Online Game Fraud: ಆನ್‍ಲೈನ್‍ ಗೇಮ್‍ನಲ್ಲಿ 79 ಲಕ್ಷ ಹಣ, 18 ಎಕರೆ ಹೊಲ ಕಳೆದುಕೊಂಡ ಯುವಕ!

Online Game Fraud: ಆನ್‍ಲೈನ್ ಆ್ಯಪ್‌ ಡೀಲರ್ ಮೈನುದ್ದೀನ್, ಚನ್ನಬಸವ, ರುದ್ರಗೌಡ ಮತ್ತು ಹನುಮಗೌಡ ತನಗೆ ವಂಚನೆ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ.

Written by - Puttaraj K Alur | Last Updated : Aug 14, 2023, 12:37 PM IST
  • ಬೇಗನೆ ಹಣ ಗಳಿಸುವ ಆಸೆಯಿಂದ ಆನ್‍ಲೈನ್ ಗೇಮ್ ಚಟ ಹತ್ತಿಸಿಕೊಂಡಿದ್ದ ಯುವಕನಿಗೆ ಭಾರೀ ದೋಖಾ!
  • ಆನ್‌ಲೈನ್‌ ಗೇಮ್‌ ಚಟದಿಂದ 79 ಲಕ್ಷ ರೂ. ಹಣ ಹಾಗೂ 18 ಎಕರೆ ಜಮೀನು ಕಳೆದುಕೊಂಡ ಯುವಕ
  • ತನಗೆ ನ್ಯಾಯ ಕಲ್ಪಿಸಬೇಕೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿರುವ ಯುವಕ
Online Game Fraud: ಆನ್‍ಲೈನ್‍ ಗೇಮ್‍ನಲ್ಲಿ 79 ಲಕ್ಷ ಹಣ, 18 ಎಕರೆ ಹೊಲ ಕಳೆದುಕೊಂಡ ಯುವಕ! title=
Online Game Fraud

ರಾಯಚೂರು: ಇಂದು ರಾತ್ರೋರಾತ್ರಿ ಕೋಟ್ಯಧಿಪತಿಗಳಾಗಲು ಯುವಕರು ಹಾತೊರೆಯುತ್ತಿದ್ದಾರೆ. ಹೀಗಾಗಿ ಆನ್‍ಲೈನ್‍ ಗೇಮ್‍ಗಳ ಚಟಕ್ಕೆ ದಾಸರಾಗಿದ್ದಾರೆ. ದುಡ್ಡು ಹೋಗುತ್ತದೆ ಅಂತಾ ಗೊತ್ತಿದ್ದರೂ ಸಹ ಬೇಗನೆ ಹಣ ಗಳಿಸಬೇಕೆಂಬ ಖಯಾಲಿಗೆ ಬಿದ್ದು ಲಕ್ಷ ಲಕ್ಷ ಹಣ ಕಳೆದುಕೊಳ್ಳುತ್ತಿದ್ದಾರೆ. ಕೆಲವರು ಆನ್‍ಲೈನ್ ಗೇಮ್ ಚಟಕ್ಕೆ ಬಿದ್ದು ಮನೆ-ಮಠ ಮಾರಿಕೊಂಡಿದ್ದರೆ, ಇನ್ನೂ ಕೆಲವರು ಲಕ್ಷಾಂತರ ಸಾಲ ಮಾಡಿ ಅದನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಬೇಗನೆ ಹಣ ಗಳಿಸುವ ಆಸೆಯಿಂದ ಆನ್‍ಲೈನ್ ಗೇಮ್ ಚಟ ಹತ್ತಿಸಿಕೊಂಡಿದ್ದ ಯುವಕನೊಬ್ಬ ಲಕ್ಷಾಂತರ ರೂ. ಹಣ ಮತ್ತು ಚಿನ್ನದಂತಹ ಭೂಮಿಯನ್ನು ಕಳೆದುಕೊಂಡು ಕಂಗಾಲಾಗಿ ಹೋಗಿದ್ದಾನೆ. ಹೌದು, ಲಿಂಗಸುಗೂರು ತಾಲೂಕಿನ ಮುದಗಲ್ಲ ನಿವಾಸಿ ಸಹದೇವಪ್ಪ ಹಣ ಕಳೆದುಕೊಂಡು ಬೀದಿಗೆ ಬಂದಿದ್ದಾನೆ. ಈತ ಆನ್‌ಲೈನ್‌ ಗೇಮ್‌ ಚಟದಿಂದ ಬರೋಬ್ಬರಿ 79 ಲಕ್ಷ ರೂ. ಹಣ ಹಾಗೂ 18 ಎಕರೆ ಜಮೀನು ಕಳೆದುಕೊಂಡಿದ್ದಾನೆ.

