“ನಾನು ಕ್ಯಾಪ್ಟನ್ ಥರ ಯೋಚಿಸಿದ್ರೂ ಕ್ಯಾಪ್ಟನ್ ಆಗ್ಲಿಲ್ಲ”- ಭಾರತದ ಸತತ ಗೆಲುವಿನ ಮಧ್ಯೆ ನಾಯಕತ್ವದ ಬಗ್ಗೆ ಹೀಗಂದ ಜಡೇಜಾ

Ravindra Jadeja Statement about Team India Captaincy: ಅಂದಹಾಗೆ ಕಳೆದ ಪಂದ್ಯದಲ್ಲಿ ಪ್ರತಿಯೊಬ್ಬ ಭಾರತೀಯ ಆಟಗಾರನೂ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಒಂದು ಹೆಜ್ಜೆ ಮುಂದೆಯೇ ಇಟ್ಟು ಟೀಂ ಇಂಡಿಯಾ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದ್ದಾರೆ.

Written by - Bhavishya Shetty | Last Updated : Nov 6, 2023, 04:40 PM IST
    • 8 ಪಂದ್ಯಗಳಲ್ಲೂ ಜಯ ಸಾಧಿಸಿರುವ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ
    • ಕಳೆದ ಪಂದ್ಯದಲ್ಲಿ ಪ್ರತಿಯೊಬ್ಬ ಭಾರತೀಯ ಆಟಗಾರನೂ ಅದ್ಭುತ ಪ್ರದರ್ಶನ ನೀಡಿದ್ದರು
    • ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ನಾಯಕತ್ವದ ಬಗ್ಗೆಯೂ ಮಾತುಗಳನ್ನಾಡಿದ್ದಾರೆ
“ನಾನು ಕ್ಯಾಪ್ಟನ್ ಥರ ಯೋಚಿಸಿದ್ರೂ ಕ್ಯಾಪ್ಟನ್ ಆಗ್ಲಿಲ್ಲ”- ಭಾರತದ ಸತತ ಗೆಲುವಿನ ಮಧ್ಯೆ ನಾಯಕತ್ವದ ಬಗ್ಗೆ ಹೀಗಂದ ಜಡೇಜಾ title=
Ravindra Jadeja

Ravindra Jadeja Statement about Team India Captaincy: ಕಳೆದ ದಿನ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೆ ಆಡಿರುವ 8 ಪಂದ್ಯಗಳಲ್ಲೂ ಜಯ ಸಾಧಿಸಿರುವ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನೊಂದೆಡೆ ಉತ್ತಮ ಬ್ಯಾಟಿಂಗ್ ಲೈನಪ್, ಬೌಲಿಂಗ್, ಫೀಲ್ಡಿಂಗ್ ಹೊಂದಿರುವ ಭಾರತ ಈ ಬಾರಿ ಪ್ರಶಸ್ತಿ ಗೆದ್ದು 12 ವರ್ಷಗಳ ಕನಸನ್ನು ನನಸು ಮಾಡಲು ಮುಂದಾಗಿದೆ.

ಇದನ್ನೂ ಓದಿ: ಕೊಹ್ಲಿ ಫೋನ್‌ನಲ್ಲಿ ಅತಿ ಹೆಚ್ಚು ಮಾತನಾಡೋದು ಈ ಮೂವರ ಜೊತೆ.. ತಾಯಿ, ಅನುಷ್ಕಾ.. ಆ ಮೂರನೇ ವ್ಯಕ್ತಿ ಯಾರು?

ಅಂದಹಾಗೆ ಕಳೆದ ಪಂದ್ಯದಲ್ಲಿ ಪ್ರತಿಯೊಬ್ಬ ಭಾರತೀಯ ಆಟಗಾರನೂ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಒಂದು ಹೆಜ್ಜೆ ಮುಂದೆಯೇ ಇಟ್ಟು ಟೀಂ ಇಂಡಿಯಾ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ಹುಟ್ಟುಹಬ್ಬದ ದಿನವೇ ಶತಕ ಬಾರಿಸಿದ್ದು, ಈ ಮೂಲಕ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಮತ್ತೊಂದೆಡೆ ರವೀಂದ್ರ ಜಡೇಜಾ ಕೂಡ 5 ವಿಕೆಟ್ ಕಬಳಿಸುವ ಮೂಲಕ ದಿಗ್ಗಜರ ಎಲೈಟ್ ಕ್ಲಬ್ ಸೇರಿದ್ದಾರೆ.

ಈ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ನಾಯಕತ್ವದ ಬಗ್ಗೆಯೂ ಮಾತುಗಳನ್ನಾಡಿದ್ದಾರೆ. “ಕಳೆದ ಕೆಲ ಪಂದ್ಯಗಳಿಂದ ನೋಡುವುದಾದರೆ ಬ್ಯಾಟಿಂಗ್ ಮತ್ತು ಬೌಲಿಂಗ್’ನಲ್ಲಿ ಲಯ ಚೆನ್ನಾಗಿದೆ. ಮುಂದೆ ನಾಕೌಟ್ ಸುತ್ತು ಇರುವುದರಿಂದ ತುಂಬಾ ಶ್ರಮ ವಹಿಸುವ ಅಗತ್ಯ ಇದೆ. ಜೊತೆಗೆ ಪ್ರತಿಯೊಂದು ಆಯಾಮದಲ್ಲೂ ಟೀಂ ಅನ್ನು ಸಂಘಟಿಸಲಾಗುತ್ತಿದೆ” ಎಂದು ಹೇಳಿದರು.

“ಭಾರತದಲ್ಲಿ ವಿಶ್ವಕಪ್ ನಡೆಯುತ್ತಿರೋದು ತುಂಬಾ ಖುಷಿ, ಕೊಹ್ಲಿ ಕೂಡ ಪ್ರಮುಖ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಯಾರ ಮೇಲೂ ದೃಷ್ಟಿ ಹಾಕ್ಬೇಡಿ” ಎಂದು ನಕ್ಕರು ಜಡ್ಡು.

ಇದನ್ನೂ ಓದಿ: 13 ವರ್ಷಗಳ ಸುದೀರ್ಘ ವೃತ್ತಿಜೀವನಕ್ಕೆ ಸ್ಟಾರ್ ಬೌಲರ್ ನಿವೃತ್ತಿ ಘೋಷಣೆ!

“ನಾನೂ ಕೂಡ ಕ್ಯಾಪ್ಟನ್ ಥರ ಆಲೋಚಿಸುತ್ತೇನೆ. ಆದ್ರೆ ಕ್ಯಾಪ್ಟನ್ ಆಗ್ಲಿಲ್ಲ. ಅದು ಬೇರೆ ಮಾತು… ಆದರೆ ಆಲ್ ರೌಂಡರ್ ಆಗಿರುವವನಿಗೆ ಕರ್ತವ್ಯ ಹೆಚ್ಚಿರುತ್ತೆ, ಟಫ್ ಟೈಂಗಳಲ್ಲಿ ತಂಡಕ್ಕೆ ಬಲವನ್ನು ನೀಡುವುದು, ವಿಕೆಟ್’ಗಳನ್ನು ಕಬಳಿಸುವುದು, ಬ್ಯಾಟಿಂಗ್’ನಲ್ಲಿಯೂ ಉತ್ತಮ ಪ್ರದರ್ಶನ ನೀಡುವುದು.. ಹೀಗಿರುತ್ತದೆ” ಎಂದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews

 

Trending News