ರಕ್ಷಿತ್ ಶೆಟ್ಟಿಯಂತೆ ವಿಜಯ್ ದೇವರಕೊಂಡಗೆ ʻಆ Feelʼ ಇರಲಿಲ್ಲ : ರಶ್ಮಿಕಾ ಮಂದಣ್ಣ

Rashmika Mandanna : ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್‌ ನಂತರ ನಟ ವಿಜಯ್‌ ದೇವರಕೊಂಡ ತನ್ನನ್ನು ಹೇಗೆ ಸಮಾಧಾನಪಡಿಸಿದರು ಎಂಬುದರ ಕುರಿತು ರಶ್ಮಿಕಾ ಮಾತನಾಡಿದ್ದಾರೆ.

Written by - Chetana Devarmani | Last Updated : Oct 15, 2022, 04:41 PM IST
  • ರಕ್ಷಿತ್‌ ಶೆಟ್ಟಿ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದೇನು?
  • ರಕ್ಷಿತ್ ಶೆಟ್ಟಿಯಂತೆ ವಿಜಯ್ ದೇವರಕೊಂಡಗೆ 'Insecure Feel' ಇರಲಿಲ್ಲ
  • ವಿಜಯ ದೇವರಕೊಂಡ ಜೊತೆ ಪ್ರೀತಿಯಲ್ಲಿದ್ದಾರಾ ನ್ಯಾಷನಲ್‌ ಕ್ರಷ್!
ರಕ್ಷಿತ್ ಶೆಟ್ಟಿಯಂತೆ ವಿಜಯ್ ದೇವರಕೊಂಡಗೆ ʻಆ Feelʼ ಇರಲಿಲ್ಲ : ರಶ್ಮಿಕಾ ಮಂದಣ್ಣ  title=
ರಶ್ಮಿಕಾ ಮಂದಣ್ಣ

Rashmika Mandanna : ಕಿರಿಕ್ ಪಾರ್ಟಿ ಸೆಟ್‌ನಲ್ಲಿ ಭೇಟಿಯಾಗಿ ಪ್ರೀತಿಯಲ್ಲಿ ಬಿದ್ದ ನಂತರ ರಕ್ಷಿತ್‌ ಶೆಟ್ಟಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಶ್ಮಿಕಾ ಇದೀಗ ನ್ಯಾಷನ್‌ ಕ್ರಷ್‌ ಆಗಿದ್ದಾರೆ. ಕಿರಿಕ್‌ ಪಾರ್ಟಿ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ರಶ್ಮಿಕಾ ಇದೀಗ ಬಾಲಿವುಡ್‌ ಸಿನಿಮಾಗಳಲ್ಲೂ ಮಿಂಚುತ್ತಿದ್ದಾರೆ. 2017 ರಲ್ಲಿ ರಕ್ಷಿತ್‌ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಂತರ ಇಬ್ಬರೂ ಮದುವೆ ಆಗುವ ದಿನಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದರು. ಆದರೆ ರಶ್ಮಿಕಾಗೆ ಅದಾಗಲೇ ತೆಲುಗು ಸಿನಿಮಾಗಳಲ್ಲಿ ಚಾನ್ಸ್‌ ಗಿಟ್ಟಿಸಿಕೊಳ್ಳುವ ಹೊಸ್ತಿಲಲ್ಲಿದ್ದರು. ಇನ್ನೇನೂ ರಶ್ಮಿಕಾ ಮತ್ತು ರಕ್ಷಿತ್‌ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎನ್ನುವಷ್ಟರಲ್ಲೇ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿತು. ಎಂಗೇಜ್‌ಮೆಂಟ್‌ ಆದ ಒಂದು ವರ್ಷದ ನಂತರ ಬೇರೆಯಾಗಲು ನಿರ್ಧರಿಸಿದರು. 

