ್ದೇನು? title=
Samantha Prabhu on Naga Chaitanya Aaffair

Samantha Prabhu on Naga Chaitanya Aaffair: ದಕ್ಷಿಣ ಚಿತ್ರ ರಂಗದ ಖ್ಯಾತ ನಟಿ ಸಮಂತಾ ರುತ್ ಪ್ರಭು ಮತ್ತು ನಟ ನಾಗ ಚೈತನ್ಯ ಅವರ ವಿವಾಹ ವಿಚ್ಚೆದನೆಯ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ, ವಿಚ್ಚೆದನೆಯ ಕೆಲವೇ ದಿನಗಳ ಬಳಿಕ ನಾಗ ಚೈತನ್ಯ ನಟಿಯೋರ್ವಳ ಜೊತೆಗೆ ಸಂಬಂಧದಲ್ಲಿರುವ ಸುದ್ದಿಗಳು ಬರಲಾರಂಭಿಸಿವೆ. ನಾಗ್ ಅವರ ಜೊತೆ ಅವರ ಹೊಸ ಲೇಡಿ ಲವ್ ಕಾಣಿಸಿಕೊಂಡಿರುವ ಸುದ್ದಿಗಳು ಕೂಡ ಬಿತ್ತರಗೊಂಡಿದ್ದವು. ಆದರೆ, ಇದೀಗ ನಾಗ ಚೈತನ್ಯ ಅವರ ಸಂಬಂಧದ ಕುರಿತು ಅವರ ಮಾಜಿ ಪತ್ನಿ ಸಮಂತಾ ಮೌನ ಮುರಿದಿದ್ದಾಳೆ. ನಟಿ ನೀಡಿರುವ ಪ್ರತಿಕ್ರಿಯೆಗೆ ಖುದ್ದು ನಾಗ ಚೈತನ್ಯ ಅವರೇ ನಿಬ್ಬೇರಗಾಗಿದ್ದಾರೆ ಎನ್ನಲಾಗಿದೆ. 

 
 
 
 

 
 
 
 
 
 
 
 
 
 
 

A post shared by Chay Akkineni (@chayakkineni)

 
 
 
 

 
 
 
 
 
 
 
 
 
 
 

A post shared by Sobhita Dhulipala (@sobhitad)

ಶೋಭಿತಾ ಧೂಳಿಪಾಲ ಜೋತೆಗೆ ನಾಗ ಚೈತನ್ಯ ಡೇಟ್
ಮಾಧ್ಯಮ ವರದಿಗಳ ಪ್ರಕಾರ ಸಮಂತಾ ಜೊತೆ ವಿವಾಹ ವಿಚ್ಛೇದನೆ ಪಡೆದ ಬಳಿಕ ನಾಗ ಚೈತನ್ಯ ನಟಿ ಶೋಭಿತಾ ಧೂಳಿಪಾಲ ಜೊತೆಗೆ ಡೇಟ್ ನಡೆಸುತ್ತಿದ್ದಾರೆ ಎನ್ನಲಾಗಿದೆ. ಶೋಭಿತಾ ಧೂಳಿಪಾಲ ಓರ್ವ ನಟಿಯಾಗಿದ್ದು, ಹಲವು ವೆಬ್ ಸೀರೀಸ್ ಹಾಗೂ ಚಿತ್ರಗಳಲ್ಲಿ ನಟಿಸಿದ್ದಾಳೆ ಎನ್ನಲಾಗಿದೆ. ನಾಗ ಚೈತನ್ಯ ಅವರ ಮನೆಯಲ್ಲಿ ಶೋಭಿತಾ ಮೊಟ್ಟಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದಾಗ, ಅವರಿಬ್ಬರ ಅಫೈರ್ ಕುರಿತಾದ ವದಂತಿಗಳಿಗೆ ಬಲ ಸಿಕ್ಕಂತಾಗಿದೆ. ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರವಾಗಿ ಈ ಕುರಿತಾದ ಸುದ್ದಿಗಳು ವೈರಲ್ ಆಗುತ್ತಿವೆ.

ಇದನ್ನೂ ಓದಿ-Vikrant Rona: ಎಷ್ಟಾಗಲಿದೆ ʻವಿಕ್ರಾಂತ್ ರೋಣʼ ಕಲೆಕ್ಷನ್? ಕಿಚ್ಚನ ಲೆಕ್ಕಾಚಾರವೇನು!

