Onion price: ಅಗ್ಗದ ಈರುಳ್ಳಿ ನಡುವೆ ಮೋದಿ ಸರ್ಕಾರದ ಬಿಗ್ ನಿರ್ಧಾರ..! ರೈತರಲ್ಲಿ ಸಂತಸದ ವಾತಾವರಣ

Onion export: ದೇಶದಲ್ಲಿ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು, ಮಾರ್ಚ್ 31, 2024 ರವರೆಗೆ ರಫ್ತು ನಿಷೇಧಿಸಲಾಗಿತ್ತು, ಆದರೆ ಈ ನಿಷೇಧವನ್ನು ಗಡುವಿನ ಮುಂಚೆಯೇ ತೆಗೆದುಹಾಕಲಾಗಿದೆ.ಇದೀಗ 3 ಲಕ್ಷ ಮೆಟ್ರಿಕ್ ಟನ್ ಈರುಳ್ಳಿ ರಫ್ತು ಮಾಡಲು ಸಮಿತಿ ಅನುಮೋದನೆ ನೀಡಿದೆ.

Written by - Zee Kannada News Desk | Last Updated : Feb 19, 2024, 05:24 PM IST
  • ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಚಿವರ ಸಮಿತಿ ಈಗ ಈರುಳ್ಳಿ ರಫ್ತಿಗೆ ಅನುಮೋದನೆ ನೀಡಿದ್ದಾರೆ.
  • 3 ಲಕ್ಷ ಮೆಟ್ರಿಕ್ ಟನ್ ಈರುಳ್ಳಿ ರಫ್ತು ಮಾಡಲು ಸಮಿತಿ ಅನುಮೋದನೆ ನೀಡಿದೆ.
  • ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಚಿವರ ಸಮಿತಿ ಈರುಳ್ಳಿ ರಫ್ತಿನ ಮೇಲಿನ ನಿಷೇಧವನ್ನು ತೆಗೆದುಹಾಕಲು ನಿರ್ಧರಿಸಿದೆ.
Onion price: ಅಗ್ಗದ ಈರುಳ್ಳಿ ನಡುವೆ ಮೋದಿ ಸರ್ಕಾರದ ಬಿಗ್ ನಿರ್ಧಾರ..! ರೈತರಲ್ಲಿ ಸಂತಸದ ವಾತಾವರಣ title=

Onion Export Ban: ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಒಂದನ್ನು ಕೈಗೊಂಡಿದೆ. ಇದೀಗ ಈರುಳ್ಳಿ ರಫ್ತು ಮೇಲಿನ ನಿಷೇಧವನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಚಿವರ ಸಮಿತಿ ಈಗ ಈರುಳ್ಳಿ ರಫ್ತಿಗೆ ಅನುಮೋದನೆ ನೀಡಿದ್ದಾರೆ. ಹೆಚ್ಚುತ್ತಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಸರ್ಕಾರ ಅದರ ರಫ್ತು ನಿಷೇಧಿಸಿದೆ.

ದೇಶದಲ್ಲಿ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು, ಮಾರ್ಚ್ 31, 2024 ರವರೆಗೆ ರಫ್ತು ನಿಷೇಧಿಸಲಾಗಿತ್ತು, ಆದರೆ ಈ ನಿಷೇಧವನ್ನು ಗಡುವಿನ ಮುಂಚೆಯೇ ತೆಗೆದುಹಾಕಲಾಗಿದೆ. ಇದೀಗ 3 ಲಕ್ಷ ಮೆಟ್ರಿಕ್ ಟನ್ ಈರುಳ್ಳಿ ರಫ್ತು ಮಾಡಲು ಸಮಿತಿ ಅನುಮೋದನೆ ನೀಡಿದೆ. ಇದರೊಂದಿಗೆ ಬಾಂಗ್ಲಾದೇಶಕ್ಕೆ 50,000 ಟನ್ ಈರುಳ್ಳಿ ರಫ್ತು ಮಾಡಲು ಅನುಮೋದನೆಯನ್ನು ಕೇಂದ್ರ ಸರ್ಕಾರ ನೀಡದೆ.