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಗಡಿ ನಿಯಂತ್ರಣ ರೇಖೆಯಲ್ಲಿ ಹೈಅಲರ್ಟ್

ಆನ್‍ಲೈನ್ ಗೇಮ್‍ ಮೂಲಕ ತನಗೆ ವಂಚನೆಯಾಗಿದ್ದು, ನನ್ನ ಹಣ ಮತ್ತು ಜಮೀನನ್ನು ವಾಪಸ್ ಕೊಡಿಸುವಂತೆ ಸಹದೇವಪ್ಪ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಆನ್‍ಲೈನ್ ಆ್ಯಪ್‌ ಡೀಲರ್ ಮೈನುದ್ದೀನ್, ಚನ್ನಬಸವ, ರುದ್ರಗೌಡ ಮತ್ತು ಹನುಮಗೌಡ ತನಗೆ ವಂಚನೆ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ.

ನನ್ನಿಂದ ಹಣ ಪಡೆದು ಲಾಗಿನ್ ಐಡಿ, Password ನೀಡುತ್ತಿದ್ದರು ಅಂತಾ ಸಹದೇವಪ್ಪ ಆರೋಪಿಸಿದ್ದಾನೆ. ಆನ್‌ಲೈನ್‌ ಬೆಟ್ಟಿಂಗ್‌ ಆ್ಯಪ್‍ಗಳಾದ ರಮ್ಮಿ, ಕ್ರಿಕೆಟ್‌, ಕ್ಯಾಸಿನೋ ಸಹಿತ ಇತರ ಗೇಮ್‍ಗಳಿಗೆ ದುಡ್ಡು ಕಟ್ಟಿ ಕಳೆದುಕೊಂಡಿದ್ದಾನೆ. ಆ್ಯಪ್‍ಗಳು ಹಾಗೂ ಅವುಗಳ ಡೀಲರ್‌ಗಳಿಂದ ನನಗೆ ವಂಚನೆಯಾಗಿದೆ ಎಂದು ಕಣ್ಣೀರಿಟ್ಟು ಗೋಗರೆದಿದ್ದಾನೆ. 2014ರಿಂದಲೂ ಆನ್‍ಲೈನ್‍ ಗೇಮ್ ಆಡುತ್ತಿರುವ ಸಹದೇವಪ್ಪ ಇದುವರೆಗೆ 79 ಲಕ್ಷ ರೂ. ಹಣ ಮತ್ತು 18 ಎಕರೆ ಜಮೀನು ಕಳೆದುಕೊಂಡು ಕಂಗಾಲಾಗಿದ್ದಾನೆ. ತನಗೆ ನ್ಯಾಯ ಕಲ್ಪಿಸಬೇಕೆಂದು ಇದೀಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ಸಹ ನೀಡಿದ್ದಾನೆ.

ಇದನ್ನೂ ಓದಿ: "ಹಿತೈಷಿಗಳು  ಮನವೊಲಿಸಲು ಪ್ರಯತ್ನಿಸುತ್ತಿದ್ದರೂ ನಮ್ಮ ಪಕ್ಷವು ಬಿಜೆಪಿಯೊಂದಿಗೆ ಹೋಗುವುದಿಲ್ಲ"

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News