ನವದೆಹಲಿ: ಅತ್ಯಾಚಾರದ ಆರೋಪ ಹೊಂದಿರುವ ಸ್ವಯಂಘೋಷಿತ ಮಾನವ ದಾಟಿ ಮಹಾರಾಜ್ ರನ್ನು ಇನ್ನು ಏಕೆ ಬಂಧಿಸಿಲ್ಲ ಎಂದು ಕೋರ್ಟ್ ಪೋಲಿಸರನ್ನು ಪ್ರಶ್ನಿಸಿದೆ.
ಡಿಸಿಪಿ ಕ್ರೈಂ ಬ್ರಾಂಚ್ ಗೆ ಆದೇಶಿಸಿರುವ ನ್ಯಾಯಾಲಯ ಈಗಾಗಲೇ ಅತ್ಯಾಚಾರದ ವಿಚಾರವಾಗಿ ದಾಟಿ ಮಹಾರಾಜ್ ಮೇಲೆ ಪ್ರಕರಣ ದಾಖಲಾಗಿದ್ದರು ಯಾಕೆ ಅವರನ್ನು ಬಂಧಿಸಿಲ್ಲ ಎಂದು ಪ್ರಶ್ನಿಸಿದೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದ ಪೂರ್ಣ ವರದಿಯನ್ನು ಒಂದು ವಾರದೊಳಗೆ ಸಲ್ಲಿಸಬೇಕು ಎಂದು ಅದು ತಿಳಿಸಿದೆ.
ಅಲ್ಲದೆ ಈ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಬೇಕೆಂದು ಹೇಳಿದೆ. ಈಗ ದಾಟಿ ಮಹಾರಾಜ್ ಪ್ರಕರಣದ ವಿಚಾರವಾಗಿ ಮುಂದಿನ ವಿಚಾರಣೆ ಜುಲೈ 3 ರಂದು ನಡೆಯಲಿದೆ ಎಂದು ತಿಳಿದುಬಂದಿದೆ.