55ನೇ ಚಿತ್ರದಲ್ಲಿ ‘ಕ್ರಾಂತಿ’ ಮಾಡಲು ಸಜ್ಜಾದ ಚಾಲೆಂಜಿಗ್ ಸ್ಟಾರ್ ದರ್ಶನ್..!

 ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ಕ್ರಾಂತಿ’ ಚಿತ್ರವು ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ ಎಂದು ನಿರ್ಮಾಪಕಿ ಶೈಲಜಾ ನಾಗ್ ಹೇಳಿದ್ದಾರೆ. 

Written by - Puttaraj K Alur | Last Updated : Sep 13, 2021, 11:44 AM IST
  • ‘ಕ್ರಾಂತಿ ‘ ಮಾಡಲು ಮತ್ತೆ ಒಂದಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ‘ಯಜಮಾನ’ ಚಿತ್ರತಂಡ
  • ‘ಕ್ರಾಂತಿ’ ಸಿನಿಮಾವನ್ನು ವಿ.ಹರಿಕೃಷ್ಣ ನಿರ್ದೇಶಿಸಲಿದ್ದು, ಬಿ.ಸುರೇಶ್ ಮತ್ತು ಶೈಲಜಾ ನಾಗ್ ಬಂಡವಾಳ ಹೂಡಲಿದ್ದಾರೆ
  • ‘ರಾಬರ್ಟ್’ ತೆಲುಗಿನಲ್ಲಿ ಬಿಡುಗಡೆಯಾಗಿದ್ದರೂ ‘ಕ್ರಾಂತಿ’ಯೇ ದರ್ಶನ್ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ ಎಂದ ಹರಿಕೃಷ್ಣ
55ನೇ ಚಿತ್ರದಲ್ಲಿ ‘ಕ್ರಾಂತಿ’ ಮಾಡಲು ಸಜ್ಜಾದ ಚಾಲೆಂಜಿಗ್ ಸ್ಟಾರ್ ದರ್ಶನ್..! title=
ದರ್ಶನ್ ಅವರ 55ನೇ ಸಿನಿಮಾ ‘ಕ್ರಾಂತಿ’ (Photo Courtesy: Twitter/@dasadarshan)

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan)ತಮ್ಮ 55ನೇ ಚಿತ್ರದಲ್ಲಿ ‘ಕ್ರಾಂತಿ’ ಮಾಡಲು ಸಜ್ಜಾಗಿದ್ದಾರೆ. ತಮ್ಮ ಹಿಂದಿನ ಸೂಪರ್ ಹಿಟ್ ಚಿತ್ರ ‘ಯಜಮಾನ’ ತಂಡದ ಜೊತೆ ಅವರು ಮತ್ತೆ ಒಂದಾಗಿದ್ದಾರೆ. ಈ ಚಿತ್ರವನ್ನು ‘ಯಜಮಾನ’ ಸಹ ನಿರ್ದೇಶನ ಮಾಡಿದ್ದ ವಿ.ಹರಿಕೃಷ್ಣ ನಿರ್ದೇಶಿಲಿದ್ದು, ಬಿ.ಸುರೇಶ್ ಮತ್ತು ಶೈಲಜಾ ನಾಗ್ ಅವರು ಬಂಡವಾಳ ಹೂಡಲಿದ್ದಾರೆ. ಗಣೇಶ ಹಬ್ಬದ ಶುಭ ಸಂದರ್ಭದಂದು ಚಿತ್ರದ ಶೀರ್ಷಿಕೆಯನ್ನು ರಿವೀಲ್ ಮಾಡಲಾಗಿತ್ತು.

