'ಯಾವುದೇ ಪಕ್ಷವು ನನ್ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದಿಲ್ಲ'

ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರನೌತ್ ಈಗ ತಾವು ಯಾವುದೇ ಪಕ್ಷದ ಫೇವರೆಟ್ ಅಲ್ಲ ಎಂದು ಹೇಳಿದ್ದಾರೆ.ಶಿವಸೇನಾ ಪಕ್ಷದ ಜೊತೆಗಿನ ನೇರ ವಾಗ್ವಾದ ನಂತರ ಆಕೆ ಬಿಜೆಪಿ ಪಕ್ಷವನ್ನು ಸೇರುತ್ತಾರೆ ಎನ್ನುವ ಬಲವಾದ ವದಂತಿಗಳು ಕೇಳಿ ಬಂದಿದ್ದವು.ಆದರೆ ನಂತರ ಸ್ಪಷ್ಟಪಡಿಸಿದ ಕಂಗನಾ ತಾವು ಯಾವುದೇ ರಾಜಕೀಯ ಮಹತ್ವಾಕಾಂಕ್ಷೆಯನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.

Last Updated : Dec 17, 2020, 11:25 PM IST
'ಯಾವುದೇ ಪಕ್ಷವು ನನ್ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದಿಲ್ಲ' title=

ನವದೆಹಲಿ: ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರನೌತ್ ಈಗ ತಾವು ಯಾವುದೇ ಪಕ್ಷದ ಫೇವರೆಟ್ ಅಲ್ಲ ಎಂದು ಹೇಳಿದ್ದಾರೆ.ಶಿವಸೇನಾ ಪಕ್ಷದ ಜೊತೆಗಿನ ನೇರ ವಾಗ್ವಾದ ನಂತರ ಆಕೆ ಬಿಜೆಪಿ ಪಕ್ಷವನ್ನು ಸೇರುತ್ತಾರೆ ಎನ್ನುವ ಬಲವಾದ ವದಂತಿಗಳು ಕೇಳಿ ಬಂದಿದ್ದವು.ಆದರೆ ನಂತರ ಸ್ಪಷ್ಟಪಡಿಸಿದ ಕಂಗನಾ ತಾವು ಯಾವುದೇ ರಾಜಕೀಯ ಮಹತ್ವಾಕಾಂಕ್ಷೆಯನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದ ನಟಿ ಕಂಗನಾ...! ಈ ಭೇಟಿ ಮಹತ್ವವೇನು ಗೊತ್ತೇ ?

ರೈತರ ಪ್ರತಿಭಟನೆಯ ಬಗ್ಗೆ ಗಾಯಕ ದಿಲ್ಜಿತ್ ದೋಸಾಂಜ್ ಅವರೊಂದಿಗೆ ನಡೆಸಿದ ಟ್ವಿಟರ್ ವಾಗ್ವಾದದ ಬೆನ್ನಲ್ಲೇ ಈಗ ನಟಿ ಕಂಗನಾ ಮತ್ತೆ ಸುದ್ದಿಯಲ್ಲಿದ್ದಾರೆ.ಈಗ ಟ್ವೀಟ್ ಮಾಡಿರುವ ಅವರು “ನಾನು ಖಲಿಸ್ತಾನಿಗಳೊಂದಿಗೆ ಹೋರಾಡಿದೆ.ಆದ್ದರಿಂದ ಈಗ ಹೆಚ್ಚಿನ ಸಿಖ್ಖರು ನನ್ನ ವಿರುದ್ಧ ಇದ್ದಾರೆ ”ಎಂದು ಕಂಗನಾ ರೈತರ ಪ್ರತಿಭಟನೆಯ ಕುರಿತು ಇತ್ತೀಚೆಗೆ ಮಾಡಿದ ಕಾಮೆಂಟ್‌ಗಳನ್ನು ಉಲ್ಲೇಖಿಸಿ ಬರೆದಿದ್ದಾರೆ.ಬಹುತೇಕ ಪಕ್ಷಗಳಿಗೆ ತಾವು ಇಷ್ಟವಾಗುವುದಿಲ್ಲ ಎಂದು ನನ್ನ ಹಿತೈಷಿಗಳು ಹೇಳುತ್ತಾರೆ,ಆದರೆ ತನ್ನ ಆತ್ಮಸಾಕ್ಷಿಗಾಗಿ ಮೆಚ್ಚುಗೆ ಪಡೆದಿರುವುದಾಗಿ ಎಂದು ಕಂಗನಾ ಹೇಳುತ್ತಾರೆ.

'ನಾನು ಚಿತ್ರೋದ್ಯಮದ ಬಗ್ಗೆ ಪ್ರಾಮಾಣಿಕನಾಗಿರುತ್ತೇನೆ, ಅವರಲ್ಲಿ ಹೆಚ್ಚಿನವರು ನನ್ನ ವಿರುದ್ಧ ಇದ್ದಾರೆ, ನಾನು ಮೀಸಲಾತಿಯನ್ನು ವಿರೋಧಿಸಿದ್ದೇನೆ, ಹೆಚ್ಚಿನ ಹಿಂದೂಗಳು ನನ್ನನ್ನು ದ್ವೇಷಿಸುತ್ತಾರೆ, ಮಣಿಕರ್ಣಿಕಾ ಬಿಡುಗಡೆಯ ಸಮಯದಲ್ಲಿ ನಾನು ಕರ್ಣಿ ಸೇನೆಯೊಂದಿಗೆ ಹೋರಾಡಿದೆ, ಆದ್ದರಿಂದ ರಜಪೂತರು ನನಗೆ ಬೆದರಿಕೆ ಒಡ್ಡುತ್ತಾರೆ, ನಾನು ಇಸ್ಲಾಮಿಸ್ಟ್‌ಗಳನ್ನು ವಿರೋಧಿಸುತ್ತೇನೆ, ಅನೇಕ ಮುಸ್ಲಿಮರು ನನ್ನನ್ನು ದ್ವೇಷಿಸುತ್ತಾರೆ 'ಎಂದು ಅವರು ಬರೆದಿದ್ದಾರೆ.

Trending News