ಇದನ್ನೂ ಓದಿ : XXX Web Series: 'ಯುವ ಪೀಳಿಗೆಯ ತಲೆ ಹಾಳು ಮಾಡುತ್ತಿರುವಿರಿ', ಏಕ್ತಾ ಕಪೂರ್ ಗೆ ಸುಪ್ರೀಂ ಛೀಮಾರಿ

ಆ ಬಳಿಕ 2020 ರಲ್ಲಿ ವಿಜಯ್ ದೇವರಕೊಂಡ ಅವರೊಂದಿಗೆ ರಶ್ಮಿಕಾ ಸಂಬಂಧದಲ್ಲಿದ್ದಾರೆ ಏಂಬ ಗಾಸಿಪ್‌ ಶೂರುವಾಯ್ತು. ಗೀತ ಗೋವಿಂದಂ ಚಿತ್ರೀಕರಣ ಮಾಡುವಾಗಲೂ ಅವರ ನಡುವೆ ಕೆಮಿಸ್ಟ್ರಿ ಇತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಹಿಂದಿನ ಸಂದರ್ಶನವೊಂದರಲ್ಲಿ ರಶ್ಮಿಕಾ ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತನ್ನ ಮಾಜಿ ಗೆಳೆಯ ರಕ್ಷಿತ್ ಶೆಟ್ಟಿಗಿಂತ ನಾನು ಅವನನ್ನು ಹೆಚ್ಚು ಇಷ್ಟಪಡುತ್ತೇನೆ ಎಂದು ರಶ್ಮಿಕಾ ಹೇಳಿದ್ದಾರೆ.

ಇಂಟರ್‌ನ್ಯಾಶನಲ್ ಬ್ಯುಸಿನೆಸ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ, “ಅವರು (ವಿಜಯ್ ದೇವರಕೊಂಡ) ತನ್ನದೇ ಆದ ಜಗತ್ತಿನಲ್ಲಿ ಸಂತೋಷವಾಗಿರುವ ಸರಳ ವ್ಯಕ್ತಿ. ಗೀತ ಗೋವಿಂದಂ ಸಮಯದಲ್ಲಿ ನಾವು ಕೇವಲ ಸ್ನೇಹಿತರಾಗಿದ್ದೇವೆ, ಆದರೆ ನಾವು ನಿರ್ಲಕ್ಷಿಸಲಾಗದ ಒಂದು ರೀತಿಯ ಸ್ಪಾರ್ಕ್‌ ಇತ್ತು. ಕೆಲವೊಮ್ಮೆ, ನನ್ನ ಹೃದಯವು ‘ಅವನು ವಿಶೇಷ, ಅವನು ವಿಶೇಷ’ ಎಂದು ಹೇಳುತ್ತಲೇ ಇರುತ್ತದೆ. ಆದರೆ, ನಾವು ಡಿಯರ್ ಕಾಮ್ರೇಡ್‌ನಲ್ಲಿ ಒಟ್ಟಿಗೆ ಕೆಲಸ ಮಾಡಲು ಪ್ರಾರಂಭಿಸಿದ ನಂತರ ಕೆಮೆಸ್ಟ್ರಿ ಬದಲಾಯಿತು" ಎಂದಿದ್ದಾರೆ. 

ರಕ್ಷಿತ್ ಜೊತೆಗಿನ ಬ್ರೇಕಪ್‌ ನಂತರ ನಟ ವಿಜಯ್‌ ದೇವರಕೊಂಡ ತನ್ನನ್ನು ಹೇಗೆ ಸಮಾಧಾನಪಡಿಸಿದರು ಎಂಬುದರ ಕುರಿತು ರಶ್ಮಿಕಾ ಮಾತನಾಡಿದ್ದಾರೆ. ನಟಿ ರಕ್ಷಿತ್ ಶೆಟ್ಟಿಯಿಂದ ಬೇರ್ಪಡುತ್ತಿರುವುದನ್ನು ಬಹಿರಂಗಪಡಿಸಿದರು. ಆಕೆಗೆ ಕಾಳಜಿಯ ಅಗತ್ಯವಿತ್ತು, ಅವರು ನಂಬಲಾಗದಷ್ಟು ದುರ್ಬಲಳಾಗಿದ್ದ ಸಮಯದಲ್ಲಿ ದೇವರಕೊಂಡ ಅವರಿಗೆ ಕೇರ್‌ ಮಾಡಿದರು ಎಂದು ರಶ್ಮಿಕಾ ಹೇಳಿದ್ದಾರೆ. 

