ದರ್ಶನ್‌ ತಂದೆ ತೂಗುದೀಪ ಶ್ರೀನಿವಾಸ್ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣವೇ? ಕೊನೆಗೂ ಬಯಲಾದ ಸತ್ಯ!

Darshan Father death reason : ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ಒಮ್ಮೆ ತಮ್ಮ ತಂದೆಯೇ ಸಾವಿನ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದರು. ಏಳೆಂಟು ವರ್ಷಗಳ ದರ್ಶನ್‌ ಈ ಮಾತನ್ನು ಹೇಳಿದ್ದರು. 

Written by - Chetana Devarmani | Last Updated : Nov 6, 2023, 01:23 PM IST
  • ದರ್ಶನ್‌ ತಂದೆ ತೂಗುದೀಪ ಶ್ರೀನಿವಾಸ್
  • ತೂಗುದೀಪ ಶ್ರೀನಿವಾಸ್ ಸಾವಿಗೆ ಕಾರಣ
  • ಹಲವು ವರ್ಷಗಳ ಬಳಿಕ ಬಯಲಾದ ಸತ್ಯ!
ದರ್ಶನ್‌ ತಂದೆ ತೂಗುದೀಪ ಶ್ರೀನಿವಾಸ್ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣವೇ? ಕೊನೆಗೂ ಬಯಲಾದ ಸತ್ಯ! title=

Darshan Revealed Reason for Thoogudeepa Srinivas Death : ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ತಂದೆ ಕೂಡ ಖ್ಯಾತ ಕನ್ನಡ  ನಟರಾಗಿದ್ದವರು. ಪ್ರಖ್ಯಾತ ಕನ್ನಡದ ಖಳನಟ ತೂಗುದೀಪ ಶ್ರೀನಿವಾಸ್‌ ಅವರನ್ನು ಎಂದಿಗೂ ಮರೆಯಲಾಗದು. ಪಾತ್ರಕ್ಕೆ ತುಂಬುತ್ತಿದ್ದ ಆ ಶಕ್ತಿಯೇ ಬೇರೆ. ಆ ಗತ್ತು, ಮಾತು ಜನರ ಮನದಾಳದಲ್ಲಿ ನೆಲೆಯೂರಿವೆ. 

ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಮಗನಾದರೂ ದರ್ಶನ್‌, ಲೈಟ್‌ಬಾಯ್ ಆಗಿ ಚಿತ್ರರಂಗ ಪ್ರವೇಶಿಸ ಬೇಕಾಯ್ತು. ದಿನಕಳೆದಂತೆ ತಮ್ಮ ಸಾಮರ್ಥ್ಯದಿಂದ ಸ್ಟಾರ್‌ ಹೀರೋ ಆದರು. ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ಒಮ್ಮೆ ತಮ್ಮ ತಂದೆಯೇ ಸಾವಿನ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದರು. ಏಳೆಂಟು ವರ್ಷಗಳ ದರ್ಶನ್‌ ಈ ಮಾತನ್ನು ಹೇಳಿದ್ದರು. 

ವೈದ್ಯರ ನಿರ್ಲಕ್ಷ್ಯದಿಂದ ಬಾಲಕನಿಗೆ ಆರೋಗ್ಯ ಸಮಸ್ಯೆ ಆಗಿತ್ತು. ಆ ಬಾಲಕ ದರ್ಶನ್‌ ಅವರ ಅಭಿಮಾನಿ. ಇದನ್ನರಿತು ಪುಟಾಣಿ ಫ್ಯಾನ್‌ ಅನ್ನು ದರ್ಶನ್‌ ಭೇಟಿ ಮಾಡಿದ್ದರು. ಆ ಸಮಯದಲ್ಲಿ ಬಾಲಕನ ತಾಯಿ ದರ್ಶನ್‌ ಬಳಿ ಈ ವಿಚಾರ ಹೇಳಿದ್ದರು. ಆಗ ವೈದ್ಯರ ನಿರ್ಲಕ್ಷ್ಯದಿಂದ ಏನೆಲ್ಲಾ ಆಗುತ್ತದೆ ಎಂದು ದರ್ಶನ್‌ ನೆನಪಿಸಿಕೊಂಡಿದ್ದರು. ತಮ್ಮ ತಂದೆ ಕೂಡ ದ್ಯರ ನಿರ್ಲಕ್ಷ್ಯದಿಂದಲೇ ಸಾವನ್ನಪ್ಪಿದ್ದು ಎಂದು ಹೇಳಿದ್ದರು.