ಇದನ್ನೂ ಓದಿ: ಒಂದೇ ವರ್ಷದ ಸ್ಥಿರ ಠೇವಣಿ ಮೇಲೆ ಜಬರ್ದಸ್ತ್ ಲಾಭ ಗಳಿಸಬೇಕೆ? ಈ ಸರ್ಕಾರಿ ಬ್ಯಾಂಕ್!

ಡಿಸೆಂಬರ್‌ನಲ್ಲಿ ನಿಷೇಧ ಹೇರಲಾಗಿತ್ತು

ಡಿಸೆಂಬರ್ 7, 2023 ರಂದು, ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿಯ ಬೇಡಿಕೆಯನ್ನು ಪೂರೈಸಲು ಮತ್ತು ಅದರ ಸಗಟು ಬೆಲೆಯನ್ನು ಸ್ಥಿರಗೊಳಿಸಲು ಮಾರ್ಚ್ 31 ರವರೆಗೆ ಈರುಳ್ಳಿ ರಫ್ತುಗಳನ್ನು ಕೇಂದ್ರವು ನಿಷೇಧಿಸಿತ್ತು.

ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಚಿವರ ಸಮಿತಿ ಭಾನುವಾರ ಈರುಳ್ಳಿ ರಫ್ತಿನ ಮೇಲಿನ ನಿಷೇಧವನ್ನು ತೆಗೆದುಹಾಕಲು ನಿರ್ಧರಿಸಿದೆ. ಮಹಾರಾಷ್ಟ್ರದ ರೈತರು ಈ ನಿರ್ಧಾರವನ್ನು ಒಪ್ಪಿಕೊಂಡಿದ್ದು, ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವ ನಿರೀಕ್ಷೆಯಲ್ಲಿ ರೈತರು ಇದ್ದಾರೆ.

ಇದನ್ನೂ ಓದಿ: ಇಂದಿನ ಅಡಿಕೆ ರೇಟ್:‌ ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತಷ್ಟು ಏರಿಕೆ

ಈರುಳ್ಳಿ ಬೆಲೆ ಕೆಜಿಗೆ 100 ರೂ.ಗೆ ತಲುಪಿತ್ತು

ಈರುಳ್ಳಿ ಉತ್ಪಾದನೆಯಲ್ಲಿ ಕುಸಿತದ ಮಧ್ಯೆ, ಬೆಲೆಗಳು ಗಗನಕ್ಕೇರಿದವು, ಈ ಕಾರಣದಿಂದಾಗಿ ಈರುಳ್ಳಿ ರಫ್ತು ನಿಷೇಧಿಸಲು ಸರ್ಕಾರ ನಿರ್ಧರಿಸಿತ್ತು, ಡಿಸೆಂಬರ್ ತಿಂಗಳಿನಲ್ಲಿ ಈರುಳ್ಳಿ ಬೆಲೆ ಕೆಜಿಗೆ 100 ರೂ. ಇತ್ತು. ಆದರೆ ಪ್ರಸ್ತುತ ದಿನಗಳಲ್ಲಿ, ಸರ್ಕಾರದ ಕ್ರಮಗಳ ನಂತರ, ಬೆಲೆಗಳು ನಿರಂತರವಾಗಿ ಇಳಿಕೆಯಾಗುತ್ತಿವೆ. 

ಬಫರ್ ಸ್ಟಾಕ್‌ನಂತೆ ಈರುಳ್ಳಿ ಕೆಜಿಗೆ 25 ರೂ.ಗೆ ಮಾರಾಟ

ಈರುಳ್ಳಿ ರಫ್ತಿನ ಮೇಲೆ ನಿಷೇಧದ ಜೊತೆಗೆ, ಜನರಿಗೆ ಅಗ್ಗದ ಈರುಳ್ಳಿ ನೀಡಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಬಫರ್ ಸ್ಟಾಕ್ ಮೂಲಕ ಈರುಳ್ಳಿ ಕೆಜಿಗೆ 25 ರೂ.ಗೆ ಮಾರಾಟ ಮಾಡುವುದಾಗಿ ಸರ್ಕಾರ ಘೋಷಿಸಿತ್ತು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News