ಪಿತೃ ಪಕ್ಷದ ಊಟಕ್ಕೆ ಹೋಗಲು ಪೊಲೀಸ್ ಜೀಪ್ ಕರೆಸಿಕೊಂಡ ಭೂಪ..! ನಂಬಲಸಾಧ್ಯವಾದರೂ ಸತ್ಯ!

Pitru Paksha: ಪಿತೃ ಪಕ್ಷದಲ್ಲಿ ಪಿತೃಗಳಿಗೆ ತರ್ಪಣ ಬಿಟ್ಟು ಅವರ ಹೆಸರಿನಲ್ಲಿ ಪೂಜೆ ಮಾಡಲಾಗುತ್ತದೆ, ಪ್ರತಿಯೊಬ್ಬರೂ ಅವರವರ ಸಂಪ್ರದಾಯದಂತೆ ತಮ್ಮ ಹಿರಿಯರಿಗೆ ಪೂಜೆ ಸಲ್ಲಿಸುತ್ತಾರೆ. 

Written by - Yashaswini V | Last Updated : Sep 27, 2024, 10:49 AM IST
  • 112 ಗೆ ಫೋನ್ ಮಾಡಿ ಸರ್... ಗಲಾಟೆ ಬೇಗ ಬನ್ನಿ ಅಂತ ಮನವಿ
  • ವ್ಯಕ್ತಿಯ ಕರೆ ನಂಬಿ ಸ್ಥಳಕ್ಕೆ ಬಂದ ಪೊಲೀಸರಿಗೆ ಶಾಕ್..
  • ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿ ಘಟನೆ
ಪಿತೃ ಪಕ್ಷದ ಊಟಕ್ಕೆ ಹೋಗಲು ಪೊಲೀಸ್ ಜೀಪ್ ಕರೆಸಿಕೊಂಡ ಭೂಪ..! ನಂಬಲಸಾಧ್ಯವಾದರೂ ಸತ್ಯ!  title=

ಚಿಕ್ಕಮಗಳೂರು: ಪಿತೃಪಕ್ಷದಲ್ಲಿ ಸ್ವರ್ಗಗ್ರಸ್ತರಾಗಿರುವ ಮನೆಯ ಹಿರಿಯರ ಹೆಸರಿನಲ್ಲಿ ತರ್ಪಣ ಬಿಟ್ಟು ಪೂಜೆ ಮಾಡಲಾಗುತ್ತದೆ. ಹಿರಿಯರಿಗೆ ಎಡೆಯಿಟ್ಟು ಆ ಪ್ರಸಾದವನ್ನು ಮನೆ ಮಂದಿಯೆಲ್ಲಾ ತಿನ್ನುವುದರಿಂದ ಅವರ ಆಶೀರ್ವಾದ ಸದಾ ನಮ್ಮ ಮೇಲಿರುತ್ತದೆ ಎಂಬುದು ನಂಬಿಕೆ. ಹಾಗಾಗಿಯೇ, ಎಲ್ಲೆ ಇದ್ದರೂ ಎಷ್ಟೇ ದೂರದ ಊರುಗಳಲ್ಲಿ ನೆಲೆಸಿದ್ದರೂ ಕೂಡ ಪಿತೃ ಪಕ್ಷದಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಗೆ (ಸ್ವಂತ ಊರಿಗೆ) ಹೋಗುತ್ತಾರೆ. ಇಲ್ಲೊಬ್ಬ ಭೂಪ ಪಿತೃ ಪಕ್ಷಕ್ಕೆ ಹೋಗಲು ಬೇರೆ ವಾಹನಗಳಿಲ್ಲದೆ ಪೊಲೀಸ್ ಜೀಪ್ ಕರೆಸಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ತರುವೆ ಗ್ರಾಮದಲ್ಲಿ ನಡೆದಿದೆ. 