ಇದನ್ನೂ ಓದಿ: Bollywood : 6 ಬಾರಿ ಮದುವೆ ಮುರಿದರೂ 7ನೇ ಬಾರಿ ಉದ್ಯಮಿ ಕೈ ಹಿಡಿದ ಖ್ಯಾತ ನಟಿ! 

ಆಸ್ಪತ್ರೆಗಳಲ್ಲಿ ಪ್ರಾಕ್ಟೀಸ್‌ಗೆ ಅಂತ ಬರುತ್ತಾರೆ. ಆದರೆ ಅವರಿಗೆ ನುರಿತ ವೈದ್ಯರು ಮುಂದೆ ನಿಂತು ಹೇಳಿಕೊಡುವುದಿಲ್ಲ. ಇದರಿಂದ ಈ ರೀತಿ ಆಗ್ತಿದೆ. ಜನ ಇವತ್ತು ಸ್ಕೂಲ್, ಆಸ್ಪತ್ರೆ ಅಥವಾ ದೇವಸ್ಥಾನ ಕಟ್ಟಿಸ್ಬೇಕು ಎಂದೇ ಹೇಳೋದು. ಕಾರಣ ಈ ಮೂರರಲ್ಲೇ ದುಡ್ಡು ಇರೋದು ಎಂದು ದರ್ಶನ್‌ ಹೇಳಿದ್ದರು.

ನಮ್ಮ ಅಪ್ಪನಿಗೆ ಕಿಡ್ನಿ ಸಮಸ್ಯೆ ಇರಲಿಲ್ಲ. ಹಾರ್ಟ್ ಆಪರೇಷನ್ ಮಾಡಿಸಲು ಬೆಂಗಳೂರು ಆಸ್ಪತ್ರೆಗೆ ಹೋಗಿದ್ದರು. ಹಾರ್ಟ್ ಅಲ್ಲಿ ಬ್ಲಾಕ್ ಇದೆ ಎಂದಿದ್ದರು. ನನ್ನ ತಂದೆ ಸುಮಾರು 30 ವರ್ಷ ಡಯಾಬಿಟೀಸ್ ನಿಂದ ಬಳಲುತ್ತಿದ್ದರು. ದೇಹದ ಒಳಕ್ಕೆ ಒಂದು ಡೈ ಹಾಕಿದ್ದರು. ಕ್ಯಾಮರಾ ಕಳಿಸೋಕೆ ಹಾಕಿದ ಡೈ ಅನ್ನು ಅನಾಲೈಸ್ ಕೂಡ ಮಾಡಲಿಲ್ಲ. ಈ ಡೈ ಹೋಗಿ ನಮ್ಮ ತಂದೆ ಕಿಡ್ನಿ ಮೇಲೆ ಕುಳಿತಿತ್ತು. ಕಿಡ್ನಿ ಇದ್ದಕ್ಕಿದಂತೆ ಮುದುಡಿಕೊಳ್ತು. ಹಾರ್ಟ್‌ ಪ್ರಾಬ್ಲಮ್‌ ತೋರಿಸೋಕೆ ನಾವು ಹೋದ್ರೆ, ಆಗಿದ್ದು ಹೀಗೆ ಎಂದಿದ್ದಾರೆ. 

ಇದನ್ನೂ ಓದಿ: ರಕ್ಷಕ್‌ ಬುಲೆಟ್‌ ಬಿಗ್‌ ಬಾಸ್ ಮನೆಯಿಂದ ಹೊರ ಬೀಳಲು ಅಸಲಿ ಕಾರಣ ಇದೇನಾ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News