'ಮಲ್ಲಿಕಾರ್ಜುನ್' ಇಲ್ಲದ ಚುಕ್ಕಿತಾರೆ ಊಹಿಸಲಸಾಧ್ಯ...! ಪ್ರೇಕ್ಷಕರಿಗೆ ಕಾಡುತ್ತಿದೆ ನವೀನ್ ಸಜ್ಜು ಅನುಪಸ್ಥಿತಿ..!

ಈ ಪಾತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ನವೀನ ಸಜ್ಜು ಅವರನ್ನು ಬಹುವಾಗಿ ಮೆಚ್ಚಿಕೊಂಡಿದ್ದ ಪ್ರೇಕ್ಷಕರು ಈಗ ಅವರ ಪಾತ್ರ ಧೀಡಿರ್ ಕೊನೆಗೊಂಡಿದ್ದರಿಂದಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಧಾರವಾಹಿಯಲ್ಲಿ ಕೆಲವು ದ್ರಶ್ಯಗಳಂತೂ ಪ್ರೇಕ್ಷಕರನ್ನು ಬಹುವಾಗಿ ಕಾಡಿದ್ದವು

Written by - Manjunath N | Last Updated : May 29, 2024, 04:22 PM IST
  • ನವೀನ ಸಜ್ಜು ಅವರನ್ನು ಬಹುವಾಗಿ ಮೆಚ್ಚಿಕೊಂಡಿದ್ದ ಪ್ರೇಕ್ಷಕರು ಈಗ ಅವರ ಪಾತ್ರ ಧೀಡಿರ್ ಕೊನೆಗೊಂಡಿದ್ದರಿಂದಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
  • ಕಥೆಗೆ ಟ್ವಿಸ್ಟ್ ನೀಡಿಯಾದರೂ ಪರವಾಗಿಲ್ಲ ನವೀನ ಸಜ್ಜು ಅವರ ಮಲ್ಲಿಕಾರ್ಜುನ್ ಪಾತ್ರಕ್ಕೆ ಮತ್ತೆ ಜೀವ ತುಂಬಿಯಾದರೂ ವಾಪಸ್ ತರಬೇಕು ಎಂದು ಮನವಿ ಮಾಡಿದ್ದಾರೆ.
  • ತಂದೆ ಮಗಳ ಕಾಲಿನ ಚಿಕಿತ್ಸೆಗಾಗಿ ತಮ್ಮ ಕಿಡ್ನಿಯನ್ನೇ ಮಾರುವುದು ನಿಜಕ್ಕೂ ಪಾತ್ರದ ತೀವ್ರತೆಯನ್ನು ಹೇಳುವಂತಿದ್ದವು
 'ಮಲ್ಲಿಕಾರ್ಜುನ್' ಇಲ್ಲದ ಚುಕ್ಕಿತಾರೆ ಊಹಿಸಲಸಾಧ್ಯ...! ಪ್ರೇಕ್ಷಕರಿಗೆ ಕಾಡುತ್ತಿದೆ ನವೀನ್ ಸಜ್ಜು ಅನುಪಸ್ಥಿತಿ..! title=

ಕಲರ್ಸ್ ಕನ್ನಡದಲ್ಲಿ ಇತ್ತೀಚಿಗೆ ಆರಂಭವಾದ ಚುಕ್ಕಿತಾರೆ ಧಾರವಾಹಿ ಪುಟಾಣಿ ಮಕ್ಕಳ ಕಥೆಯ ಎಳೆಯ ಜೊತೆಗೆ ಅಪ್ಪ ಮಗಳ ನಡುವಿನ ಭಾಂದವ್ಯ ಸಾರುವುದರ ಮೂಲಕ ಕೇವಲ ಕೆಲವೇ ದಿನಗಳಲ್ಲಿ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಧಾರವಾಹಿಯಾಗಿತ್ತು.ಅದರಲ್ಲೂ ಧಾರವಾಹಿ ಆರಂಭಕ್ಕೂ ಮುನ್ನ ಬಿಡುಗಡೆಯಾಗಿದ್ದ ಚುಕ್ಕಿತಾರೆ ಟೀಸರ್ ಮೂಲಕ ಖ್ಯಾತ ಹಿನ್ನೆಲೆ ಗಾಯಕ ನವೀನ ಸಜ್ಜು ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವುದು ಖಾತ್ರಿಯಾಗಿತ್ತು, ಇದಕ್ಕೆ ಅನುಗುಣವಾಗಿ ಚುಕ್ಕಿ ತಾರೆ ಧಾರವಾಹಿಯಲ್ಲಿ ನಟ ನವೀನ ಸಜ್ಜು ಅವರು ಚುಕ್ಕಿಯ ತಂದೆಯಾದ ಮಲ್ಲಿಕಾರ್ಜುನ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Chukki Thare: ಕಿರುತೆರೆಗೆ ಪದಾರ್ಪಣೆ ಮಾಡಿದ ಕನ್ನಡದ ಖ್ಯಾತ ಗಾಯಕ ನವೀನ್‌ ಸಜ್ಜು!

