"ನೆನಪಿನ ಬಾಗಿಲ ಬಡಿದಿದೆ ಕೈಗಳು, ನೆರಳಿನ ಹೆಜ್ಜೆಯ ಅರಸಿದೆ ಕಾಲ್ಗಳು"ಆಹಾ ಎಂಥ ಸಾಹಿತ್ಯ..ಈ ಸಾಲುಗಳು ಯಾಕೋ ಹೆಚ್ಚಾಗಿ ನಮ್ಮನ್ನ ಕಾಡಲು ಶುರುವಾಗಿದೆ.ಯೆಸ್ ಬಹುನಿರೀಕ್ಷೆಯ 'ತಿಮ್ಮಯ್ಯ ಆಂಡ್ ತಿಮ್ಮಯ್ಯ' ಸಿನಿಮಾದ ಮತ್ತೊಂದು ಟೀಸರ್ ಬಿಡುಗಡೆಯಾಗಿ ಮನಸ್ಸಿಗೆ ತುಂಬಾ ಹತ್ತಿರವಾಗುತ್ತಿದೆ. ಈ ಹಾಡಿನ ಸಾಲು ಈ ಟೀಸರ್ ನಲ್ಲಿ ನಿಮ್ಮ ಮನಸ್ಸಿಗೆ ನಾಟೋದು ಪಕ್ಕಾ ಆಗಿದೆ.
ಇದನ್ನೂ ಓದಿ : ನೋಟ್ ಎಕ್ಸ್ ಚೆಂಜ್ ನೆಪದಲ್ಲಿ ಪೆಟ್ರೋಲ್ ಬಂಕ್ನಲ್ಲಿ ಹಣ ಕದ್ದು ಪರಾರಿ
ಹಿರಿಯ ನಟ ಅನಂತ್ ನಾಗ್ ಮತ್ತು ದೂದ್ ಪೇಡ ದಿಗಂತ್ ಮತ್ತೇ ಒಂದಾಗಿದ್ದಾರೆ. ಇವರಿಬ್ಬರೂ ತಾತ ಮೊಮ್ಮಗ ಅನ್ನೋ ಮ್ಯಾಟರ್ ನಿಮ್ಗೆ ಗೊತ್ತಿದ್ದೀಯಾ...? ಯೆಸ್ ʼತಿಮ್ಮಯ್ಯ ಆಂಡ್ ತಿಮ್ಮಯ್ಯʼ ಅನ್ನೋ ವಿಭಿನ್ನ ಟೈಟಲ್ ಹೊಂದಿರೋ ಚಿತ್ರದಲ್ಲಿ ಈ ಜಬರ್ದಸ್ತ್ ಜೋಡಿ ಒಂದಾಗಿದ್ದಾರೆ. ಅನಂತ್ ನಾಗ್ ಮತ್ತು ದಿಗಂತ್ ಜೋಡಿ ಸಿನಿಮಾದಲ್ಲಿ ಇದ್ರೆ ಆ ಚಿತ್ರ ಮಾತ್ರ ಭರ್ಜರಿ ಯಶ ಕಾಣೋದ್ರಲ್ಲಿ ಅನುಮಾನವೇ ಇಲ್ಲ ಬಿಡಿ.
ಸಸ್ಪೆನ್ಸ್ ಥ್ರಿಲ್ಲರ್ ಡ್ರಾರ್ಕ್ ಕಾಮಿಡಿ ಜಾನರ್ ನ ಈ ಚಿತ್ರಕ್ಕೆ ಸಮರ್ಥ್ ಬಿ ಕಡ್ಕೋಲ್ ಆಕ್ಷನ್ ಕಟ್ ಹೇಳಿದ್ದು, ಗುರುದತ್ತ ಗಾಣಿಗ ಮತ್ತು ಸಮರ್ಥ್ ಜಂಟಿಯಾಗಿ ನಿರ್ಮಾಣ ಮಾಡಲಿದ್ದಾರೆ. ದಿಗಂತ್ ಗೆ ಜೋಡಿಯಾಗಿ ಯುವನಟಿ ಧನು ಹರ್ಷ ನಟಿಸಲಿದ್ದಾರೆ.
