Deepika Padukone: ಮಾನಸಿಕ ಖಿನ್ನತೆಗೆ ಒಳಗಾಗಿದ್ರಾ ದೀಪಿಕಾ? ರಹಸ್ಯ ಬಿಚ್ಚಿಟ್ಟ ಪತಿ ರಣವೀರ್ ಸಿಂಗ್!

Deepika suffering from depression: ಬಾಲಿವುಡ್ ಹೀರೋ ರಣವೀರ್ ಸಿಂಗ್ ತಮ್ಮ ಪತ್ನಿ ದೀಪಿಕಾ ಪಡುಕೋಣೆ ಬಗ್ಗೆ ಇಂಟ್ರೆಸ್ಟಿಂಗ್ ರಹಸ್ಯ ಬಹಿರಂಗಪಡಿಸಿದ್ದಾರೆ. ಏನದು ಅಂತೀರಾ ಈ ಸ್ಟೋರಿ ಓದಿ..

Written by - Savita M B | Last Updated : Oct 28, 2023, 02:37 PM IST
  • ದೀಪಿಕಾ ಪಡುಕೋಣೆ ಬಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್.
  • ಬಾಲಿವುಡ್ ಜೊತೆಗೆ.. ಸೌತ್ ನಲ್ಲೂ ಈ ಚೆಲುವೆ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
  • ದೀಪಿಕಾ ಪಡುಕೋಣೆ ರಣಬೀರ್ ಜೊತೆ ಪ್ರೇಮಪಾಶದಲ್ಲಿ ಸಿಲುಕಿದ ನಂತರ ಖಿನ್ನತೆಗೆ ಒಳಗಾಗಿದ್ದರಂತೆ
Deepika Padukone: ಮಾನಸಿಕ ಖಿನ್ನತೆಗೆ ಒಳಗಾಗಿದ್ರಾ ದೀಪಿಕಾ? ರಹಸ್ಯ ಬಿಚ್ಚಿಟ್ಟ ಪತಿ ರಣವೀರ್ ಸಿಂಗ್!  title=

Bollywood News: ದೀಪಿಕಾ ಪಡುಕೋಣೆ ಬಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್. ಸಾಕಷ್ಟು ದೊಡ್ಡ ದೊಡ್ಡ ಹೀರೋಗಳ ಎದುರು ಅದ್ಭುತ ಪಾತ್ರಗಳನ್ನು ಮಾಡಿರುವ ನಟಿ ಗ್ಲಾಮರ್ನಲ್ಲಿ ಎಲ್ಲರಿಗಿಂತ ಒಂದು ಕೈ ಮೇಲೆ. ಅಷ್ಟೇ ಅಲ್ಲ.. ಬಾಲಿವುಡ್ ಜೊತೆಗೆ.. ಸೌತ್ ನಲ್ಲೂ ಈ ಚೆಲುವೆ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 

 ದೀಪಿಕಾ ಪಡುಕೋಣೆ 2014ರಲ್ಲಿ ತೀವ್ರ ಮಾನಸಿಕ ನೋವನ್ನು ಅನುಭವಿಸಿದ್ದು ಗೊತ್ತೇ ಇದೆ. ಸಂದರ್ಭ ಬಂದಾಗಲೆಲ್ಲಾ ದೀಪಿಕಾ ತಾನು ಈ ಹಿಂದೆ ಎದುರಿಸಿದ ಖಿನ್ನತೆಯ ಬಗ್ಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಖಿನ್ನತೆಯಿಂದ ಹೊರಬರುವುದು ಹೇಗೆ ಎಂದು ದೀಪಿಕಾ ವಿವರಿಸಿದ್ದಾರೆ.‌ 

ಇದನ್ನೂ ಓದಿ-ಲಿಯೋ vs ಜೈಲರ್..! ಬಾಕ್ಸಾಫೀಸ್ ಸೆಣಸಾಟದಲ್ಲಿ ಗೆದ್ದೋರು ಯಾರು..?   

ವೃತ್ತಿಜೀವನದಲ್ಲಿ ಅನೇಕ ಏರಿಳಿತಗಳನ್ನು ಅನುಭವಿಸಿದ ನಟಿ ದೀಪಿಕಾ ಪಡುಕೋಣೆ ರಣಬೀರ್ ಜೊತೆ ಪ್ರೇಮಪಾಶದಲ್ಲಿ ಸಿಲುಕಿದ ನಂತರ ಖಿನ್ನತೆಗೆ ಒಳಗಾಗಿದ್ದರಂತೆ. ಸಖತ್‌ ಸ್ಟ್ರಾಂಗ್ ನಟಿ ಡಿಪ್ರೆಶನ್ ನಿಂದ ಹೊರಬಂದ ಮೇಲೆ ಹಲವು ಸಂದರ್ಶನಗಳಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಮಾತನಾಡಿದ್ದರು. 

ಆದರೆ ಈ ವಿಚಾರದಲ್ಲಿ ದೀಪಿಕಾ ಪಡುಕೋಣೆ ಪತಿ ರಣವೀರ್ ಸಿಂಗ್ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇತ್ತೀಚೆಗೆ, ದೀಪಿಕಾ ಪಡುಕೋಣೆ ಖಿನ್ನತೆಗೆ ಹೋಗಿರುವ ವಿಚಾರವಾಗಿ ರಣವೀರ್ ಪ್ರತಿಕ್ರಿಯಿಸಿದ್ದಾರೆ. 

ಇದನ್ನೂ ಓದಿ-ಲಿಪ್ ಲಾಕ್ ಬಗ್ಗೆ ಸುಳ್ಳು ಹೇಳಿದ ಶ್ರೀಲೀಲಾ..! ಕ್ಯೂಟ್ ಬೆಡಗಿ ಮೊದಲು ʼಕಿಸ್‌ʼ ಮಾಡಿದ್ದು ಯಾರೊಂದಿಗೆ ಗೊತ್ತಾ? 

ಇತ್ತೀಚೆಗಷ್ಟೇ ದೀಪಿಕಾ ಪತಿ ರಣವೀರ್ ಸಿಂಗ್ ಕಾಫಿ ವಿತ್ ಕರಣ್ ಶೋನಲ್ಲಿ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ರಣವೀರ್‌ "ದೀಪಿಕಾ ಅವರ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ನನಗೆ ತುಂಬಾ ಸಮಯ ಹಿಡಿಯಿತು. ಅವರ ಆಲೋಚನೆಗಳು ಬೇರೆಲ್ಲೋ ಇದ್ದವು. ಅವಳು ಅನೇಕ ಬಾರಿ ಅಳುತ್ತಿದ್ದಳು, ವಿಚಾರವನ್ನು ಮನೆಯವರಿಗೆ ತಿಳಿಸಿದ್ದೆ" 

ಅಷ್ಟೇ ಅಲ್ಲ... ಖಿನ್ನತೆ ಭಯಾನಕ. ಅರಿವು ಮತ್ತು ಸಮಾಲೋಚನೆ ಬಹಳ ಅವಶ್ಯಕ. ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಯನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದು ಸಹ ರಣವೀರ್ ಸಿಂಗ್ ಹೇಳಿದ್ದಾರೆ. ೀ ಶೋ ವಿಕ್ಷೀಸಿದ ಪ್ರತಿಯೊಬ್ಬರ ರಣವೀರ್‌ನಂತಹ ಅರ್ಥ ಮಾಡಿಕೊಳ್ಳುವ ಪತಿ ಸಿಕ್ಕಿರುವುದು ಆಕೆಯ ಅದೃಷ್ಟ ಎನ್ನುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News