2023ರಲ್ಲಿ ಈ ಮೂರು ರಾಶಿಯವರನ್ನು ಅತಿಯಾಗಿ ಕಾಡಲಿದ್ದಾನೆ ಶನಿ ಮಹಾತ್ಮ

 ಜನವರಿ 17, 2023 ರಂದು, ಶನಿಯು ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಶನಿಯ ರಾಶಿ ಬದಲಾವಣೆಯಿಂದ 3 ರಾಶಿಯವರು  ತಮ್ಮ ಜೀವನದಲ್ಲಿ ಕಷ್ಟಗಳ ಸರಮಾಲೆ ಎದುರಿಸಬೇಕಾಗುತ್ತದೆ

Written by - Ranjitha R K | Last Updated : Nov 24, 2022, 08:53 AM IST
  • ನವಗ್ರಹಗಳ ಪೈಕಿ ಶನಿ ಗ್ರಹಕ್ಕೆ ಜ್ಯೋತಿಷ್ಯದಲ್ಲಿ ವಿಶೇಷ ಸ್ಥಾನವಿದೆ
  • ಶನಿ ಗ್ರಹ ಅಶುಭ ಸ್ಥಾನದಲ್ಲಿದ್ದರೆ, ಪ್ರತಿ ಹಂತದಲ್ಲಿ ಕೈ ಸುಟ್ಟುಕೊಳ್ಳಬೇಕಾಗುತ್ತದೆ.
  • 2023 ರಲ್ಲಿ, ಶನೀಶ್ವರ ದೇವ ಕಾಡುವ ರಾಶಿಗಳು ಯಾವುವು ?
 2023ರಲ್ಲಿ ಈ ಮೂರು ರಾಶಿಯವರನ್ನು ಅತಿಯಾಗಿ ಕಾಡಲಿದ್ದಾನೆ ಶನಿ ಮಹಾತ್ಮ  title=
Shani Gochar 2023 Effect

ಬೆಂಗಳೂರು : ನವಗ್ರಹಗಳ ಪೈಕಿ ಶನಿ ಗ್ರಹಕ್ಕೆ ಜ್ಯೋತಿಷ್ಯದಲ್ಲಿ ವಿಶೇಷ ಸ್ಥಾನವಿದೆ. ಯಾರ ಜಾತಕದಲ್ಲಿ ಶನಿ ಶುಭ ಫಲ ನೀಡುವ ಸ್ಥಾನದಲ್ಲಿರುತ್ತಾನೆಯೋ ಅವರು ಮುಟ್ಟಿದ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಆದರೆ ಶನಿ ಗ್ರಹ ಅಶುಭ ಸ್ಥಾನದಲ್ಲಿದ್ದರೆ, ಪ್ರತಿ ಹಂತದಲ್ಲಿ ಕೈ ಸುಟ್ಟುಕೊಳ್ಳಬೇಕಾಗುತ್ತದೆ. ಇನ್ನು ಒಮ್ಮೆ ಆರಂಭವಾಗುವ ಶನಿ ದೆಸೆ ಕೂಡಾ ದೀರ್ಘ ಕಾಲದವರೆಗೆ ನಡೆಯುತ್ತದೆ. ಜನವರಿ 17, 2023 ರಂದು, ಶನಿಯು ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಶನಿಯ ರಾಶಿ ಬದಲಾವಣೆಯಿಂದ 3 ರಾಶಿಯವರು  ತಮ್ಮ ಜೀವನದಲ್ಲಿ ಕಷ್ಟಗಳ ಸರಮಾಲೆ ಎದುರಿಸಬೇಕಾಗುತ್ತದೆ.  

