ಸಿದ್ದರಾಮಯ್ಯ ಜನ್ಮತಃ ಒಕ್ಕಲಿಗ ವಿರೋಧಿ : ಸದಾನಂದ ಗೌಡ

ಇದುವರೆಗೂ ಸಿದ್ದರಾಮಯ್ಯ ಸರ್ಕಾರದ ಆಡಳಿತವನ್ನು ಟೀಕಿಸುತ್ತಿದ್ದ ಸದಾನಂದ ಗೌಡ, ಇಂದು ಸಿದ್ದರಾಮಯ್ಯ ಜನ್ಮತಃ ಒಕ್ಕಲಿಗ ವಿರೋಧಿ ಎಂದು ಟೀಕಿಸಿದ್ದಾರೆ. 

Last Updated : May 3, 2018, 10:18 AM IST
ಸಿದ್ದರಾಮಯ್ಯ ಜನ್ಮತಃ ಒಕ್ಕಲಿಗ ವಿರೋಧಿ : ಸದಾನಂದ ಗೌಡ  title=

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಹಾಗು ಕೇಂದ್ರ ಸಚಿವ ಡಿ.ವಿ.ಸದಾನಂದ ಅವರ ಟೀಕಾ ಪ್ರಹಾರ ಮುಂದುವರೆದಿದೆ. ಇದುವರೆಗೂ ಸಿದ್ದರಾಮಯ್ಯ ಸರ್ಕಾರದ ಆಡಳಿತವನ್ನು ಟೀಕಿಸುತ್ತಿದ್ದ ಸದಾನಂದ ಗೌಡ, ಇಂದು ಸಿದ್ದರಾಮಯ್ಯ ಜನ್ಮತಃ ಒಕ್ಕಲಿಗ ವಿರೋಧಿ ಎಂದು ಟೀಕಿಸಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಡಿ.ವಿ.ಸದಾನಂದಗೌಡ ಅವರು, "ನಾನು ಯಾವುದೇ ಜಾತಿಯ ಪ್ರತಿಪಾದಕನಲ್ಲ. ಮೊದಲು ಒಕ್ಕಲಿಗರು ಅನುಸರಿಸುವ ನಾಥ ಪಂಥದ ಯೋಗಿ ಆದಿತ್ಯನಾಥ ರ ಬಗ್ಗೆ ಕೀಳು ಹೇಳಿಕೆ, ಬಳಿಕ ಮಾಜಿ ಪ್ರಧಾನಿ ಹಿರಿಯರಾದ ಮಾನ್ಯ ಶ್ರೀ ದೇವೇಗೌಡರ ಬಗ್ಗೆ ಅಗೌರವಾದ ಮಾತು, ಸರಕಾರ ನಡೆಸಿದ ಅವಧಿಯಲ್ಲಿ ಒಕ್ಕಲಿಗ ಅಧಿಕಾರಿಗಳಿಗೆ ಕಿರುಕುಳ, ಇದೆಲ್ಲ ನೋಡಿದರೆ ಸಿದ್ದರಾಮಯ್ಯನವರು ಜನ್ಮತಃ ಒಕ್ಕಲಿಗ ವಿರೋಧಿ ಖಂಡಿತ" ಎಂದಿದ್ದಾರೆ. 

Trending News