ಈ ಪಾತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ನವೀನ ಸಜ್ಜು ಅವರನ್ನು ಬಹುವಾಗಿ ಮೆಚ್ಚಿಕೊಂಡಿದ್ದ ಪ್ರೇಕ್ಷಕರು ಈಗ ಅವರ ಪಾತ್ರ ಧೀಡಿರ್ ಕೊನೆಗೊಂಡಿದ್ದರಿಂದಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಧಾರವಾಹಿಯಲ್ಲಿ ಕೆಲವು ದ್ರಶ್ಯಗಳಂತೂ ಪ್ರೇಕ್ಷಕರನ್ನು ಬಹುವಾಗಿ ಕಾಡಿದ್ದವು, ಅದರಲ್ಲೂ ಕಾಲುಗಳೇ ಇಲ್ಲದ ಮಗಳನ್ನು ರಾಜಕುಮಾರಿಯ ಹಾಗೆ ನೋಡಿಕೊಳ್ಳುವ ತಂದೆ ಮಗಳ ಕಾಲಿನ ಚಿಕಿತ್ಸೆಗಾಗಿ ತಮ್ಮ ಕಿಡ್ನಿಯನ್ನೇ ಮಾರುವುದು ನಿಜಕ್ಕೂ ಪಾತ್ರದ ತೀವ್ರತೆಯನ್ನು ಹೇಳುವಂತಿದ್ದವು.ಹೀಗೆ ಸುಗಮವಾಗಿ ನಡೆಯುತ್ತಿದ್ದ ನವೀನ ಸಜ್ಜು ಅವರ ಮಲ್ಲಿಕಾರ್ಜುನ್ ಪಾತ್ರ ಕಾರು ಅಪಘಾತದಿಂದಾಗಿ ಧೀಡಿರ್ ನೇ ಕೊನೆಗೊಂಡಿದ್ದು ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದೆ.ಧಾರವಾಹಿಯುದ್ದಕ್ಕೂ ತಮ್ಮ ನೈಜ ಅಭಿನಯದಿಂದ ಗಮನ ಸೆಳೆದಿದ್ದ ನವೀನ ಸಜ್ಜು ಅವರ ಪಾತ್ರವನ್ನು ಬೇಗನೆ ಕೊನೆಗೊಳಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ʼಚುಕ್ಕಿತಾರೆʼಯಾಗಿ ಮಿಂಚುತ್ತಿರುವ ನವೀನ್‌ ಸಜ್ಜು ಅಭಿನಯಕ್ಕೆ ಸಿನಿಪ್ರೇಮಿಗಳಿಂದ ಬಹುಪರಾಕ್!

ಚುಕ್ಕಿ ತಾರೆಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ಹಿನ್ನೆಲೆ ಗಾಯಕ ನವೀನ ಸಜ್ಜು ಅವರ ಮಲ್ಲಿಕಾರ್ಜುನ್ ಅವರ ಪಾತ್ರ ಈಗ ಬೇಗನೆ ಮುಕ್ತಾಯಗೊಂಡಿದ್ದರಿಂದಾಗಿ ಬಹುತೇಕರು ಬೇಸರ ವ್ಯಕ್ತಪಡಿಸಿದ್ದಾರೆ.ಧಾರಾವಾಹಿಯ ಎಲ್ಲ ಸಂಚಿಕೆಗಳ ಮೂಲಕ ಪೂರ್ಣ ಪ್ರಮಾಣದಲ್ಲಿ ನವೀನ ಸಜ್ಜು ಅವರ ಅಭಿನಯವನ್ನು ನೋಡಿ ಆನಂದಿಸಬೇಕು ಎಂದುಕೊಂಡಿದ್ದ ಅಭಿಮಾನಿಗಳು ಈಗ ಹೇಗಾದರೂ ಮಾಡಿ ಕಥೆಗೆ ಟ್ವಿಸ್ಟ್ ನೀಡಿಯಾದರೂ ಪರವಾಗಿಲ್ಲ ನವೀನ ಸಜ್ಜು ಅವರ ಮಲ್ಲಿಕಾರ್ಜುನ್ ಪಾತ್ರಕ್ಕೆ ಮತ್ತೆ ಜೀವ ತುಂಬಿಯಾದರೂ ವಾಪಸ್ ತರಬೇಕು ಎಂದು ಮನವಿ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 
 

Trending News