Puttakkana Makkalu : ಅವ್ವನನ್ನೇ ಎದ್ರಾಕ್ಕೊಂಡು ಸ್ನೇಹಾ ಪರ ಮಾತಾಡ್ತಿರೋ ಕಂಠಿಗೆ ಅರೆಸ್ಟ್ ವಾರೆಂಟ್..!

Puttakkana Makkalu Kanti Arrest : ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅದ್ಭುತವಾಗಿ ಮೂಡಿಬರುತ್ತಿದ್ದು, ಸೀರಿಯಲ್‌ನಲ್ಲಿ ಇದೀಗ ದೊಡ್ಡ ತಿರುವು ಎದುರಾಗಿದೆ. ಕಂಠಿ ಸ್ನೇಹಾಳಿಗೆ ತಾಳಿ ಕಟ್ಟಿ ತಾಯಿ ಬಂಗಾರಮ್ಮನಿಗೆ ಎದುರಾಗಿ ನಿಂತಿದ್ದಾನೆ. ಈ ನಡುವೆ ಕಂಠಿಯನ್ನು ಅರೆಸ್ಟ್‌ ಮಾಡಲು ಪೋಲಿಸ್‌ ಮೆನೆಗೆ ಬಂದಿದ್ದಾರೆ.  

Written by - Savita M B | Last Updated : Jul 8, 2023, 10:20 AM IST
  • ಪರೀಕ್ಷೆ ಬರೆಯಲು ಹೊರಟ ಸ್ನೇಹಾಳಿಗೆ ತಾಳಿ ಕಟ್ಟಿ ಕಂಠಿ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾನೆ.
  • ಸದ್ಯ ಬಹಳ ನೋವಿನಲ್ಲಿರುವ ಕಂಠಿ ಮೆನೆಗೆ ಬರುತ್ತಾನೆ.
  • ಮನೆಗೆ ಬಂದ ಮಗನನ್ನು ಬಂಗಾರಮ್ಮ ಪ್ರಶ್ನಿಸುತ್ತಾಳೆ.
Puttakkana Makkalu : ಅವ್ವನನ್ನೇ ಎದ್ರಾಕ್ಕೊಂಡು ಸ್ನೇಹಾ ಪರ ಮಾತಾಡ್ತಿರೋ ಕಂಠಿಗೆ ಅರೆಸ್ಟ್ ವಾರೆಂಟ್..!  title=

Puttakkana Makkalu : ಪರೀಕ್ಷೆ ಬರೆಯಲು ಹೊರಟ ಸ್ನೇಹಾಳಿಗೆ ಕಂಠಿ ತಾಳಿ ಕಟ್ಟಿ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾನೆ. ಸದ್ಯ ಬಹಳ ನೋವಿನಲ್ಲಿರುವ ಕಂಠಿ ಮೆನೆಗೆ ಬರುತ್ತಾನೆ. ಮನೆಗೆ ಬಂದ ಮಗನನ್ನು ಬಂಗಾರಮ್ಮ ಪ್ರಶ್ನಿಸುತ್ತಾಳೆ. ಎಲ್ಲಿಗೆ ಹೋಗಿದ್ದೇ ಕಂಠಿ ಎಂದು ಕೇಳಿದಾಗ ಮಗ ಒಂದು ಮಾತನಾಡದೇ ಇರುವುನ್ನು ಕಂಡ ಬಂಗಾರಮ್ಮ ನಾನು ನಿನ್ನ ಬಳಿ ಅಂದೇ ಪ್ರಶ್ನೆ ಮಾಡಿದ್ದರೆ ಎಲ್ಲವೂ ಚೆನ್ನಾಗಿ ಇರುತ್ತಿತ್ತು. ಆದರೆ ಇದೀಗ ಸಮಯ ಮೀರಿದೆ.