ಅಫೈರ್ ವರದಿಗಳ ಕುರಿತು ಮೌನ ಮುರಿದ ಸಮಂತಾ
ಇದೀಗ ಸಮಂತಾ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಸ್ಟೋರಿಯೊಂದನ್ನು ಹಂಚಿಕೊಂಡಿದ್ದಾಳೆ. ಈ ಪೋಸ್ಟ್ ಅನ್ನು ಸಮಂತಾ ಖ್ಯಾತ ನಟ ರಣವೀರ್ ಸಿಂಗ್ ಅವರ ಪ್ರೊಫೈಲ್ ನಿಂದ ತೆಗೆದುಕೊಂಡಿದ್ದಾಳೆ. ಈ ಪೋಸ್ಟ್ ಸಂದರ್ಶನವೊಂದಕ್ಕೆ ಸಂಬಂಧಿಸಿದೆ. ಸಮಂತಾ ಹಂಚಿಕೊಂಡ ಕೊಟ್ ನಲ್ಲಿ ' ದುಃಖ ಪ್ರತಿಯೊಬ್ಬರ ಜೀವನಕ್ಕೆ ಹೊಂದಿಕೊಂಡೇ ಇರುತ್ತದೆ. ಹೀಗಾಗಿ ಜೀವನದಲ್ಲಿ ತಮಾಷೆ ಮಾಡುವುದು ನನಗೆ ಇಷ್ಟ. ನನಗೆ ಇದಕ್ಕಿಂತ ಹಗುರವಾಗಿರಲು ಇಷ್ಟ' ಎಂದು ಬರೆಯಲಾಗಿದೆ. ತನ್ನ ಮಾಜಿ ಪತಿಯ ಅಫೈರ್ ಸುದ್ದಿಗಳು ನಿರಂತರವಾಗಿ ಬರುತಿರುವ ಹಿನ್ನೆಲೆ ಸಮಂತಾ ಹಂಚಿಕೊಂಡ ಈ ಪೋಸ್ಟ್ ಭಾರಿ ಮಹತ್ವ ಪಡೆದುಕೊಂಡಿದೆ. ಹೀಗಿರುವಾಗ ನಟಿಯ ಈ ಪೋಸ್ಟ್ ಅನ್ನು ನಾಗ ಚೈತನ್ಯ ಅವರ ಅಫೈರ್ ವದಂತಿಗಳಿಗೆ ಜೋಡಿಸಿ ನೋಡಬಹುದಾಗಿದೆ. 

ಇದನ್ನೂ ಓದಿ-Sanjanaa Galrani: ಸಂಜನಾ ಗಲ್ರಾನಿ ಮಗನ ಹೆಸರೇನು ಗೊತ್ತಾ? ಇಲ್ಲಿದೆ ಮಗುವಿನ ಮುದ್ದಾದ ವಿಡಿಯೋ

ವಿಚ್ಛೇದನೆಯ ಬಳಿಕ ನಿರಂತರ ಟ್ರೋಲ್ ಗೆ ಒಳಗಾಗುತ್ತಿರುವ ಸಮಂತಾ
ನಾಗ ಚೈತನ್ಯ ಹಾಗೂ ಸಮಂತಾ ವಿವಾಹ ವಿಚ್ಛೇದನೆಗೆ ಇದೀಗ ಸಾಕಷ್ಟು ಸಮಯ ಗತಿಸಿದೆ. ಆದರೆ, ಇದುವರೆಗೂ ಕೂಡ ಅವರನ್ನು ವಿಚ್ಛೇದನೆಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೊಲ್ ಗೆ ಒಳಪಡಿಸಲಾಗುತ್ತಿದೆ. ಆದರೆ, ನಟಿಯೂ ಕೂಡ ಕಾಲಕಾಲಕ್ಕೆ ತಕ್ಕ ಉತ್ತರಗಳನ್ನು ನೀಡುವ ಮೂಲಕ ಟ್ರೋಲರ್ ಗಳ ಬಾಯಿಗೆ ಬೀಗ ಜಡಿಯುತ್ತ ಬಂದಿದ್ದಾಳೆ. ವೃತ್ತಿ ಜೀವನದ ಕುರಿತು ಹೇಳುವುದಾದರೆ, ಶೀಘ್ರದಲ್ಲಿಯೇ ಸಮಂತಾ, ಖ್ಯಾತ ಬಾಲಿವುಡ್ ನಟ ಅಕ್ಷಯ ಕುಮಾರ್ ಅವರೊಂದಿಗೆ 'ಕಾಫಿ ವಿಥ್ ಕರಣ್ ಸೀಜನ್ 7' ನಲ್ಲಿ ಕಾಣಿಸಿಕೊಳ್ಳಲಿದ್ದಾಳೆ ಎನ್ನಲಾಗಿದೆ. ಆದರೆ, ಇದುವರೆಗೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. 

ಇದನ್ನೂ ನೋಡಿ-

Trending News