ಹೌದು, ಪಿತೃ ಪಕ್ಷದ ಊಟಕ್ಕೆ ಮಾವನ ಮನೆಗೆ ಹೋಗಲು ಯಾವುದೇ ವಾಹನ ಸಿಗದಿದ್ದಕ್ಕೆ ಉಪಾಯ ಹೂಡಿರುವ ಭೂಪನೊಬ್ಬ 112 ಗೆ ಫೋನ್ ಮಾಡಿ ಸರ್... ಗಲಾಟೆ ಬೇಗ ಬನ್ನಿ ಅಂತ ಮನವಿ ಮಾಡಿದ್ದಾನೆ. ಕರೆ ನಂಬಿ ಬಂದ ಪೊಲೀಸರಿಗೆ ಶಾಕ್ ಆಗಿತ್ತು. 

ಇದನ್ನೂ ಓದಿ- ಸಿಬಿಐ ಕಣ್ಣಿಗೆ ಬಟ್ಟೆ ಕಟ್ಟಿದ ರಾಜ್ಯ ಸರ್ಕಾರ, ಮುಡಾ ನಡೆ ನಿಗೂಢ

ವಾಸ್ತವವಾಗಿ, ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿ ಗಲಾಟೆ ಆಗುತ್ತಿದೆ ಬೇಗ ಬನ್ನಿ ಸಾರ್... ಎಂದು ಕರೆ ಮಾಡಿದ್ದ ಆಸಾಮಿ ಪೊಲೀಸರು ಬರುತ್ತಿದ್ದಂತೆ ಮಾವನ ಮನೆಗೆ ಡ್ರಾಪ್ ಮಾಡುವಂತೆ ಮನವಿ ಮಾಡಿದ್ದಾನೆ. 

ಇನ್ನೂ ತನ್ನ ಈ ಕೃತ್ಯಕ್ಕೆ ಕಾರಣವನ್ನೂ ತಿಳಿಸಿರುವ ಈತ ಗಾಡಿ ಯಾವೂ ಸಿಗ್ತಾ ಇಲ್ಲ... ಮಳೆ ಬೇರೆ, ಪಲ್ಗುಣಿ ಗ್ರಾಮಕ್ಕೆ ಡ್ರಾಪ್ ಮಾಡಿ ಎಂದು ರಿಕ್ವೆಸ್ಟ್ ಮಾಡಿದ್ದಾನೆ. ಈ ವ್ಯಕ್ತಿಯ ಅವಾಂತಕ ಕಂಡು ಒಂದು ಕ್ಷಣ ಪೊಲೀಸರಿಗೆ ಬೈಯ್ಯಬೇಕೋ... ನಗಬೇಕೋ... ಎಂದು ತಿಳಿದಿಲ್ಲದಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ತರುವೆ ಗ್ರಾಮದ ಅಶೋಕ್ ಎಂಬ ವ್ಯಕ್ತಿಯೇ ಈ ಭೂಪ. 

ಇದನ್ನೂ ಓದಿ- ಮೋದಿ ಅವರತ್ತ ಬೆರಳು ತೋರಿ ನಗೆಪಾಟಲಿಗೆ ಗುರಿಯಾಗ್ಬೇಡಿ, ಸುಮ್ಮನೆ ರಾಜೀನಾಮೆ ನೀಡಿ..!

ಇನ್ಯಾವತ್ತೂ ಪೊಲೀಸರಿಗೆ ಈ ರೀತಿ ಸುಳ್ಳು ಕರೆ ಮಾಡದಂತೆ ಬುದ್ದಿವಾದ ಹೇಳಿರುಯ ಪೊಲೀಸರು ಕೊನೆಗೆ ತಾವೇ ಲಾರಿಯನ್ನು ಅಡ್ಡಹಾಕಿ  ಆ ವ್ಯಕ್ತಿಯನ್ನ ಮಾವನ ಮನೆಗೆ ಕಳುಹಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News