ಕಂಠಿ ನಿನ್ನನ್ನು ನಾನು ಆವತ್ತೇ ಪ್ರಶ್ನಿಸಿದ್ದರೆ ನೀನು ಪುಟ್ಟಕ್ಕನ ಮಗಳ ಪ್ರೀತಿಬಲೆಗೆ ಸಿಲುಕುತ್ತಿರಲಿಲ್ಲ ಎಂದೆಲ್ಲಾ ಹೇಳುತ್ತಾಳೆ ಆದರೆ ಕಂಠಿ ಮಾತ್ರ ಏನು ಮಾತನಾಡದೇ ಅಮ್ಮನ ಮುಖ ನೋಡಿ ಬಳಿಕ ಮಾತನಾಡುತ್ತಾನೆ. ಅಂದು ನಾನು ನಿಮಗೆ ಸ್ನೇಹಾಳನ್ನು ಪ್ರೀತಿಸುವ ವಿಷಯ ಹೇಳಿ ಪುಟ್ಟಕ್ಕನ ಬಳಿ ಬಂದು ಹೆಣ್ಣು ಕೇಳಿ ಎಂದು ಹೇಳಿದಾಗ ನೀವು ಒಪ್ಪಿಕೊಂಡಿದ್ದೀರಿ, ಆದರೆ ನೀವು ಪುಟ್ಟಕ್ಕನ ಬಳಿ ಮದುವೆ ನಡೆಯಲೇ ಬಾರದೆಂದು ಮಾತು ತೆಗೆದುಕೊಂಡಿದ್ದೀರಿ ಯಾಕೆ ಈ ರೀತಿ ಮಾಡಿದಿರಿ ಎಂದು ಕೇಳುತ್ತಾನೆ. 

ಇದನ್ನೂ ಓದಿ-Saptami Gowda: ರಿಷಬ್ ಶೆಟ್ಟಿ ಹುಟ್ಟು ಹಬ್ಬಕ್ಕೆ ವಿಭಿನ್ನ ಪೋಸ್ಟ್‌ ಹಂಚಿಕೊಂಡ ನಟಿ ಸಪ್ತಮಿ ಗೌಡ; ಫೋಟೊಸ್‌ ನೋಡಿ..!

ಈ ಮಾತನ್ನು ಕೇಳಿದ ಬಂಗಾರಮ್ಮ ಶಾಕ್‌ ಆಗುತ್ತಾಳೆ. ಮತ್ತೆ ಮಾತನಅಡಿದ ಕಂಠಿ ಅಮ್ಮ ನೀವು ನನಗೆ ಸ್ನೇಹಾ ಮುಖ್ಯಾನಾ ಅಥವಾ ನೀವು ಮುಖ್ಯನಾ ಎಂದು ಕೇಳಿದ್ದೀರಿ ಆದರೆ ನನಗೆ ಮೊದಲು ನೀವು ಮುಖ್ಯ ಎರಡನೇಯದಾಗಿ ಸ್ನೇಹಾ ಸಹ ಮುಖ್ಯ ನಿಮ್ಮಿಬ್ಬರಲ್ಲಿ ಯಾರನ್ನು ಕಳೆದುಕೊಳ್ಳು ನಾನು ಇಷ್ಟಪಡುವುದಿಲ್ಲ ಎಂದು ಹೇಳುತ್ತಾನೆ. ಈ ಮಾತಿಗೆ ಬಂಗಾರಮ್ಮ ಕೋಪಗೊಳ್ಳುತ್ತಾಳೆ. 

ಈ ಬಗ್ಗೆ ವಿಚಾರ ಮಾಡುತ್ತಾ ರೂಮ್‌ನ್ಲಲಿ ಕುಳಿತುಕೊಂಡ ಕಂಠಿಯನ್ನು ಕರೆದುಕೊಂಡು ಹೋಗಲು ಮನೆಗೆ ಪೊಲೀಸರು ಆಗಮಿಸುತ್ತಾರೆ. ಅವರು ಯಾರ ಮಾತು ಕೇಳದೆ ಕಂಠಿಯನ್ನು ಎಳೆದುಕೊಂಡುಹೋಗುತ್ತಾರೆ. ಕಂಠಿ ಜೋರಾಗಿ ನನ್ನ ಮೇಲೆ ಕಂಪ್ಲೆಂಟ್‌ ಕೊಟ್ಟವರು ಯಾರು ಎಂದು ಕೇಳಿದಾಗ ಸ್ನೇಹಾ ನಾನೇ ಎಂದು ಜೋರಾಗಿ ಹೇಳುತ್ತಾಳೆ. ಇದನ್ನು ನೋಡಿದ ಬಂಗಾರಮ್ಮನಿಗೆ ಸ್ನೇಹಾಳ ಮೇಲಿನ ಕೋಪ ಇನ್ನು ಹೆಚ್ಚಾಗುತ್ತದೆ ಈ ಬೆಂಕಿ ನಂದೋದು ಯಾವಾಗಾ ಕಾದುನೋಡಬೇಕಿದೆ. 

ಇದನ್ನೂ ಓದಿ-Swami Nithyananda: ನಿತ್ಯಾನಂದನ ‘ಕೈಲಾಸ’ಕ್ಕೆ ಪ್ರಧಾನಿಯಾದ ನಟಿ ರಂಜಿತಾ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 

Trending News