Kantara : ‘ಕಾಂತಾರ’ ನೋಡಿ ರಿಷಬ್‌ಗೆ ಸುದೀರ್ಘ ಪತ್ರ ಬರೆದ ಸುದೀಪ್‌

Kantara : ಈ ಕಾಂತಾರ ಸಿನಿಮಾವನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಬಣ್ಣಿಸಿದ್ದಾರೆ. ‘ಕಾಂತಾರ’ ನೋಡಿ ರಿಷಬ್‌ ಶೆಟ್ಟಿಗೆ ನಟ ಸುದೀಪ್‌ ಸುದೀರ್ಘ ಪತ್ರ ಬರೆದಿದ್ದಾರೆ. 

Written by - Chetana Devarmani | Last Updated : Oct 8, 2022, 03:12 PM IST
  • ಸಿನಿಪ್ರಿಯರ ಮನಗೆದ್ದ ಸಿನಿಮಾ ಕಾಂತಾರ
  • ‘ಕಾಂತಾರ’ ನೋಡಿ ಸುದೀರ್ಘ ಪತ್ರ ಬರೆದ ಸುದೀಪ್‌
Kantara : ‘ಕಾಂತಾರ’ ನೋಡಿ ರಿಷಬ್‌ಗೆ ಸುದೀರ್ಘ ಪತ್ರ ಬರೆದ ಸುದೀಪ್‌  title=
ಕಾಂತಾರ

Kantara : ಕಾಂತಾರಾ.. ಮಂಗಳೂರಿನ ಸೊಬಗು ಬೆಡಗು, ಕರಾವಳಿಯ ಕತೆ, ವ್ಯಥೆ ಜೊತೆಗೆ ದೈವಾರಾಧನೆಯ ಮಹತ್ವ ಹೊತ್ತು ಬಂದ ಅಮೋಘ ಸಿನಿಮಾ. ದೈವದ ಕತೆಯ ಮೂಲಕವೇ ದಕ್ಷಿಣ ಕರ್ನಾಟಕ ಜನರ ಜೀವನವನ್ನು ಬಣ್ಣಿಸಿದ ಸಿನಿಮಾ. ಈ ಸಿನಿಮಾ ನೋಡಿ ಹಾಡಿ ಹೊಗಳದವರಿಲ್ಲ. ಎಲ್ಲರ ಮೆಚ್ಚುಗೆ ಪಡೆದ ಕಾಂತಾರ ಚಿತ್ರವನ್ನು ಅನೇಕ ಖ್ಯಾತನಾಮರು ಸಹ ಹಾಡಿ ಹೊಗಳಿದ್ದಾರೆ. ರಿಷಬ್‌ ಶೆಟ್ಟಿ ನಟನೆ ಕಂಡು ಬೆರಗಾಗಿದ್ದಾರೆ. ಹೊಂಬಾಳೆ ಫಿಲ್ಮ್ಸ್‌ನ ಮತ್ತೊಂದು ಕೂಸನ್ನು ಜನ ಎತ್ತಿ ಆಡಿಸುತ್ತಿದ್ದಾರೆ. 

ಇದನ್ನೂ ಓದಿ : ʼಟೈಟಲ್‌ ಇಲ್ಲದ ಪೋಸ್ಟರ್‌ ಕುತೂಹಲಕಾರಿʼ : ʼಕಾಂತಾರʼದ ದಂತಕಥೆ ಬಿಚ್ಚಿಟ್ಟ ಸಪ್ತಮಿ..!

ಇತ್ತೀಚೆಗಷ್ಟೆ ತೆಲುಗು ನಟ ಪ್ರಭಾಸ್‌ ಕಾಂತಾರ ಸಿನಿಮಾ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಫುಲ್‌ ಪೈಸಾ ವಸೂಲ್‌ ರೀತಿ ಇರುವ ಈ ಸಿನಿಮಾ ಪ್ರೇಕ್ಷಕನನ್ನು ಕಡೆಯವರೆಗೂ ರಂಜಿಸುತ್ತದೆ. ಇದೀಗ ಈ ಕಾಂತಾರ ಸಿನಿಮಾವನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಬಣ್ಣಿಸಿದ್ದಾರೆ. ‘ಕಾಂತಾರ’ ನೋಡಿ ರಿಷಬ್‌ ಶೆಟ್ಟಿಗೆ ನಟ ಸುದೀಪ್‌ ಸುದೀರ್ಘ ಪತ್ರ ಬರೆದಿದ್ದಾರೆ. 

