ಶಾಸಕ ಆಗದಿದ್ರೂ, ಸಂಸದ ಆಗಿ ಪ್ರಧಾನಿ ಆಗ್ತೀನಿ: ಹುಚ್ಚ ವೆಂಕಟ್

ವಿಧಾನಸಭೆ ಚುನಾವಣೆಯಲ್ಲಿ ಒಂದು ವೇಳೆ ಸೋತರೆ, ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಪ್ರಧಾನಿ ಆಗುತ್ತೇನೇ ಎದ್ನು ಹುಚ್ಚ ವೆಂಕಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Last Updated : May 3, 2018, 12:52 PM IST
ಶಾಸಕ ಆಗದಿದ್ರೂ, ಸಂಸದ ಆಗಿ ಪ್ರಧಾನಿ ಆಗ್ತೀನಿ: ಹುಚ್ಚ ವೆಂಕಟ್ title=

ಮಡಿಕೇರಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಒಂದು ವೇಳೆ ಸೋತರೆ, ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಪ್ರಧಾನಿ ಆಗುತ್ತೇನೆ ಎಂದು ಹುಚ್ಚ ವೆಂಕಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಇಂದಿಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಈ ಬಾರಿ ಜನತೆ ನನಗೆ ಮತ ಹಾಕಿ ಗೆಲ್ಲಿಸದಿದ್ದರೆ, ಮುಂದೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಪ್ರಧಾನಿಯಾಗಿ ರಾಜಕೀಯ ನಿವೃತ್ತಿ ಹೊಂದುವುದೇ ನನ್ನ ಗುರಿ. ಒಂದು ವೇಳೆ ಮತದಾರರು ತಮ್ಮನ್ನು ಗೆಲ್ಲಿಸದಿದ್ದರೆ, ಅದು ಹಣಕ್ಕಾಗಿ ತಮ್ಮನ್ನು ತಾವು ಮಾರಿಕೊಂಡ ಮತದಾರರ ಸೋಲೇ ಹೊರತು ನನ್ನ ಸೋಲಲ್ಲ" ಎಂದು ಹುಚ್ಚ ವೆಂಕಟ್ ಹೇಳಿದ್ದಾರೆ. 

ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಹುಚ್ಚ ವೆಂಕಟ್ ಸ್ಪರ್ಧಿಸಿದ್ದಾರೆ. 

Trending News