ವಿ.ಹರಿಕೃಷ್ಣ(V Harikrishna) ಅವರು ದರ್ಶನ್ ಜೊತೆಗೆ ಕೈಜೋಡಿಸುವ ಪ್ರತಿಯೊಂದು ಸಿನಿಮಾಗಳಿಗೆ ಸಂಗೀತ ನೀಡುವುದು ಅಥವಾ ನಿರ್ದೇಶನ ಮಾಡುವ ಜವಾಬ್ದಾರಿ ಹೊತ್ತಿರುತ್ತಾರೆ. ಹೀಗಾಗಿ ‘ಕ್ರಾಂತಿ’ ಸಿನಿಮಾ(Kranti Film) ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಅವರು ಖುಷಿ ಹಂಚಿಕೊಂಡಿದ್ದಾರೆ. ‘ನಮ್ಮದು ಹಲವು ವರ್ಷಗಳ ಸ್ನೇಹ-ಸಂಬಂಧ. ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿ 30 ವರ್ಷಗಳು ಸಂದಿವೆ. ದರ್ಶನ್ ನನಗೆ ಸಿಕ್ಕ ಅಮೂಲ್ಯ ರತ್ನ. ನಬ್ಬಿಬ್ಬರ ನಡುವಿನ ಬಂಧವು ಸ್ನೇಹವನ್ನು ಮೀರಿದೆ. ನಾವಿಬ್ಬರು ನಂಬಿಕೆಯ ತಳಹದಿಯ ಮೇಲೆಯೇ ಕೆಲಸ ಮಾಡುತ್ತೇವೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: 'ಉದಯ್ ಚೋಪ್ರಾ ಮತ್ತು ನಾನು 5 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದೇವೆ'

‘ನಾನು ನಿರ್ದೇಶಕನಾಗಿ, ದರ್ಶನ್(Darshan Thoogudeepa) ನಟರಾಗಿ ಸೆಟ್‌ಗಳಲ್ಲಿದ್ದಾಗಲೂ ನಬ್ಬಿಬ್ಬರ ನಡುವೆ ಉತ್ತಮ ಅನುಬಂಧವಿರುತ್ತದೆ. ಶೂಟಿಂಗ್ ಸೆಟ್ ಬಗ್ಗೆ ದರ್ಶನ್ ಅವರಿಗೆ ಗೊತ್ತಿಲ್ಲದಿರುವುದು ಏನೂ ಇಲ್ಲ. ಅವರು ನಿರ್ದೇಶಕರ ಮತ್ತು ನಿರ್ಮಾಪಕರ ನಟ. ನಿರ್ದೇಶಕನಾಗಿ ಅವರಿಂದ ನನಗೆ ಇನ್ನೇನು ಬೇಕು? ಹೇಳಿ ಎಂದು ವಿ.ಹರಿಕೃಷ್ಣ ಸಂತೋಷ ಹಂಚಿಕೊಂಡಿದ್ದಾರೆ.

‘ದರ್ಶನ್ ಶೂಟಿಂಗ್ ಸಮಯದಲ್ಲಿ ಹಾಯಾಗಿರುತ್ತಾರೆ. ಯಾವುದೇ ರೀತಿ ಒತ್ತಡಕ್ಕೊಳಗಾಗದೆ ನಟಿಸುತ್ತಾರೆ. ಹೀಗಾಗಿ ಅವರ ಜೊತೆ ಕೆಲಸ ಮಾಡಲು ಅನೇಕರು ಬಯಸುತ್ತಾರೆ. ಅವರ ಉತ್ಸಾಹ ಶೂಟಿಂಗ್ ಸೆಟ್ ನಲ್ಲಿರುವ ಪ್ರತಿಯೊಬ್ಬರಿಗೂ ಹೊಸ ಹುಮ್ಮಸ್ಸು ನೀಡುತ್ತದೆ. ‘ಕ್ರಾಂತಿ’ ಸಿನಿಮಾದಲ್ಲಿ ಅವರ ಪಾತ್ರ ವಿಭಿನ್ನವಾಗಿ ಮೂಡಿಬರಲಿದೆ’ ಎಂದು ಹರಿಕೃಷ್ಣ ಹೇಳಿಕೊಂಡಿದ್ದಾರೆ.  

