Kantara Bhutakola: ನಟ ಚೇತನ್​ಗೆ ರಿಯಲ್ ಸ್ಟಾರ್ ಉಪೇಂದ್ರ ಖಡಕ್ ರಿಯಾಕ್ಷನ್

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಪ್ಯಾನ್ ಇಂಡಿಯಾ ಸಿನಿಮಾವಾಗಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಎಲ್ಲೆಡೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. 

Written by - Puttaraj K Alur | Last Updated : Oct 20, 2022, 12:56 PM IST
  • ಭೂತಕೋಲ ಹಿಂದೂ ಸಂಸ್ಕೃತಿ ಎಂದಿರೋ ರಿಷಬ್ ಶೆಟ್ಟಿ ಹೇಳಿಕೆಗೆ ನಟ ಚೇತನ್ ವಿರೋಧ ವಿಚಾರ
  • ನಟ ಚೇತನ್ ಹೇಳಿಕೆಗೆ ಖಡಕ್ ಪ್ರತಿಕ್ರಿಯೆ ನೀಡಿದ ರಿಯಲ್ ಸ್ಟಾರ್ ಉಪೇಂದ್ರ
  • ಇಂತಹ ವಿಚಾರಗಳನ್ನು ಜಾಸ್ತಿ ಪ್ರೋತ್ಸಾಹಿಸದೇ ನಿರ್ಲಕ್ಷ್ಯ ಮಾಡಬೇಕು ಎಂದ ‘ಬುದ್ದಿವಂತ’!
Kantara Bhutakola: ನಟ ಚೇತನ್​ಗೆ ರಿಯಲ್ ಸ್ಟಾರ್ ಉಪೇಂದ್ರ ಖಡಕ್ ರಿಯಾಕ್ಷನ್ title=
ರಿಯಲ್ ಸ್ಟಾರ್ ಉಪ್ಪಿ ಹೇಳಿದ್ದೇನು?

ಬೆಂಗಳೂರು: ನಟ & ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ’ ಸಿನಿಮಾದ ಬಗ್ಗೆ ಇದೀಗ ವ್ಯಾಪಕ ಚರ್ಚೆಯಾಗುತ್ತಿದೆ. ಭೂತಕೋಲ ಹಿಂದೂ ಸಂಸ್ಕೃತಿ ಎಂದಿರೋ ರಿಷಬ್ ಶೆಟ್ಟಿ ಹೇಳಿಕೆಗೆ ನಟ ಚೇತನ್ ವಿರೋಧ ವ್ಯಕ್ತಪಡಿಸಿದ್ದಾರೆ.

ರಿಷಬ್ ಶೆಟ್ಟಿ ಮಾತು ಸುಳ್ಳು, ನಮ್ಮ ಪಂಬದ, ನಲಿಕೆ, ಪರವರ ಬಹುಜನ ಸಂಪ್ರದಾಯಗಳು. ವೈದಿಕ ಬ್ರಾಹ್ಮಣೀಯ ಹಿಂದೂ ಧರ್ಮಕ್ಕಿಂತ ಹಿಂದಿನವು. ಮೂಲ ನಿವಾಸಿ ಸಂಸ್ಕೃತಿಗಳನ್ನು ಪರದೆ ಮೇಲೆ ಮತ್ತು ಹೊರಗೆ ಸತ್ಯದೊಂದಿಗೆ ಪ್ರದರ್ಶಿಸಬೇಕು’ ಎಂದು ನಟ ಚೇತನ್ ಟ್ವೀಟ್ ಮಾಡಿದ್ದರು. ಇದೀಗ ‘ಕಾಂತಾರ’ ಸಿನಿಮಾದ ಬಗ್ಗೆ ಚೇತನ್ ಹೇಳಿಕೆಗೆ ಉಪೇಂದ್ರ ಖಡಕ್ ರಿಯಾಕ್ಷನ್ ನೀಡಿದ್ದಾರೆ.

ಇದನ್ನೂ ಓದಿ: BBK9 : ಬಿಗ್ ಬಾಸ್ ಈ ವಾರಾಂತ್ಯದ ಸಂಚಿಕೆಗೆ ಕಿಚ್ಚ ಸುದೀಪ್ ಗೈರು?

