ರಾಜಧಾನಿ ತಿರುವನಂತಪುರದ ನಂತರ ಕೇರಳದ ಎರಡನೇ ಅತಿದೊಡ್ಡ ನಗರ ಹಾಗೂ ದೇಶದ ಪ್ರಮುಖ ಬಂದರುಗಳಲ್ಲಿ ಒಂದಾದ ಕೊಚ್ಚಿ ಅಥವಾ ಕೊಚಿನ್ ಮಹಾನಗರದಲ್ಲಿ ಐತಿಹಾಸಿಕ ಯೋಜನೆಯೊಂದಕ್ಕೆ ಚಾಲನೆ ದೊರೆಯಲಿದೆ. ದೇಶದ ಮೊಟ್ಟಮೊದಲ ಜಲ ಮೆಟ್ರೋ ಸಾರಿಗೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಇಂತಹ ವಿಶಿಷ್ಟ ನಗರ ಜಲ ಸಾರಿಗೆ ವ್ಯವಸ್ಥೆ ಭಾರತ ಮಾತ್ರವಲ್ಲದೆ, ದಕ್ಷಿಣ ಏಷ್ಯಾದಲ್ಲಿಯೇ ಮೊದಲನೇಯದೆಂಬುದು ವಿಶೇಷ