ಬಿಜೆಪಿಯನ್ನು ಸೋಲಿಸಲು ಇಮ್ಮಡಿ ಪುಲಕೇಶಿ ನಿದರ್ಶನ ಕೊಟ್ಟ ಸಿದ್ದರಾಮಯ್ಯ!

   

Last Updated : Apr 24, 2018, 07:21 PM IST
ಬಿಜೆಪಿಯನ್ನು ಸೋಲಿಸಲು ಇಮ್ಮಡಿ ಪುಲಕೇಶಿ ನಿದರ್ಶನ ಕೊಟ್ಟ ಸಿದ್ದರಾಮಯ್ಯ! title=

ಬೆಂಗಳೂರು: ಇಂದು ಬಾದಾಮಿಯಲ್ಲಿ ಭಾರಿ ಜನಸ್ತೋಮದ ಸಮ್ಮುಖದಲ್ಲಿ ಚುನಾವಣಾ ನಾಮಪತ್ರ ಸಲ್ಲಿಸಿದ  ಸಿದ್ದರಾಮಯ್ಯ, ಆ ಮೂಲಕ ಉತ್ತರ ಕರ್ನಾಟಕದಲ್ಲಿಯೂ ಕೂಡ ಮತದಾರರನ್ನು ಸೆಳೆಯುವ ಯತ್ನ ನಡೆಸಿದ್ದಾರೆ.

ಸಿದ್ದರಾಮಯ್ಯ ಇಂದು ನಾಮ ಪತ್ರ ಸಲ್ಲಿಸಿ ಬಾದಾಮಿ ಚಾಲುಕ್ಯರ ರಾಜನಾದ ಇಮ್ಮಡಿ ಪುಲಕೇಶಿ  ಉತ್ತರದ ರಾಜನಾದ ಹರ್ಷವರ್ಧನನನ್ನು ನರ್ಮಧಾ ನದಿಯ ತೀರದಲ್ಲಿ ಸೋಲಿಸಿದ ನಿದರ್ಶನವನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ. ಅಲ್ಲದೆ ಈ ಬಾರಿ ಮತ್ತೆ ಕನ್ನಡದ ಆ ವರ್ಣರಂಜಿತ ನೆನಪುಗಳನ್ನು ಮತ್ತೆ ಮರುಕಳಿಸಿ ಎಂದು ಅವರು ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದಲ್ಲಿ ಇದೇ ಮೇ 12 ರಂದು ವಿಧಾನಸಭಾ ಚುನಾವಣೆ ನಡೆಯಲಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮರಳಿ ಮುಖ್ಯಮಂತ್ರಿಯಾಗುವ ವಿಶ್ವಾಸ ಹೊಂದಿದ್ದಾರೆ.

Trending News