 

 

ರಿಷಬ್ ಮತ್ತು ಸಪ್ತಮಿ ಗೌಡ ನಟನೆಯ ಕಾಂತಾರ ಕುರಿತು, "ನಾವು ನೋಡುವುದು ಫೆಂಟಾಸ್ಟಿಕ್ ಎನಿಸುವ ಸಿನಿಮಾಗಳನ್ನು. ಆದರೆ ಅಪರೂಪಕ್ಕೆ ಕೆಲವು ಸಿನಿಮಾಗಳು ನಮ್ಮನ್ನು ಮಂತ್ರಮುಗ್ಧಗೊಳಿಸುತ್ತವೆ. ಅಂತಹ ಒಂದು ಸಿನಿಮಾ ಕಾಂತಾರ. ಫ್ಯಾಬುಲಸ್ ಆಗಿ ರಿಷಬ್ ನಟಿಸಿದ್ದಾರೆ. ಈ ಸಿನಿಮಾಗಾಗಿ ರಿಷಬ್‌ ಶೆಟ್ಟಿ ತಮ್ಮ ಸಂಪೂರ್ಣ ಶ್ರಮ ಹಾಕಿದ್ದಾರೆ. ಈ ಕತೆ ಏನಾದರೂ ಪೇಪರ್‌ ಮೇಲೆ ಇದ್ರೆ ಅರ್ಧ ಕೂಡಾ ಮುಗಿಯಲ್ಲ. ಅದರಲ್ಲೂ ಕ್ಲೈಮ್ಯಾಕ್ಸ್‌ ಅಂತೂ ಸಾಮಾನ್ಯ ಎಂಡಿಂಗ್‌ ಆಗಿರುತ್ತಿತ್ತೇನೋ?" ಎಂದು ಸುದೀಪ್‌ ಬರೆದಿದ್ದಾರೆ.

ಇದನ್ನೂ ಓದಿ :  Filmfare Award 2022 : ನಾಳೆ ಬೆಂಗಳೂರಿನಲ್ಲಿ ʻಫಿಲ್ಮ್​ ಫೇರ್​’ ಅವಾರ್ಡ್​ ಕಾರ್ಯಕ್ರಮ, ನೀವೂ ಹೋಗಬೇಕೇ? ಹೀಗೆ ಮಾಡಿ!

"ಆದರೆ ಇಲ್ಲಿ ನಿರ್ದೇಶಕ ಕಲ್ಪಿಸಿಕೊಂಡಂತೆ ಸಿನಿಮಾ ರೆಡಿ ಆಗಿದೆ. ಡೈರೆಕ್ಟರ್‌ ದೃಷ್ಟಿಕೋನದಲ್ಲಿ ಕಂಡಂತೆ ಸಿನಿಮಾ ಮೂಡಿಬಂದಿದೆ. ಇದು ನಿಜಕ್ಕೂ ಮೆಚ್ಚುಗೆಗೆ ಅರ್ಹವಾದ ಚಿತ್ರ. ಇಷ್ಟೊಂದು ಪರಿಣಾಮಕಾರಿಯಾಗಿ ಚಿತ್ರ ನಿರ್ಮಿಸಿದ ಈ ಕ್ರಿಯೇಟಿವ್‌ ತಂಡಕ್ಕೆ ದೊಡ್ಡ ಅಪ್ಪುಗೆ. ಹ್ಯಾಟ್ಸಾಫ್ ಅಜನೀಶ್‌. ನೀವು ಒಬ್ಬ ಮಾಸ್ಟರ್. ಹೊಂಬಾಳೆ ಫಿಲ್ಮ್ಸ್‌ಗೆ ಕಂಗ್ರಾಟ್ಸ್" ಎಂದು ಕಿಚ್ಚ ಹೊಗಳಿದ್ದಾರೆ. ʻಕಾಂತಾರʼ ಸಿನಿಮಾ ಮತ್ತು ರಿಷಬ್‌ ನಟನೆ ನೋಡಿ ಹೃದಯ ತುಂಬಿ ಸುದೀಪ್‌ ಹೊಗಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News