Sai Dharam Tej: ಕಾಳಹಸ್ತಿಯಲ್ಲಿ ಆರತಿ ಮಾಡಿ ವಿವಾದಕ್ಕೆ ಸಿಲುಕಿದ ಖ್ಯಾತ ನಟ

Sai Dharam Tej Controversy: ಶ್ರೀಕಾಳಹಸ್ತಿಯಲ್ಲಿರುವ ಸುಬ್ರಹ್ಮಣ್ಯ ದೇವರಿಗೆ ಆರತಿ ಮಾಡಿದ ನಟ ಸಾಯಿಧರಂ ತೇಜ್ ಮೇಲೆ ಭಕ್ತರು ಕೋಪಗೊಂಡಿದ್ದಾರೆ. ಇದಕ್ಕೆ ಅನುಮತಿ ನೀಡಿದ್ದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. 

Written by - Chetana Devarmani | Last Updated : Jul 15, 2023, 05:54 PM IST
  • ಕಾಳಹಸ್ತಿಯಲ್ಲಿ ಆರತಿ ಮಾಡಿ ವಿವಾದಕ್ಕೆ ಸಿಲುಕಿದ ಖ್ಯಾತ ನಟ
  • ಸುಬ್ರಹ್ಮಣ್ಯ ದೇವರಿಗೆ ಆರತಿ ಮಾಡಿದ ನಟ ಸಾಯಿಧರಂ ತೇಜ್
  • ಸಾಯಿಧರಂ ತೇಜ್ ಆರತಿ ಮಾಡುವ ವಿಡಿಯೋ ವೈರಲ್
Sai Dharam Tej: ಕಾಳಹಸ್ತಿಯಲ್ಲಿ ಆರತಿ ಮಾಡಿ ವಿವಾದಕ್ಕೆ ಸಿಲುಕಿದ ಖ್ಯಾತ ನಟ  title=
Sai Dharam Tej

Sai Dharam Tej  in Kalahasti: ಸಿನಿಮಾ ನಟ ಹಾಗೂ ಮೆಗಾ ಹೀರೋ ಸಾಯಿಧರಂ ತೇಜ್ ವಿವಾದದಲ್ಲಿ ಸಿಲುಕಿದ್ದಾರೆ. ಶ್ರೀಕಾಳಹಸ್ತಿಯಲ್ಲಿರುವ ಸುಬ್ರಹ್ಮಣ್ಯ ದೇವರಿಗೆ ಆರತಿ ಮಾಡಿದ ನಟನ ಮೇಲೆ ಭಕ್ತರು ಕೋಪಗೊಂಡಿದ್ದಾರೆ. ತೇಜ್ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದರು. ಆದರೆ ಅಲ್ಲಿ ಅರ್ಚಕರು ಇಲ್ಲದ ಕಾರಣ ಸಾಯಿಧರಂ ತೇಜ್ ಅವರೇ ಆರತಿ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಅರ್ಚಕರನ್ನು ಬಿಟ್ಟು ಬೇರೆ ಯಾರೂ ಆರತಿ ಮಾಡಬಾರದು ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಅನುಮತಿ ನೀಡಿದ್ದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. ಸಾಯಿಧರಂ ತೇಜ್ ಆರತಿ ಮಾಡುವ ವಿಡಿಯೋ ವೈರಲ್ ಆಗುತ್ತಿದೆ. ಇದರಿಂದ ದೇವಸ್ಥಾನದ ಅಧಿಕಾರಿಗಳು ಹಾಗೂ ಸಾಯಿಧರಂ ತೇಜ್ ಮೇಲೆ ಭಕ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 

ಇತ್ತೀಚೆಗಷ್ಟೇ ವಿರೂಪಾಕ್ಷ ಸಿನಿಮಾದ ಮೂಲಕ ಸಾಯಿಧರಂ ತೇಜ್ ಗೆ ಸೂಪರ್ ಹಿಟ್ ಸಿಕ್ಕಿತ್ತು. ಡಿಫರೆಂಟ್ ಕಾನ್ಸೆಪ್ಟ್‌ನಲ್ಲಿ ಬಂದ ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಯಿತು. ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಸುರಿಮಳೆಯಾಯಿತು. ಪ್ರಸ್ತುತ, ಅವರು ತಮ್ಮ ಚಿಕ್ಕಪ್ಪ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರೊಂದಿಗೆ ಬ್ರೋ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: Bollywood Actresses: ನಟರಿಗಿಂತ ಹೆಚ್ಚು ಸಂಭಾವನೆ ಹೊಂದಿದ್ದಾರೆ ಈ 5 ನಟಿಯರು.!

ರಸ್ತೆ ಅಪಘಾತದ ನಂತರ ಹೆಚ್ಚು ಹೊರಗೆ ಬರದ ಸಾಯಿಧರಂ ತೇಜ್ ಸದ್ಯ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಕಾಣಿಪಾಕಂ ವಿನಾಯಕ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಶ್ರೀಕಾಳಹಸ್ತಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲಿಂದ ಕಡಪಾ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸಾಯಿಧರಂ ತೇಜ್ ಅವರನ್ನು ನೋಡಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಇದು ನನಗೆ ಮರುಜನ್ಮ.. ದೇವರು ಮರುಜನ್ಮ ಕೊಟ್ಟಿದ್ದಾನೆ ಎಂದು ಸಾಯಿಧರಂ ತೇಜ್ ಹೇಳಿದ್ದಾರೆ. ಅದಕ್ಕಾಗಿಯೇ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದರು. ಚಿತ್ರದಲ್ಲಿ ಚಿಕ್ಕಪ್ಪನ ಜೊತೆ ನಟಿಸಿದ್ದು ಮರೆಯಲಾಗದ ಅನುಭವ. ಅವರೊಂದಿಗೆ ನಟಿಸುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ: Jawan: ಶಾರುಖ್ ಬೋಳು ತಲೆ ಮೇಲಿನ Tattoo ರಹಸ್ಯ ಕೊನೆಗೂ ಬಯಲು.! 

ತಮಿಳಿನ ವಿನೋದ ಸೀತಂ ಚಿತ್ರದ ರಿಮೇಕ್ ಆಗಿರುವ ಈ ಚಿತ್ರವನ್ನು ಸಮುದ್ರಖನಿ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದಿಂದ ಪವನ್ ಕಲ್ಯಾಣ, ಸಾಯಿಧರಂ ತೇಜ್ ಲುಕ್‌ಗಳು ಈಗಾಗಲೇ ಬಿಡುಗಡೆಯಾಗಿದ್ದು, ಟೀಸರ್ ಕೂಡ ರಿಲೀಸ್ ಆಗಿದೆ.. ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಚಿತ್ರದ ಹಾಡೊಂದು ಶನಿವಾರ ಬಿಡುಗಡೆಯಾಗಲಿದೆ. ಜುಲೈ 28 ರಂದು ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸಿದ್ದಾರೆ. ತಮಿಳಿನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದರಿಂದ ತೆಲುಗಿನಲ್ಲೂ ಭಾರೀ ನಿರೀಕ್ಷೆ ಹುಟ್ಟಿಕೊಂಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News