ಇದನ್ನೂ ಓದಿ: Harsh Goenka Viral Tweet: 'ನನ್ನ ಗಂಡನ Work From Home' ಸ್ಥಗಿತಗೊಳಿಸಿ, Bossಗೆ ಪತ್ರ ಬರೆದ ಪತ್ನಿ

‘ರಾಬರ್ಟ್’ ತೆಲುಗಿನಲ್ಲಿ ಬಿಡುಗಡೆಯಾಗಿದ್ದರೂ ‘ಕ್ರಾಂತಿ’ಯೇ ದರ್ಶನ್(Darshan Thoogudeepa) ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ., ಈ ಚಿತ್ರವು ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲೂ ಬಿಡುಗಡೆಯಾಗಲಿದೆ. ‘ಕ್ರಾಂತಿ’ ಎಂದರೆ ಎಲ್ಲೆಡೆಯೂ ಒಂದೇ ಅರ್ಥ. ಹೀಗಾಗಿ ನಮಗೆ ಈ ಶೀರ್ಷಿಕೆ ಕೆಲಸ ಮಾಡುತ್ತದೆ ಎಂಬ ನಂಬಿಕೆ ಇದೆ. ನಾವು ಪ್ರೀ-ಪ್ರೊಡಕ್ಷನ್ ನಿಂದಲೇ ಪ್ಯಾನ್ ಇಂಡಿಯನ್ ಸಬ್ಜೆಕ್ಟ್ ಆಗಿ ಚಿತ್ರದ ಮೇಲೆ ಕೆಲಸ ಮಾಡುತ್ತಿದ್ದೇವೆ. ಈಗ ನಾವು ಚಿತ್ರದ ಎಲ್ಲಾ ವಿವರಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದೇವೆ. ‘ಕ್ರಾಂತಿ’ ಚಿತ್ರವು ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ ಎಂದು ನಿರ್ಮಾಪಕಿ ಶೈಲಜಾ ನಾಗ್ ಹೇಳಿದ್ದಾರೆ. 

ಶೀರ್ಷಿಕೆಯ ಬಗ್ಗೆ ಮಾತನಾಡಿದ ಹರಿಕೃಷ್ಣ, ‘ಸಮಸ್ಯೆಗಳನ್ನು ಎಲ್ಲರೂ ಎದುರಿಸುತ್ತಾರೆ. ಆದರೆ ಪರಿಹಾರ ಮಾತ್ರ ಎಲ್ಲರಿಗೂ ಸಿಗುವುದಿಲ್ಲ. ‘ಕ್ರಾಂತಿ’ಯಲ್ಲಿನ ನಾಯಕ ಅದನ್ನು ಸರಿಯಾಗಿ ನಿಭಾಯಿಸುತ್ತಾನೆ. ಸಮಾಜದಲ್ಲಿ ಬದಲಾವಣೆ ತರಲು ನಾಯಕ ಅನೇಕ ರೀತಿ ಹೋರಾಡುತ್ತಾನೆ. ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ಸಮಾಜದ ಜನರಿಗೆ ಪರಿಹಾರ ನೀಡಲು ಹೋರಾಟ ನಡೆಸುತ್ತಾನೆ’ ಎಂದಿದ್ದಾರೆ.

‘ಶೀರ್ಷಿಕೆಯೇ ಸೂಚಿಸುವಂತೆ ‘ಕ್ರಾಂತಿ’ಗೆ ಹಲವು ಕಾರಣಗಳಿರುತ್ತವೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್ ನಲ್ಲಿ ಕೆಲವು ಪದಗಳನ್ನು ದರ್ಶನ್ ಮುಖದಲ್ಲಿ ಹುದುಗಿಸಿಡಲಾಗಿದೆ. ಏಕೆಂದರೆ ಅದರ ಅರ್ಥವನ್ನು ಪ್ರೇಕ್ಷಕರು ಕಂಡುಕೊಳ್ಳಲಿ ಎಮಬುದು ನಮ್ಮ ಉದ್ದೇಶವಾಗಿದೆ’ ಎಂದು ಶೈಲಜಾ ನಾಗ್ ಹೇಳಿದ್ದಾರೆ. ‘ರಾಬರ್ಟ್’ ಸಿನಿಮಾ ಬಳಿಕ ದರ್ಶನ್ ಅವರ ‘ಕ್ರಾಂತಿ’ ಸಿನಿಮಾ ಈಗಾಗಲೇ ಪೋಸ್ಟರ್ ನಿಂದ ಗಮನ ಸೆಳೆಯುತ್ತಿದೆ. ಅವರನ್ನು ಮತ್ತೆ ತೆರೆಮೇಲೆ ಕಾಣಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News