ಪತ್ನಿ ಅರ್ಪಿತಾಗೆ ಡಿವೋರ್ಸ್ ಕೊಟ್ಟ ಬಳಿಕ ಭಗವಂತನ ಬಳಿ ‘ನಗು’ ಕೇಳಿದ ಕಿರಿಕ್ ಕೀರ್ತಿ!

ಕಿರಿಕ್ ಕೀರ್ತಿ ಹಾಗೂ ಅವರ ಪತ್ನಿ ಅರ್ಪಿತಾರ ಬದುಕಿನಲ್ಲಿ ಬಿರುಕು ಮೂಡಿದೆ ಅನ್ನೋ ಸುದ್ದಿ ಹಬ್ಬಿದ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದರು. ನಮ್ಮ ಜೀವನದ ವೈಯಕ್ತಿಕ ವಿಚಾರಗಳ ಬಗ್ಗೆ ಇಲ್ಲಸಲ್ಲದ ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದರು.

Written by - Puttaraj K Alur | Last Updated : Aug 20, 2023, 09:38 AM IST
  • ಫೇಸ್‍ಬುಕ್‍ ಖಾತೆಯಲ್ಲಿ ಮತ್ತೊಂದು ಪೋಸ್ಟ್ ಹಾಕಿದ ‘ಬಿಗ್ ಬಾಸ್ ಕನ್ನಡ’ ಖ್ಯಾತಿಯ ಕಿರಿಕ್ ಕೀರ್ತಿ
  • ‘ಮೊಗವ ಕೊಟ್ಟ ಭಗವಂತ ನಗುವ ಕೊಡದಿರುವನೇ...? ಎಂದು ನಗುಮೊಗದ ಫೋಟೋ ಹಂಚಿಕೊಂಡ ನಟ
  • ಪತ್ನಿ ಅರ್ಪಿತಾರಿಗೆ ಅಧಿಕೃತವಾಗಿ ಡಿವೋರ್ಸ್ ಘೋಷಿಸಿದ ಕಿರಿಕ್ ಕೀರ್ತಿ ಸಿನಿಮಾಗಳಲ್ಲಿ ಬ್ಯುಸಿ
ಪತ್ನಿ ಅರ್ಪಿತಾಗೆ ಡಿವೋರ್ಸ್ ಕೊಟ್ಟ ಬಳಿಕ ಭಗವಂತನ ಬಳಿ ‘ನಗು’ ಕೇಳಿದ ಕಿರಿಕ್ ಕೀರ್ತಿ!  title=
ನಗುಮೊಗದ ಫೋಟೋ ಹಂಚಿಕೊಂಡ ಕಿರಿಕ್ ಕೀರ್ತಿ

ಬೆಂಗಳೂರು: ಪತ್ನಿ ಅರ್ಪಿತಾರಿಗೆ ಡಿವೋರ್ಸ್ ನೀಡುವ ಮೂಲಕ ಸುದ್ದಿಯಲ್ಲಿರುವ ‘ಬಿಗ್ ಬಾಸ್ ಕನ್ನಡ’ ಖ್ಯಾತಿಯ ಕಿರಿಕ್ ಕೀರ್ತಿ ಇದೀಗ ತಮ್ಮ ಫೇಸ್‍ಬುಕ್‍ ಖಾತೆಯಲ್ಲಿ ಮತ್ತೊಂದು ಪೋಸ್ಟ್ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.

‘ಇನ್ನುಮುಂದೆ ಕರಿಮಣಿ ಮಾಲೀಕ ನಾನಲ್ಲ’ ಅಂತಾ ಪೋಸ್ಟ್ ಹಂಚಿಕೊಂಡು ಅಧಿಕೃತವಾಗಿ ವಿಚ್ಛೇದನ ಘೋಷಿಸಿದ್ದ ಕಿರಿಕ ಕೀರ್ತಿ ಭಗವನಂತ ಬಳಿ ನನಗೆ ‘ನಗು’ ಕೊಡು ಎಂದು ಬೇಡಿಕೊಂಡಿದ್ದಾರೆ. ತಮ್ಮದೇ ನಗುಮುಖದ ಫೋಟೋ ಹಂಚಿಕೊಂಡಿರುವ ಅವರು, ‘ಮೊಗವ ಕೊಟ್ಟ ಭಗವಂತ ನಗುವ ಕೊಡದಿರುವನೇ...?’ ಎಂದು ಕ್ಯಾಪ್ಶನ್ ಬರೆದುಕೊಂಡಿ್ದದಾರೆ.    

ಕಿರಿಕ್ ಕೀರ್ತಿ ಹಾಗೂ ಅವರ ಪತ್ನಿ ಅರ್ಪಿತಾರ ಬದುಕಿನಲ್ಲಿ ಬಿರುಕು ಮೂಡಿದೆ ಅನ್ನೋ ಸುದ್ದಿ ಹಬ್ಬಿದ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದರು. ನಮ್ಮ ಜೀವನದ ವೈಯಕ್ತಿಕ ವಿಚಾರಗಳ ಬಗ್ಗೆ ಇಲ್ಲಸಲ್ಲದ ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಇದೀಗ ಆ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯುವ ಮೂಲಕ ಪತ್ನಿಗೆ ಅಧಿಕೃತವಾಗಿ ವಿಚ್ಛೇದನ ನೀಡಿರುವ ಸುದ್ದಿಯನ್ನು ಸ್ವತಃ ಕಿರಿಕ್ ಕೀರ್ತಿಯೇ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮಗಳ ಜೊತೆ ಶ್ರೇಯಾ ಫೋಟೋ ಶೂಟ್..! ಕ್ಯೂಟ್‌ ಎಂದ ಫ್ಯಾನ್ಸ್‌

ಕಿರಿಕ್ ಕೀರ್ತಿ ಪೋಸ್ಟ್ ನಲ್ಲಿ ಏನಿದೆ..?

ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಇದೀಗ ವಿಚ್ಛೇದನದ ಮೂಳಕ ಪರಸ್ಪರ ದೂರವಾಗಿದೆ. ಈ ಬಗ್ಗೆ ಫೇಸ್‍ಬುಕ್ ಪೋಸ್ಟ್ ಹಂಚಿಕೊಂಡು ‘ಸಕಲರಿಗೂ ಸನ್ಮಂಗಳವಾಗಲಿ ಎಂದು ಕ್ಯಾಪ್ಶನ್ ಬರೆದ ಕೀರ್ತಿ, ‘ಕಾನೂನಿನ ಪ್ರಕಾರ ಇವತ್ತು ನನ್ನ ಮತ್ತು ಅರ್ಪಿತಾ ಜೊತೆಗಿನ ಪತಿ-ಪತ್ನಿಯ ಸಂಬಂಧಕ್ಕೆ ಪೂರ್ಣ ವಿರಾಮ ಸಿಕ್ಕಿದೆ. ಇನ್ನು ಮುಂದೆ ನನ್ನ ವೈಯಕ್ತಿಕ, ವ್ಯಾವಹಾರಿಕ ವಿಚಾರಗಳಿಗೂ ಅವಳಿಗೂ ಯಾವುದೇ ಸಂಬಂಧ ಇರುವುದಿಲ್ಲ’ವೆಂದು ಹೇಳಿದ್ದರು.

‘ಕಾರಣ ಇಷ್ಟೇ.. ಅಧಿಕೃತವಾಗಿ ಇನ್ನು ಮುಂದೆ ಕರಿಮಣಿ ಮಾಲೀಕ ನಾನಲ್ಲ. ಒಂದೊಳ್ಳೆಯ ಬದುಕು ಅವಳಿಗೂ ಸಿಗಲಿ, ಕಹಿನೆನಪುಗಳು ಮರೆತು ಹೊಸಜೀವನಕ್ಕೆ ನಾಂದಿ ಹಾಡಲಿ, ನನಗೂ ನಿಮ್ಮ ಪ್ರೀತಿ ಹಾರೈಕೆ ಮುಂದುವರಿಯಲಿ' ಎಂದು ಹೇಳಿಕೊಂಡಿದ್ದರು.

ಫೋಟೋಗ್ರಫಿ ನನ್ನ ಆಪ್ತ ಗೆಳೆಯ!

World Photography Day ಅಂಗವಾಗಿ ತಮ್ಮ ಫೋಟೋಗ್ರಫಿ ಹವ್ಯಾಸದ ಬಗ್ಗೆಯೂ ಕಿರಿಕ್ ಕೀರ್ತಿ ಮಾಹಿತಿ ಹಂಚಿಕೊಂಡಿದ್ದಾರೆ. ‘2005ರಲ್ಲಿ ನನ್ನೂರು ಶಂಕರಘಟ್ಟದಲ್ಲಿ ನನ್ನದೇ ಫೋಟೋ ಸ್ಟುಡಿಯೋ ಮಾಡಿದ್ದೆ. ಆಗಿಂದ ಫೋಟೋಗ್ರಫಿ ನನ್ನ ಆಪ್ತ ಗೆಳೆಯ... ಕಳೆದ ಕೆಲವು ವರ್ಷದಿಂದ ಫೋಟೋಗ್ರಫಿಯಿಂದ ದೂರವಾಗಿದ್ದೆ... ಇತ್ತೀಚೆಗೆ ಮತ್ತೆ ಶುರು ಮಾಡಿದ್ದೇನೆ... ಕ್ಯಾಮರಾ ಕಣ್ಣಲ್ಲಿ ಜಗತ್ತನ್ನು ನೋಡೋದೇ ಅದ್ಭುತ... ಸಾವಿರ ಹೊಸ ಹೊಸ ಮೊಬೈಲ್‌ಗಳು ಬರಬಹುದು...ಆದ್ರೆ ಕ್ಯಾಮೆರಾಗೆ ಅದರದ್ದೇ ಆದ ತಾಕತ್ತು ಇವತ್ತಿಗೂ ಇದೆ... ಮುಂದೆಯೂ ಇರುತ್ತೆ.... ಅಂದಹಾಗೆ ಇವತ್ತು World Photography Day... ಅದಕ್ಕೆ ಇದೊಂದು ಪೋಟೋ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಪ್ರೇಮ ನಿವೇದನೆ ಮೆಲುಕು ಹಾಕಿದ ಮಲೈಕಾ ಅರೋರಾ..4 ವರ್ಷಗಳ ಪ್ರೀತಿ-ಪ್ರೇಮಕ್ಕೆ ಬಿತ್ತಾ ಬ್ರೇಕ್?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News