ಕನ್ನಡ ಕಲಿಯಬೇಕು ಎಂದು ಬಂದವರು ಬದುಕಿನ ಪಾಠ ಕಲಿತುಕೊಂಡು ಹೋಗುವುದೇ 'ಗಾಳಿಪಟ 2' ಕಥೆಯ ಜೀವಾಳ. ಇಲ್ಲಿ ಹಲವು ಭಾವನೆಗಳಿವೆ. ಅವುಗಳನ್ನೇ ಮುಂದಿಟ್ಟುಕೊಂಡು ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.
ಇನ್ನು ಪ್ರಾಯಶಃ ಹಾಡನ್ನ ರಿಲೀಸ್ ಮಾಡಿ ಮಾತಾಡಿದ ಕಿಚ್ಚ, ಯೋಗರಾಜ್ ಭಟ್ರವರ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಜೊತೆಗೆ ʼಪ್ರಾಯಶಃʼ ಹಾಡನ್ನು ಸ್ವತಃ ತಾವೂ ಕೂಡ ಹಾಡಿ ಖುಷಿಪಟ್ಟಿದ್ದಾರೆ. ಸಖತ್ ಮಜಾ ಕೊಡೋ ಹಾಡು ಮತ್ತು ಟ್ರೇಲರ್ ಮೂಲಕ ಸದಾ ಸುದ್ದಿಯಲ್ಲಿರುವ ʼಗಾಳಿಪಟ 2ʼ ಸಿನಿಮಾ ಆಗಸ್ಟ್ 12ರಂದು ಅದ್ಧೂರಿಯಾಗಿ ತೆರೆ ಮೇಲೆ ಬರಲಿದೆ. ಸಿನಿಮಾದ ಬಗ್ಗೆ ಅಭಿಮಾನಿಗಳು ಬೆಟ್ಟದಷ್ಟು ನೀರಿಕ್ಷೆ ಇಟ್ಟುಕೊಂಡು ಕಾಯುತ್ತಿದ್ದಾರೆ.
ಇನ್ನು ʼನೀನು ಬಗೆಹರಿಯದ ಹಾಡುʼ ಮಾತ್ರ ಆಹಾ..! ಅನ್ನುವಂತಿದೆ. ರಿಲೀಸ್ ಆಗಿರುವ ಎಲ್ಲಾ ಹಾಡುಗಳು ಮಜಾ ಕೊಟ್ಟಿದೆ ಅಂದ್ರೆ ತಪ್ಪಾಗಲ್ಲ. ಸ್ಯಾಂಡಲ್ವುಡ್ನ ಸ್ಟಾರ್ ಡೈರೆಕ್ಟರ್ ಯೋಗರಾಜ್ ಭಟ್ ಡೈರೆಕ್ಷನ್ ಅಂದ್ರೆ ಗೊತ್ತಲ್ಲ. ಅದು ವಿಭಿನ್ನತೆಯ ಆಗರವೇ ಆಗಿರುತ್ತದೆ. ಭಟ್ರ ಸಿನಿಮಾ ನೋಡಿದ್ರೆ ಭರ್ಜರಿ ಕಿಕ್ ಸಿಗುತ್ತೆ ಅನ್ನೋದ್ರಲ್ಲಿ ಡೌಟೇ ಇಲ್ಲ ಬಿಡಿ. ಅಷ್ಟು ಸುಂದರವಾಗಿ ಕಥೆ ಕಟ್ಟೋದ್ರಲ್ಲಿ ಎತ್ತಿದ ಕೈ ನಮ್ಮ ಯೋಗರಾಜ್ ಭಟ್ರದ್ದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.