ಇದನ್ನೂ ಓದಿ : Rishab Shetty: ಪ್ರಶಾಂತ್ ಶೆಟ್ಟಿ ಎಂಬ ಕುಂದಾಪುರದ ಕುವರ ರಿಷಬ್ ಶೆಟ್ಟಿ ಆಗಿದ್ದು ಹೇಗೆ?

"ಒಂದು ಹಂತದಲ್ಲಿ, ನಾನು ವಿಜಯ್ ದೇವರಕೊಂಡ ಅವರಿಗೆ ನನ್ನ ಪ್ರೀತಿಯನ್ನು ಒಪ್ಪಿಕೊಂಡೆ, ಆದರೆ ಅವರು ಆರಂಭದಲ್ಲಿ ಹಿಂಜರಿದರು. ಆದರೆ ಅವರಿಗೂ ನನ್ನ ಬಗ್ಗೆ ವಿಶೇಷ ಭಾವನೆ ಇತ್ತು. ಆದ್ದರಿಂದ, ಅವರು ಒಪ್ಪಿಕೊಂಡರು ಮತ್ತು ನಮ್ಮ ಪ್ರೀತಿಯು ಅರಳಿದ ರೀತಿಯಲ್ಲಿ ನಾವು ಸಂತೋಷವಾಗಿದ್ದೇವೆ. ಅವರು ನನ್ನ ಮಾಜಿ ಗೆಳೆಯ ರಕ್ಷಿತ್ ಶೆಟ್ಟಿಯಂತೆ ಅಸುರಕ್ಷಿತ ವ್ಯಕ್ತಿಯಲ್ಲ ಅಥವಾ ನನ್ನ ವೃತ್ತಿಜೀವನವನ್ನು ತ್ಯಾಗ ಮಾಡುವಂತೆ ಸೂಚಿಸುವುದಿಲ್ಲ. ಅವರು ಮುಕ್ತ ಮನಸ್ಸಿನ ವ್ಯಕ್ತಿ ಮತ್ತು ನಾನು ಶಾಶ್ವತವಾಗಿ ಸ್ವತಂತ್ರನಾಗಿರಬೇಕೆಂದು ಬಯಸುತ್ತಾರೆ" ಎಂದು ರಶ್ಮಿಕಾ ಹೇಳಿದ್ದಾರೆ. 

ಮದುವೆಯ ಯೋಜನೆಗಳ ಬಗ್ಗೆ ಕೇಳಿದಾಗ ನಟಿ ರಶ್ಮಿಕಾ, ತಮ್ಮ ಮುಖ್ಯ ಆದ್ಯತೆ ಅವರ ಉದ್ಯೋಗ ಎಂದು ಉತ್ತರಿಸಿದರು. ಇಬ್ಬರೂ ತಮ್ಮ ವೃತ್ತಿಜೀವನದ ನಿರ್ಣಾಯಕ ಹಂತದಲ್ಲಿರುವುದರಿಂದ ಅವರು ಮದುವೆಯಾಗುವ ಬಗ್ಗೆ ಯೋಚಿಸಲಿಲ್ಲ. ಮುಂದಿನ 5-7 ವರ್ಷಗಳವರೆಗೆ ಮದುವೆ ಯೋಜನೆ ಇಲ್ಲ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News