2023 ರಲ್ಲಿ, ಶನೀಶ್ವರ ದೇವ ಕಾಡುವ ರಾಶಿಗಳು ಯಾವುವು ? :
ಮೇಷ ರಾಶಿ : 2023ರಲ್ಲಿ, ಮೇಷ ರಾಶಿಯವರ ಖರ್ಚು ಹೆಚ್ಚಾಗುತ್ತದೆ.  ಕುಟುಂಬದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮನಸ್ಥಿತಿ ಸರಿಯಾಗಿರುವುದಿಲ್ಲ. ಆರೋಗ್ಯ ಹದಗೆಡಬಹುದು. ಏನೇ ಮಾಡಿದರೂ ಯಶಸ್ಸು ಕೈ ತಪ್ಪುತ್ತಲೇ ಇರಬಹುದು. ಅನಾವಶ್ಯಕ ಪ್ರಯಾಣಗಳು ಎದುರಾಗಲಿವೆ. ಆದರೆ ಯಾವುದೇ ಕಾರಣಕ್ಕೂ ನಿರಾಶೆಗೊಳ್ಳಬೇಡಿ. ಮಾಡುವ ಕೆಲಸವನ್ನು ಬಹಳ ಎಚ್ಚರಿಕೆಯಿಂದ ಮಾಡಿ. 

ಇದನ್ನೂ ಓದಿ : Astrology : ಅಪ್ಪಿತಪ್ಪಿಯೂ ಈ ಕೆಲಸ ಮಾಡಿದರೆ ಶನಿದೇವನ ವಕ್ರದೃಷ್ಟಿಗೆ ಒಳಗಾಗುತ್ತೀರಿ!

ಸಿಂಹ ರಾಶಿ : ಸಿಂಹ ರಾಶಿಯವರು ಕೂಡಾ 2023ರಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಕೆಲಸದ ಒತ್ತಡ ಹೆಚ್ಚುತ್ತದೆ. ಕುಟುಂಬ ಸದಸ್ಯರಿಂದಲೇ  ಮಾನಸಿಕ ನೋವೂ ಉಂಟಾಗಬಹುದು. ನಿಮ್ಮ ಕೈಯ್ಯಲ್ಲಿರುವ ಹಣವನ್ನು ಆದಷ್ಟು ಬೇಗ ಹೂಡಿಕೆ ಮಾಡುವುದು ಉತ್ತಮ. ಇಲ್ಲದಿದ್ದರೆ, ಅನಗತ್ಯ ವೆಚ್ಚಗಳು ಎದುರಾಗಿ ದೊಡ್ಡ ಪ್ರಮಾಣದ ನಷ್ಟ ಸಂಭವಿಸಬಹುದು.

ಧನು ರಾಶಿ :  ಈ ರಾಶಿಯವರಿಗೆ ಶನಿ ಸಾಡೇ ಸಾತಿಯಿಂದ ಮುಕ್ತಿ ಸಿಕ್ಕಿದರೂ, ಸ್ವಲ್ಪ ಸಮಯ ಯಾತನಾಮಯವಾಗಿಯೇ ಉಳಿಯಬಹುದು. ವೃತ್ತಿ ಜೀವನದಲ್ಲಿ ಅಡೆತಡೆಗಳು ಎದುರಾಗಬಹುದು. ಖರ್ಚು ಹೆಚ್ಚುತ್ತಲೇ ಇರುತ್ತದೆ. ಅಪಾಯಕಾರಿ ಹೂಡಿಕೆಗಳಿಂದ ಸಾಧ್ಯವಾದಷ್ಟು ದೂರವಿರಿ. ಭೂಮಿ-ಕಟ್ಟಡ, ವಾಹನದಲ್ಲಿ ಮಾತ್ರ ಹಣವನ್ನು ಹೂಡಿಕೆ ಮಾಡುವುದು ಸೂಕ್ತವಾಗಿರುತ್ತದೆ. ಯಾರ ಮೇಲೂ ಕುರುಡು ನಂಬಿಕೆ ಬೇಡ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. 

ಇದನ್ನೂ ಓದಿ : ಲಕ್ಷ್ಮೀ ಕೃಪೆಗಾಗಿ ಇಂದೇ ಈ ವಸ್ತುಗಳನ್ನು ಮನೆಯಿಂದ ಹೊರ ಹಾಕಿ.!

 

( ಸೂಚನೆ : ಇಲ್ಲಿ ನೀಡಲಾದಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News