ದೆಹಲಿ ವಿವಿ ಕುಲಪತಿಯನ್ನು ಸಸ್ಪೆಂಡ್ ಗೊಳಿಸಿದ ರಾಷ್ಟ್ರಪತಿ ಕೊವಿಂದ್

ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಆದೇಶದ ಮೇರೆಗೆ ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿಯನ್ನು ಅಮಾನತುಗೊಳಿಸಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಬುಧವಾರ ತಿಳಿಸಿದೆ.

Last Updated : Oct 28, 2020, 06:12 PM IST
ದೆಹಲಿ ವಿವಿ ಕುಲಪತಿಯನ್ನು ಸಸ್ಪೆಂಡ್ ಗೊಳಿಸಿದ ರಾಷ್ಟ್ರಪತಿ ಕೊವಿಂದ್ title=
Photo Courtesy: www.du.ac.in

ನವದೆಹಲಿ: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಆದೇಶದ ಮೇರೆಗೆ ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿಯನ್ನು ಅಮಾನತುಗೊಳಿಸಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಬುಧವಾರ ತಿಳಿಸಿದೆ.

ಕಳೆದ ವಾರ ವಿಶ್ವವಿದ್ಯಾಲಯಕ್ಕೆ ನೇಮಕಾತಿ ವಿವಾದದ ನಂತರ ಯೋಗೇಶ್ ತ್ಯಾಗಿ ವಿರುದ್ಧ ವಿಚಾರಣೆಗೆ ಅವಕಾಶ ನೀಡುವಂತೆ ಶಿಕ್ಷಣ ಸಚಿವಾಲಯ ರಾಷ್ಟ್ರಪತಿಗೆ ಸೂಚಿಸಿತ್ತು. ಮಂಗಳವಾರ ರಾತ್ರಿ, ಸಚಿವಾಲಯವು ದುಷ್ಕೃತ್ಯ ಮತ್ತು ಕರ್ತವ್ಯವನ್ನು ದುರುಪಯೋಗಪಡಿಸಿಕೊಂಡ ಆರೋಪ ಹೊತ್ತಿರುವ ಉಪಕುಲಪತಿಯ ವಿರುದ್ಧ ವಿಚಾರಣೆಗೆ ರಾಷ್ಟ್ರಪತಿಗಳು ಅವಕಾಶ ನೀಡಿದರು.

ವಿವಾದಾತ್ಮಕ 3 ಕೃಷಿ ಮಸೂದೆಗಳಿಗೆ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅಂಕಿತ

'ಭಾರತದ ರಾಷ್ಟ್ರಪತಿಗಳು ವಿಶ್ವವಿದ್ಯಾನಿಲಯದ ಸಂದರ್ಶಕರಾಗಿ, ದಾಖಲೆಯಲ್ಲಿ ಲಭ್ಯವಿರುವ ಸಂಗತಿಗಳು ಮತ್ತು ಸಾಮಗ್ರಿಗಳನ್ನು ಪರಿಗಣಿಸಿ, ಕರ್ತವ್ಯಗಳಲ್ಲಿ  ಮತ್ತು ಅವರ ವಿರುದ್ಧ ಕರ್ತವ್ಯಕ್ಕೆ ಬದ್ಧತೆ ಮತ್ತು ಭಕ್ತಿಯ ಕೊರತೆಯ ಆರೋಪಗಳ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ" ಸರ್ಕಾರದ ಹೇಳಿಕೆ ತಿಳಿಸಿದೆ.

ರಾಷ್ಟ್ರಪತಿ ಕೊವಿಂದ್ ವಿಮಾನವು ಪಾಕ್ ವಾಯು ಪ್ರದೇಶದ ಮೇಲೆ ಹಾರುವಂತಿಲ್ಲ!

ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ಗೆ ಬರೆದ ಪತ್ರದಲ್ಲಿ, ಶಿಕ್ಷಣ ಸಚಿವಾಲಯವು ಉಪಕುಲಪತಿಯನ್ನು ಕಚೇರಿಯಲ್ಲಿದ್ದಾಗ ತನಿಖೆಯ ಮೇಲೆ ಪ್ರಭಾವ ಬೀರಬಹುದಾದ ಕಾರಣ ವಿಚಾರಣೆ ಪೂರ್ಣಗೊಳ್ಳುವವರೆಗೆ ಅಮಾನತುಗೊಳಿಸಲಾಗಿದೆ ಎಂದು ಹೇಳಿದರು. ಸದ್ಯಕ್ಕೆ ಪ್ರೊಫೆಸರ್ ಪಿಸಿ ಜೋಶಿ  ಉಪಕುಲಪತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

 

Trending News