‘ಇಂತಹ ವಿಷಯಗಳ ಬಗ್ಗೆ ಮಾತನಾಡದಿರುವುದೇ ಸೂಕ್ತ. ಇಂತಹ ವಿಚಾರಗಳ ಬಗ್ಗೆ ಮಾತಾನಾಡಿದಷ್ಟು ಅದು ಬೆಳೆಯುತ್ತದೆ. ಇದನ್ನು ಜಾಸ್ತಿ ಪ್ರೋತ್ಸಾಹಿಸದೇ ನಿರ್ಲಕ್ಷ್ಯ ಮಾಡಬೇಕು. ಇಲ್ಲಾಂದ್ರೆ ನಾವೇ ಬೆಂಕಿಗೆ ಮತ್ತಷ್ಟು ತುಪ್ಪು ಸುರಿದ ಹಾಗಾಗುತ್ತದೆ. ಈ ವಿಷಯದ ಬಗ್ಗೆ ಚರ್ಚೆ ಮಾಡೋದನ್ನು ಬಿಟ್ಟುಬಿಡಬೇಕು. ದೈವ, ದೈವಾರಾಧನೆ ಎಲ್ಲಾ ವೈಯಕ್ತಿಕ ವಿಚಾರ ಮತ್ತು ನಮ್ಮ ನಂಬಿಕೆಗಳು. ಇದರ ಬಗ್ಗೆ ನಾವು ಸಾಮಾಜಿಕವಾಗಿ ಕಿತ್ತಾಡುವುದು ಸರಿಯಲ್ಲ’ ಎಂದು ಹೇಳಿದ್ದಾರೆ.  

‘ನಾನು ಸಹ ಕರಾವಳಿ ಪ್ರದೇಶದವನೇ, ನಾನು ಸಹ ಅಲ್ಲಿನ ಧಾರ್ಮಿಕ ಆಚರಣಗಳನ್ನು ನೋಡಿದ್ದೇನೆ. ದೈವಾರಾಧನೆ ಬಗ್ಗೆ ವಿಶೇಷ ಮಹತ್ವವಿದೆ. ಇವತ್ತಿಗೂ ಕೂಡ ನಮ್ಮ ತಂದೆಯವರು ಪ್ರತಿವರ್ಷ ನಾಗರಪೂಜೆ ಮಾಡುತ್ತಾರೆ. ಅದು ಬಹಳ ನಂಬಿಕೆ ಇರುವಂತಹ ಜಾಗ. ಸುಖಾಸುಮ್ಮನೆ ಅದರ ಬಗ್ಗೆ ಮಾತನಾಡಬಾರದು. ತುಂಬಾ ತಿಳಿದುಕೊಂಡೇ ರಿಷಬ್ ಶೆಟ್ಟಿ ‘ಕಾಂತಾರ’ ಸಿನಿಮಾ ಮಾಡಿದ್ದಾರೆ. ದೈವಾರಾಧನೆ ಬಗ್ಗೆ ಅದ್ಭುತವಾಗಿ ಸಿನಿಮಾ ನಿರ್ಮಿಸಿರುವುದು ಸಂತೋಷ. ನನಗೂ ಈ ರೀತಿಯ ಸಿನಿಮಾ ಮಾಡುವ ಆಸೆ ಇದೆ. ಮುಂದೆ ಈ ಸಿನಿಮಾ ಮಾಡುವ ಬಗ್ಗೆ ರಿಷಬ್ ಶೆಟ್ಟಿ ಜೊತೆಗೆ ನಾನು ಮಾತನಾಡುತ್ತೇನೆ’ ಅಂತಾ ಉಪೇಂದ್ರ ಹೇಳಿದ್ದಾರೆ.

ಇದನ್ನೂ ಓದಿ: ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಆರಂಭ - ಈ ಬಾರಿಯೂ ಸಿಗಲಿದೆ ಭರಪೂರ ಮನರಂಜನೆ

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಪ್ಯಾನ್ ಇಂಡಿಯಾ ಸಿನಿಮಾವಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಎಲ್ಲೆಡೆ ಉತ್ತಮ ಪ್ರಶಂಸೆ ಗಳಿಸುತ್ತಿರುವ ಈ ಸಿನಿಮಾ ಈಗಾಗಲೇ ಗಳಿಕೆಯಲ್ಲಿ 100 ಕೋಟಿ ರೂ. ಕ್ಲಬ್ ದಾಟಿದ್ದು, ಹೊಸ ದಾಖಲೆ ನಿರ್ಮಿಸುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News