ಕನ್ನಡಿಯ ಮೇಲೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಮಹಾರಾಷ್ಟ್ರದ ಡಿಸಿಪಿ ಪುತ್ರ! ಕಾರಣವೇನು ಗೊತ್ತಾ?

Suicide Case: ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸಾಹಿಲ್‌ ಕನ್ನಡಿಯ ಮೇಲೆ "ನಾನು ಈ ಜೀವನ ಮತ್ತು ದೇಹವನ್ನು ಸಾಕಷ್ಟು ಆನಂದಿಸಿದ್ದೇನೆ. ನಾನು ಮರುಪ್ರಾರಂಭಿಸಲು ಬಯಸುತ್ತೇನೆʼ ಅಂತಾ ಬರೆದುಕೊಂಡಿದ್ದಾನೆ.

Written by - Puttaraj K Alur | Last Updated : Oct 15, 2024, 10:16 PM IST
  • ಮಹಾರಾಷ್ಟ್ರದ ಉಪ ಪೊಲೀಸ್ ಆಯುಕ್ತರ ಏಕೈಕ ಪುತ್ರ ಆತ್ಮಹತ್ಯೆಗೆ ಶರಣು
  • ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಡಿಸಿಪಿ ಪುತ್ರ
  • ‌ʼನಾನು ಈ ಜೀವನ & ದೇಹವನ್ನು ಸಾಕಷ್ಟು ಆನಂದಿಸಿದ್ದೇನೆʼ ಎಂದು ಡೆತ್‌ನೋಟ್
ಕನ್ನಡಿಯ ಮೇಲೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಮಹಾರಾಷ್ಟ್ರದ ಡಿಸಿಪಿ ಪುತ್ರ! ಕಾರಣವೇನು ಗೊತ್ತಾ? title=
ಡಿಸಿಪಿಯವರ ಏಕೈಕ ಪುತ್ರ ಆತ್ಮಹತ್ಯೆ!

Suicide Case in Maharashtra: ಮಹಾರಾಷ್ಟ್ರದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಶಿಲ್ವಂತ್ ನಾಂದೇಡ್ಕರ್ ಅವರ ಏಕೈಕ ಪುತ್ರ ಸಾಹಿಲ್ ಶಿಲ್ವಂತ್ ನಾಂದೇಡ್ಕರ್(17) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 12ನೇ ತರಗತಿಯಲ್ಲಿ ಓದುತ್ತಿದ್ದ ಸೈನ್ಸ್‌ ವಿದ್ಯಾರ್ಥಿ ಸಾಹಿಲ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಎನ್ನಲಾಗಿದೆ.

ತಮ್ಮ ನಿವಾಸದಲ್ಲಿಯೇ ಸಾಹಿಲ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ತನ್ನ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಾಹಿಲ್ ಭಾನುವಾರ ಪತ್ತೆಯಾಗಿದ್ದಾನೆ. ಆತ ಯಾವುದೇ ಡೆತ್‌ನೋಟ್ ಬರೆದಿಲ್ಲ. ಆದರೆ ತನ್ನ ಮಲಗುವ ಕೋಣೆಯ ಕನ್ನಡಿಯ ಮೇಲೆ ಸ್ಕೆಚ್ ಪೆನ್ನಿನಿಂದ ಸಂದೇಶವನ್ನು ಬರೆದಿದ್ದಾನೆ. 

ಇದನ್ನೂ ಓದಿ: ಇನ್ನು ಮುಂದೆ ಮೆಟ್ರೋದಲ್ಲಿ ವಾಶ್ ರೂಂ ಗೆ ಹೋಗಬೇಕಾದರೂ ಬೇಕು ಟಾಯ್ಲೆಟ್ ಪಾಸ್ ! ಇಲ್ಲಿ ನೀಡಬೇಕು ನಿಮ್ಮ ಎಲ್ಲಾ ವಿವರ

ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸಾಹಿಲ್‌ ಕನ್ನಡಿಯ ಮೇಲೆ "ನಾನು ಈ ಜೀವನ ಮತ್ತು ದೇಹವನ್ನು ಸಾಕಷ್ಟು ಆನಂದಿಸಿದ್ದೇನೆ. ನಾನು ಮರುಪ್ರಾರಂಭಿಸಲು ಬಯಸುತ್ತೇನೆʼ ಅಂತಾ ಬರೆದಿದ್ದಾನೆ. ಈ ಬಗ್ಗೆ ವೇದಾಂತ್ ನಗರ ಠಾಣೆಯ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಗೆ ಕಾರಣವೇನು ಅಂತಾ ತನಿಖೆ ನಡೆಸುತ್ತಿದ್ದಾರೆ. 

ಶೈಕ್ಷಣಿಕ ಒತ್ತಡದಿಂದ ಸಾಹಿಲ್‌ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಊಹಿಸಲಾಗಿದೆ. ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮಧ್ಯಾಹ್ನ 3 ಗಂಟೆಗೆ ಪ್ರತಾಪ್ ನಗರದ ಚಿತಾಗಾರದಲ್ಲಿ ಸಾಹಿಲ್ ಅಂತ್ಯ ಸಂಸ್ಕಾರ ನೆರವೇರಿತು. 

ಇದನ್ನೂ ಓದಿ: ಬಾಬಾ ಸಿದ್ಧಿಕ್ಕಿ ಹತ್ಯೆಗೈದು, ಈಗ ಸಲ್ಮಾನ್‌ ಖಾನ್ ಟಾರ್ಗೆಟ್‌ ಮಾಡುತ್ತಿರುವ ಲಾರೆನ್ಸ್‌ ಬಿಷ್ಣೋಯ್‌ ಯಾರು? ಪೊಲೀಸ್‌ ಮಗ ರೌಡಿಯಾಗಿ ಬದಲಾಗಲು ಕಾರಣ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News